3 ಕೋಟಿ ರು. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿಶ್ವನಾಥ್ ಚಾಲನೆ :

ಯಲಹಂಕ : ಐತಿಹಾಸಿಕ ಯಲಹಂಕ ಕೆರೆ ಆವರಣದಲ್ಲಿ ವಾಕಿಂಗ್ ಟ್ರ್ಯಾಕ್, ಫೆನ್ಸಿಂಗ್ ಸೇರಿದಂತೆ 3 ಕೋಟಿ ರು. ಅಂದಾಜು ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಗುರುವಾರ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ ‘ಯಲಹಂಕ ಕೆರೆ ಐತಿಹಾಸಿಕ ಮಹತ್ವವುಳ್ಳ ಬೃಹತ್ ಕೆರೆಯಾಗಿದ್ದು, ಇದುವರೆಗೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದುವರಿದ ಭಾಗವಾಗಿ ಇಂದು 3 ಕೋಟಿ ರು.ವೆಚ್ಚದಲ್ಲಿ ಉಳಿದ ವಾಕಿಂಗ್ ಟ್ರ್ಯಾಕ್, ಫೆನ್ಸಿಂಗ್ ಕಾಮಗಾರಿ ಸೇರಿದಂತೆ ಬಾಕಿ ಇರುವ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಬೃಹತ್ತಾಗಿರುವ ಯಲಹಂಕ ಕೆರೆಗೆ ಸರ್ಕಾರ ನೀಡುವ ಅಲ್ಪ ಅನುದಾನ ಬಕಾಸುರನ ಬಾಯಿಗೆ ಅರೆಕಾಸಿನ‌ ಮಜ್ಜಿಗೆ ಎಂಬಂತಾಗಿದೆ. ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕವಾಗಿ ಅನುದಾನ ನೀಡದಿದ್ದರೆ, ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಪ್ರಯೋಜನಕ್ಕೆ ಬಾರದಂತಾಗುತ್ತವೆ, ಈ ದಿಸೆಯಲ್ಲಿ ಸರ್ಕಾರ ಅನಗತ್ಯ ಯೋಜನೆಗಳು ಮತ್ತು ವೆಚ್ಚಗಳಿಗೆ ಕಡಿವಾಣ ಹಾಕಿ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಜಲಸಿರಿ ಪ್ರತಿಷ್ಠಾನದ ಅಧ್ಯಕ್ಷ ಮು.ಕೃಷ್ಣಮೂರ್ತಿ, ಮಾಜಿ ಬಿಬಿಎಂಪಿ ಸದಸ್ಯರಾದ ವೆಂಕಟಾಲ ಕೆಂಪೇಗೌಡ, ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿ ಈಶ್ವರ್, ಚೌಡೇಶ್ವರಿ ವಾರ್ಡ್ ಬಿಜೆಪಿ ಅಧ್ಯಕ್ಷ ವಿ.ವಿ.ರಾಮಮೂರ್ತಿ, ಕೆಂಪೇಗೌಡ ವಾರ್ಡ್ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ,ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ಸಾಮಾಜಿಕ ಜಾಲ ತಾಣ ಪ್ರಕೋಷ್ಠದ ಅಧ್ಯಕ್ಷ ದಾಮೋದರ್, ಬಿಜೆಪಿ ಮುಖಂಡರಾದಜಗದೀಶ್, ದಶರತ್, ಪವನ್, ಸಂತೋಷ್, ಜಯಣ್ಣ, ಧನು, ರಾಘವೇಂದ್ರ, ಮುನಿರಾಜು, ಬಿ.ಸಿ.ಮಂಜು, ಸುನಿಲ್, ಮಹಿಳಾ ಮುಖಂಡರಾದ ಲತಾ ಚಂದ್ರಶೇಖರ್, ಪ್ರಭಾ, ಗೌರಿ, ಅನುಪಮಾ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *