





‘ಎಸ್ ಆರ್ ಡೈಲಿ ನ್ಯೂಟ್ರಿಷನ್’ ಉದ್ಘಾಟನೆ :
ಅತ್ಯಾಧುನಿಕ ಮಾಂಸಾಹಾರ ವ್ಯಾಪಾರ ಮಳಿಗೆ ಉದ್ಘಾಟಿಸಿದ ಎಸ್ ಆರ್ ವಿಶ್ವನಾಥ್
ಯಲಹಂಕ : ಅತ್ಯಾಧುನಿಕ ಶೈಲಿಯ ಉಪಕರಣಗಳನ್ನು ಬಳಸಿ, ಶುದ್ಧ ಮತ್ತು ತಾಜಾ ಮಾಂಸ ವ್ಯಾಪಾರದ ಮೂಲಕ ನಗರದಲ್ಲಿ ಇತ್ತೀಚೆಗೆ ಜನಮನ್ನಣೆ ಗಳಿಸಿಕೊಳ್ಳುತ್ತಿರುವ ‘ಎಸ್ ಆರ್ ಡೈಲಿ ನ್ಯುಟ್ರಿಷನ್’ ನ 12ನೇ ಮಳಿಗೆಯನ್ನು ಶಾಸಕ ಎಸ್ ಆರ್ ವಿಶ್ವನಾಥ್ ಶುಕ್ರವಾರ ಸಿಂಗನಾಯಕನಹಳ್ಳಿ ಯಲ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಎಸ್ ಆರ್ ಡೈಲಿ ನ್ಯೂಟ್ರಿಷನ್’ ಉದ್ಘಾಟನೆಯ ಹಿಂದೆ ವಿದ್ಯಾವಂತ ಯುವಕನೊಬ್ಬ ಪರಿಶುದ್ಧತೆ, ತಾಜಾತನ ಮತ್ತು ಕಡಿಮೆ ದರದ ಭರವಸೆಯೊಂದಿಗೆ ಆಹಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಹೆಜ್ಜೆ ಇಟ್ಟಿರುವ ನಿದರ್ಶನವಿದೆ. ವಿದ್ಯಾವಂತರೆಂದರೆ ಐಟಿ, ಬಿಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ನಾಜೂಕಾಗಿರುವ ಯುವಕರು ಕಣ್ಮುಂದೆ ಬರುತ್ತಾರೆ, ಆದರೆ ಅದಕ್ಕೆ ವ್ಯತಿರಿಕ್ತ ಎಂಬಂತೆ ವಿದ್ಯಾವಂತನಾಗಿ, ಪ್ರಾಪಂಚಿಕ ಜ್ಞಾನವನ್ನು ಚೆನ್ನಾಗಿಯೇ ಅರಿತಿರುವ ಎಸ್ ಆರ್ ನ್ಯೂಟ್ರಿಷನ್ ನ ಮಾಲೀಕ ರಾಜೇಶ್ ರೆಡ್ಡಿ ತಮ್ಮ ತಂದೆ ಶಿವಶಂಕರ್ ಅವರು ಕುಕ್ಕುಟ ಉದ್ಯಮದಲ್ಲಿ ಗಳಿಸಿರುವ ಖ್ಯಾತಿ ಮತ್ತು ಅನುಭವವನ್ನು ಮೈಗೂಡಿಸಿಕೊಂಡು, ತಂದೆ ಸಾಗಿ ಬಂದ ದಾರಿಯಲ್ಲಿ ನಡೆಯಲು ಮುಂದಾಗಿರುವುದು ಸಂತೋಷದ ಸಂಗತಿ, ಮಾಂಸಾಹಾರ ಕ್ಷೇತ್ರದಲ್ಲಿ ಶುದ್ಧತೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಿ, ಆರಂಭಿಸಿರುವ ಎಸ್ ಆರ್ ನ್ಯೂಟ್ರಿಷನ್ ಉತ್ತಮ ಸೇವೆಯೊಂದಿಗೆ ಮನೆಮಾತಾಗಲಿ, ರೈತರನ್ನು ಉತ್ತೇಜಿಸಿ, ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯ, ಅಂತೆಯೇ ನಮ್ಮದೇ ಭಾಗದ ರೈತ ಯುವಕ ಆರಂಭಿಸಿರುವ ಮಾಂಸಾಹಾರ ಕ್ಷೇತ್ರದ ಈ ಸೇವೆಯಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಎಸ್ ಆರ್ ನ್ಯೂಟ್ರಿಷನ್ ಸಂಸ್ಥೆಯ ಮಾಲೀಕ ಆರ್.ಎಸ್.ರಾಜೇಶ್ ರೆಡ್ಡಿ ಮಾತನಾಡಿ ‘ಸಿಂಗನಾಯಕನಹಳ್ಳಿ ಯಲ್ಲಿ ಆರಂಭಿಸಿರು ಈ ಶಾಖೆ ನಮ್ಮ 12ನೇ ಶಾಖೆಯಾಗಿದ್ದು, ಗ್ರಾಹಕರಿಗೆ ಕಡಿಮೆ ದರದಲ್ಲಿ ಒಳ್ಳೆಯ ಆಹಾರ ನೀಡಬೇಕೆಂಬ ಒತ್ತಾಸೆಯಿಂದ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಮ್ಮದೇ ಫಾರಂ ನಲ್ಲಿ ಸಾಕಾಣಿಕೆ ಮಾಡಿರುವ ತಾಜಾ ಕೋಳಿ ಮತ್ತು ಕುರಿಯನ್ನು ಸ್ವಚ್ಛ ಮತ್ತು ಪರಿಶುದ್ಧ ರೀತಿಯಲ್ಲಿ ಮಾರಾಟ ಮಾಡುವುದು ನಮ್ಮ ಧ್ಯೇಯವಾಗಿದೆ. ಸದ್ಯಕ್ಕೆ ಕೋಳಿ, ಕುರಿ ಮತ್ತು ಸಮುದ್ರ ಆಹಾರ ಮಾರಾಟ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸುವ ಹೆಬ್ಬಯಕೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಸ್.ಎನ್. ರಾಜಣ್ಣ, ದಿಬ್ಬೂರು ಜಯಣ್ಣ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಆವಲಹಳ್ಳಿ ಕೇಶವಮೂರ್ತಿ, ಎಸ್ ಆರ್ ನ್ಯೂಟ್ರಿಷನ್ ನ ಮಾಲೀಕರಾದ ಆರ್.ಸಿ.ಶಿವಶಂಕರ್, ಯಲಹಂಕ ಗ್ರಾ.ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಿಂಗನಾಯಕನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ರಾಜಾನುಕುಂಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ಸಿಂಗನಾಯಕನಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎಸ್.ಜಿ.ಪ್ರಶಾಂತ್ ರೆಡ್ಡಿ, ಬಿಜೆಪಿ ಮುಖಂಡರಾದ ಮುನಿರಾಮರೆಡ್ಡಿ, ರಾಮಚಂದ್ರರೆಡ್ಡಿ, ಮುನಿಕೃಷ್ಣ, ಕೆ.ಬಾಬು ಸೇರಿದಂತೆ ಇನ್ನಿತರರಿದ್ದರು.