ಈ ಜಗತ್ತಿಗೊಂದು ಆದಿ ಉಂಟೆ.? ಖಂಡಿತ ಇಲ್ಲ. ಇದು ಅನಾದಿ. ಕೋಟಿ ಕೋಟಿ ವರ್ಷಗಳ ಹಿಂದೆ ರೂಪಾಂತರಗೊಂಡು ನಿರಂತರ ಬದಲಾಗುತ್ತಾ ಇರುವ ಈ ವಿಶ್ವಕ್ಕೆ ಆದಿಯಲ್ಲಿದೆ. ಅಂತ್ಯವೆಲ್ಲಿದೆ. ಇದು ಬದಲಾಗುತ್ತಾ ಇದೆ. ಇಷ್ಟೊಂದು ಬೃಹತ್ ವಿಶ್ವದಲ್ಲಿ ಆಗುವ ಬದಲಾವಣೆಗಳು ನಮಗೆ ಎಷ್ಟು ನಿಧಾನವಾಗಿ ಗೋಚರವಾಗುತ್ತದೆ ಎಂದರೆ, ನಮಗೆ ಈ ಬದಲಾವಣೆಗಳು ಅರಿವಿಗೆ ಬರುವುದಿಲ್ಲ. ಸಮುದ್ರದ ನೀರಿನಲ್ಲಿ ಅಲೆಗಳೇಳುತ್ತವೆ. ಆದರೆ ಯಾವ ಅಲೆ ಯಾವ ಸಮಯಕ್ಕೆ ಏಳುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. . ಹಾಗಿರುವಾಗ ಅದರೊಳಗೆ ಮೊದಲ ಅಲೆ ಎಂದು ಎದ್ದಿತು ಎಂದು ಹೇಳಲು ಆಗುತ್ತದೆಯೇ.? ಇನ್ನು ಅದೇ ರೀತಿ ಈ ಭೂಮಿ ಗಾಳಿ ಮತ್ತು ಆಕಾಶದಲ್ಲಿ ನಡೆಯುವ ಬದಲಾವಣೆಯ ಮೂಲವನ್ನು ಹುಡುಕಲು ಸಾಧ್ಯವೇ ಇಲ್ಲ. ಆದರೆ ಒಂದು ವಿಚಾರ ಗಮನಿಸಬೇಕಾದದ್ದು ಏನೆಂದರೆ, ಎಲ್ಲ ಚಲನೆ ಅಥವಾ ಬದಲಾವಣೆಗೆ ಹೇತುವಾದ ಆ ಬೃಹತ್ ಚೇತನ ಸ್ವರೂಪನಾದ ಪರಮಾತ್ಮನೇ ಎಲ್ಲಕ್ಕೂ ಕಾರಣನು. ಆ ಚೇತನವಿಲ್ಲದೆ ಇದ್ದರೆ ಏನೂ ನಡೆಯುವುದಿಲ್ಲ. ” ತೃಣಮಪಿ ನ ಚಲತಿ ತೆನ ವಿನಾ” ಎಂದು ಇದನ್ನೇ ಆದಿ ಶಂಕರರು ಹೇಳಿದ್ದು. ಅವನ ಸಂಕಲ್ಪ ಎಂದಾಯಿತೋ, ಜಗತ್ಸೃಷ್ಟಿಯ ಪ್ರಕ್ರಿಯೆ ಎಂದು ಶುರು ಮಾಡಿದನೋ ಯಾರಿಗೆ ಗೊತ್ತು. ಇಲ್ಲಿ ಬದಲಾಗುವುದು ಕೇವಲ ಜಗತ್ತಲ್ಲ. ಜಗತ್ತಿನಲ್ಲಿರುವ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ವಾಚಕರೆ ನೋಡಿ ಹಿಂದಿನದಾವುದೂ ಇಂದು ಅದೇ ರೂಪದಲ್ಲಿ ಇಲ್ಲ. ಕಲ್ಲು ಬೆಟ್ಟ ಗುಡ್ಡ ಮರಗಳು ಇಂದು ರಸ್ತೆ, ಮನೆ, ಕಿಟಕಿ, ಬಾಗಿಲುಗಳಾಗಿವೆ. ಶುಧ್ಧ ವಾಯು ಮತ್ತು ನೀರುಗಳು ಕಲುಶಿತವಾಗಿವೆ. ಕಾಡು ಕರಗಿ ನಾಡಾಗಿದೆ. ಕಡಿಮೆ ಇದ್ದ ಜನ ಹೆಚ್ಚಾಗಿದ್ದಾರೆ. ಸಹೃದಯತೆಗೆ ಬದಲಾಗಿ ಅಹಂಕಾರ ಸ್ವಾರ್ಥಗಳು ತುಂಬಿಕೊಂಡಿವೆ. ಹೀಗೆ ಬದಲಾಗುವ ಈ ಜಗತ್ತು ಮತ್ತು ಅದರ ಒಳಗುಟ್ಟುಗಳನ್ನು ಅರಿಯಲು ಸಾಧ್ಯವಿಲ್ಲ. ನಾವು ಏನು ಮಾಡಬಹುದೆಂದರೆ, ನಮ್ಮಲ್ಲಿರುವ ವಿವೇಕವನ್ನು ಉಪಯೋಗಿಸಿ, ಸಾಧ್ಯವಾದಷ್ಟು ನಮ್ಮ ಮತ್ತು ನಮ್ಮ ಸುತ್ತಲಿನವರ ಬದುಕು ಹಸನಾಗಿಸಲು ಪ್ರಯತ್ನಿಸಬಹುದು.ಆದರೆ ಒಂದು ವಿಚಾರ ಗಮನಿಸಬೇಕಾದದ್ದು ಏನೆಂದರೆ, ಎಲ್ಲ ಚಲನೆ ಅಥವಾ ಬದಲಾವಣೆಗೆ ಹೇತುವಾದ ಆ ಬೃಹತ್ ಚೇತನ ಸ್ವರೂಪನಾದ ಪರಮಾತ್ಮನೇ ಎಲ್ಲಕ್ಕೂ ಕಾರಣನು. ಆ ಚೇತನವಿಲ್ಲದೆ ಇದ್ದರೆ ಏನೂ ನಡೆಯುವುದಿಲ್ಲ. ” ತೃಣಮಪಿ ನ ಚಲತಿ ತೆನ ವಿನಾ” ಎಂದು ಇದನ್ನೇ ಆದಿ ಶಂಕರರು ಹೇಳಿದ್ದು. ಅವನ ಸಂಕಲ್ಪ ಎಂದಾಯಿತೋ, ಜಗತ್ಸೃಷ್ಟಿಯ ಪ್ರಕ್ರಿಯೆ ಎಂದು ಶುರು ಮಾಡಿದನೋ ಯಾರಿಗೆ ಗೊತ್ತು. ಇಲ್ಲಿ ಬದಲಾಗುವುದು ಕೇವಲ ಜಗತ್ತಲ್ಲ. ಜಗತ್ತಿನಲ್ಲಿರುವ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ವಾಚಕರೆ ನೋಡಿ ಹಿಂದಿನದಾವುದೂ ಇಂದು ಅದೇ ರೂಪದಲ್ಲಿ ಇಲ್ಲ. ಕಲ್ಲು ಬೆಟ್ಟ ಗುಡ್ಡ ಮರಗಳು ಇಂದು ರಸ್ತೆ, ಮನೆ, ಕಿಟಕಿ, ಬಾಗಿಲುಗಳಾಗಿವೆ. ಶುಧ್ಧ ವಾಯು ಮತ್ತು ನೀರುಗಳು ಕಲುಶಿತವಾಗಿವೆ. ಕಾಡು ಕರಗಿ ನಾಡಾಗಿದೆ. ಕಡಿಮೆ ಇದ್ದ ಜನ ಹೆಚ್ಚಾಗಿದ್ದಾರೆ. ಸಹೃದಯತೆಗೆ ಬದಲಾಗಿ ಅಹಂಕಾರ ಸ್ವಾರ್ಥಗಳು ತುಂಬಿಕೊಂಡಿವೆ. ಹೀಗೆ ಬದಲಾಗುವ ಈ ಜಗತ್ತು ಮತ್ತು ಅದರ ಒಳಗುಟ್ಟುಗಳನ್ನು ಅರಿಯಲು ಸಾಧ್ಯವಿಲ್ಲ. ನಾವು ಏನು ಮಾಡಬಹುದೆಂದರೆ, ನಮ್ಮಲ್ಲಿರುವ ವಿವೇಕವನ್ನು ಉಪಯೋಗಿಸಿ, ಸಾಧ್ಯವಾದಷ್ಟು ನಮ್ಮ ಮತ್ತು ನಮ್ಮ ಸುತ್ತಲಿನವರ ಬದುಕು ಹಸನಾಗಿಸಲು ಪ್ರಯತ್ನಿಸಬಹುದು.