



















ದ್ವಾರಕಾ ನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ
ದಿನಾಂಕ 02/03/2025 ಬೆಳಿಗ್ಗೆ 11.00 ಗಂಟೆಗೆ ಸಂಘದ ಕಛೇರಿ ಉದ್ಘಾಟನೆಯನ್ನು ಶ್ರೀ ತಮ್ಮೇಶಗೌಡರು ಮತ್ತು ನಾಮಫಲಕ ಅನಾವರಣವನ್ನು ಶ್ರೀ ಆನಂದ ಮಾಸ್ಟರ್ ಅವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ತಮ್ಮೇಶ ಗೌಡ್ರು ಮಾತನಾಡಿ ಈ ವಾಸಿಸುವ ಎಲ್ಲಾ ಪ್ರಜೆಗಳು ಈ ಸಂಘವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತೀರಿ ತಾವೆಲ್ಲರೂ ಇದು ನಮ್ಮ ಊರು ಎಂದು ಭಾವಿಸಬೇಕು ನೀವೆಲ್ಲರೂ ವಾಸಿಸುವ ಜಾಗವೇ ಬೇರೆ ನಮ್ಮ ಊರೆ ಬೇರೆ ಎಂದುಕೊಂಡು ಜೀವನ ಮಾಡುತ್ತಿದ್ದೀರಾ ದಯವಿಟ್ಟು ಇಲ್ಲಿಯೂ ಸಹ ನಮ್ಮ ಮನೆ ನಮ್ಮ ಊರು ಎಂದು ಭಾವಿಸಿ ನಾನು ನಿಮ್ಮ ಜೊತೆಗೆ ಸದಾ ಇರುತ್ತೇನೆ ನಿಮ್ಮ ಕಷ್ಟಗಳಿಗೆ ನಾನು ಸ್ಪಂದಿಸುತ್ತೇನೆ. ಇಲ್ಲಿ ಕಾರ್ಯಕ್ರಮ ಯೋಜನೆ ಮಾಡಿ ಭಾಗವಹಿಸಿದಂತಹ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ ಮತ್ತು ನಾನು ಎಂ ಪಿ ಕೋಟಾದಡಿ ಬೋರ್ವೆಲ್ ಮತ್ತು ವಾಟರ್ ಫಿಲ್ಟರ್ ಹಾಕಿಸಿಕೊಡುವುದಾಗಿ ಹೇಳಿದರು ಹಾಗು ತಮ್ಮ ಕೆಲಸಗಳಿಗೆ ನನ್ನ ಸಹಕಾರ ಇರುತ್ತದೆ ಎಂದು ಹೇಳಿದರು ಆನಂದ ಮಾಸ್ಟರ್ ಅವರು ಸಹ ಈ ಸಂಘವನ್ನು ಚೆನ್ನಾಗಿ ನಡೆಸಿ ಜನರ ಕಷ್ಟಗಳಿಗೆ ಸ್ಪಂದಿಸಿ ಇನ್ನು ಅನೇಕ ಹಿತವಚನಗಳನ್ನು ನುಡಿದರು ಅಧ್ಯಕ್ಷರು ಕಾರ್ಯದರ್ಶಿಗಳು ಇನ್ನೂ ಅನೇಕರು ವಿಚಾರಗಳನ್ನು ಸಂಘದವರ ಮುಂದೆ ಇಟ್ಟು ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹರಿಸಲು ಎಲ್ಲರೂ ಒಗ್ಗಟ್ಟಾಗಿ ಚಟುವಟಿಕೆಗಳು ಈ ಭಾಗವಹಿಸಿ ಮುಂದುವರಿಯೋಣ ಎಂದು ಮಾತನಾಡಿದರು ಹಾಗೂ.ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಮರೇಶ್ ಅವರು ಮೂಲಭೂತ ಅವಶ್ಯಕತೆಗಳ ಬಗ್ಗೆ ಮಾತಾಡುತ್ತಾ ದ್ವಾರಕನಗರದಲ್ಲಿ ನೀರು,ರಸ್ತೆ ಅಭಿವೃದ್ಧಿ ಬಗ್ಗೆ ಹಾಗು ಸರಕಾರಿ ಜಾಗದಲ್ಲಿ ದ್ವಾರಕಾ ನಗರ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಆನಂದ ರವರು ಮಾತನಾಡಿ ಈ ಕಾರ್ಯಕ್ರಮ ಯಶವಿಗೊಳಿಸಲು ನನಗೆ ಸಂಪೂರ್ಣ ಸಹಕಾರ ನೀಡಿದ ನನ್ನ ಎಲ್ಲ ಮಾತಿಗೆ ಒಗಟು ನನಗಿಂತ ಹಿರಿಯರು ಕಿರಿಯರಿಲ್ಲಿ ಏನು ಹೇಳಿದರೂ ನಾವು ನಿಮ್ಮ ಜೊತೆ ಇರುತ್ತೇವೆ ಎಂದು. ನನ್ನ ಆತ್ಮೀಯ ಮಿತ್ರರು ಶ್ರೀಯುತರುಗಳಾದ. M ಮುನಿಯಪ್ಪ ಉಪಾಧ್ಯಕ್ಷರು ಅಮರೇಶ್ M ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ರೆಡ್ಡಿ ಕಾನೂನು ಸಲಹೆಗಾರರು ನಾಗೇಶ ಎಲ್ ಸಹ ಕಾರ್ಯದರ್ಶಿ ಮೆಟುಕೂರು ಪವನ್ ಸಂಘಟನಾ ಕಾರ್ಯದರ್ಶಿ ಜಿ ಶ್ರೀನಿವಾಸರಾವ್ ಉಪಾಧ್ಯಕ್ಷರು ಆರ್ ಮಲ್ಲಿಕಾರ್ಜುನ್ ಗೌಡ ಖಜಾಂಚಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಮೇಶ – ಸುರೇಶ್ ಕೆ -ಜಯರಾಮಯ್ಯ ಸಂತೋಷ್ ಮ್ಯಾಥ್ಯೂ -ಶ್ರೀಮತಿ ರಮಾದೇವಿ ಶ್ರೀಮತಿ ದೇವಿಭಾಯಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಎಲ್ಲರಿಗೂ ನನ್ನ ಅನಂತ ಅನಂತ ಧನ್ಯವಾದಗಳು. ತಿಳಿಸಿದರು. ಕಾರ್ಯಕ್ರಮದಲ್ಲಿ ಅನೇಕ ಗ್ರಾಮಸ್ಥರು ಭಾಗವಹಿಸಿದರು
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
ಪಬ್ಲಿಕ್ ಪವರ್
ಆರ್ ಹನುಮಂತು
9845085793. 7349337989