ಯಲಹಂಕ ಕೆರೆ ಆವರಣದಲ್ಲಿ ಹೈಟೆಕ್ ಶೌಚಾಲಯ ಉದ್ಘಾಟನೆ :
ಯಲಹಂಕ : ಯಲಹಂಕ ಐತಿಹಾಸಿಕ ಕೆರೆಯ ಆವರಣದಲ್ಲಿ ‘ಶುಭ್ರ ಬೆಂಗಳೂರು’ ಅನುದಾನದ ಅಡಿಯಲ್ಲಿ 30 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಪ್ರೀಕಾಸ್ಟ್ ಹೈಟೆಕ್  ಶೌಚಾಲಯವನ್ನು ಶಾಸಕ ಎಸ್ ಆರ್ ವಿಶ್ವನಾಥ್ ಸೋಮವಾರ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ‘ಶುಭ್ರ ಬೆಂಗಳೂರು ಅನುದಾನದ ಅಡಿಯಲ್ಲಿ 30 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಹೈಟೆಕ್ ಶೌಚಾಲಯವನ್ಮು ಐತಿಹಾಸಿಕ ಯಲಹಂಕ ಕೆರೆ ಆವರಣದಲ್ಲಿ ಇಂದು ಲೋಕಾರ್ಪಣೆ ಮಾಡಲಾಗಿದ್ದು, ಇದರೊಂದಿಗೆ ಯಲಹಂಕ ಕೆರೆ ಅಭಿವೃದ್ಧಿಗೆ ಇನ್ನೊಂದು ಸೌಕರ್ಯ ಸೇರ್ಪಡೆಯಾದಂತಾಗಿದೆ. ಕೆರೆಯ ಆವರಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಮತ್ತು ನಡಿಗೆಗೆ ಬರುವ ನಾಗರೀಕರಿಗೆ ಇದರಿಂದ ಅನುಕೂಲವಾಗಲಿದೆ. ಬೆಂಗಳೂರು ನಗರದಲ್ಲಿ ನಿರ್ಮಾಣಗೊಳ್ಳಲಿರುವ 40 ಪ್ರೀಕಾಸ್ಟ್ ಹೈಟೆಕ್ ಶೌಚಾಲಯಗಳಲ್ಲಿ ಮೊದಲು ನಿರ್ಮಾಣಗೊಂಡು ಲೋಕಾರ್ಪಣೆಯಾಗಿರುವ ಪ್ರಥಮ ಹೈಟೆಕ್ ಶೌಚಾಲಯ ಇದಾಗಿದ್ದು, ಇದೇ ಮಾದರಿಯ ಹೈಟೆಕ್ ಶೌಚಾಲಯಗಳನ್ನು  ಯಲಹಂಕ ನಗರ ವ್ಯಾಪ್ತಿಯ ಇನ್ನೂ ಹಲವೆಡೆ ನಿರ್ಮಿಸಲಾಗುವುದು. ಇದರಲ್ಲಿ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಂಗಳಮುಖಿ ಯರಿಗೆ ಪ್ರತ್ಯೇಕ ಶೌಚಾಲಯಗಳಿದ್ದು, ಆಟೋ ಫ್ಲೆಶ್ ವ್ಯವಸ್ಥೆ ಇರುವುದರಿಂದ ಸ್ವಚ್ಛತೆಗೆ ಹೆಚ್ಚು ಆಧ್ಯತೆ ಇರಲಿದೆ ಎಂದರು.
ಇದೇ ಸಂದರ್ಭದಲ್ಲಿ ‘ಜಲಸಿರಿ ಪ್ರತಿಷ್ಠಾನ’ದ ಅಧ್ಯಕ್ಷ ಮು.ಕೃಷ್ಣಮೂರ್ತಿ, ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಕೆಂಪೇಗೌಡ ವಾರ್ಡ್ 1ರ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ, ಬಿಜೆಪಿ ಮುಖಂಡರಾದ ಈಶ್ವರಪ್ಪ, ವೈ.ಎನ್.ಮಂಜುನಾಥ್, ಪಿಳ್ಳಣ್ಣ, ರೇವಣ್ಣ, ಜಗದೀಶ್, ಎನ್.ಮುನಿರಾಜು, ನರೇಂದ್ರಬಾಬು, ಗೋಪಿ, ಶೇಖರ್ ಪೂಜಾರಿ, ಜಯಣ್ಣ, ದಶರಥ್, ವೀರಭದ್ರಪ್ಪ ಕೆ.ಆರ್., ರಘು, ವೈ.ಕೆ‌.ಚಂದ್ರಶೇಖರ್, ಬಿಬಿಎಂಪಿ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಭೀಮೇಶ್, ಅನಿಲ್, ಅಭಿಯಂತರ ರಾದ ಅರ್ಜುನ್, ಯೋಜನಾ ವಿನ್ಯಾಸಕ ರೋಹಣ್ ಡಿ. ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *