ಇ-ಖಾತಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಿ : ಲಕ್ಷ್ಮಿ ವಿ.ಹರಿ

ವಿದ್ಯಾರಣ್ಯಪುರ ವಾರ್ಡ್ ನಲ್ಲಿ ಇ-ಖಾತಾ ಅಭಿಯಾನ :

ಬ್ಯಾಟರಾಯನಪುರ : ಕಂದಾಯ ಇಲಾಖೆಯ ಕೆಲಸಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ಸುಲಭವಾಗಿ ಜನತೆಗೆ ತಲುಪುವಂತೆ ಮಾಡುವ ದಿಸೆಯಲ್ಲಿ ನಡೆಸುತ್ತಿರುವ ಇ-ಖಾತಾ ಅಭಿಯಾನದ ಸದುಪಯೋಗವನ್ನು ಹೆಚ್ಚಿನ ಜನತೆ ಪಡೆದುಕೊಳ್ಳುವಂತಾಗಬೇಕು ಎಂದು ಮಾಜಿ ಬಿಬಿಎಂಪಿ ಸದಸ್ಯೆ ಲಕ್ಷ್ಮಿ ವಿ.ಹರಿ ತಿಳಿಸಿದರು.

ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರ ವಾರ್ಡ್ ವ್ಯಾಪ್ತಿಯ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ಏರ್ಪಡಿಸಿದ್ದ ಇ-ಖಾತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಕಂದಾಯ ಸಚಿವರು, ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಕೃಷ್ಣಬೈರೇಗೌಡ ಅವರು ಹೆಚ್ಚು ಕಾಳಜಿ ವಹಿಸಿ, ನಗರ ಪ್ರದೇಶದ ವಿವಿಧ ವಾರ್ಡ್ ಗಳು, ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳನ್ನು ಸರಳೀಕೃತ ಗೊಳಿಸಿ, ಸ್ವತ್ತುಗಳ ಮಾಲೀಕರು ತಮ್ಮ ಸ್ವತಿನ ಕಂದಾಯ ಪಾವತಿಸಿ, ಸಮರ್ಪಕ ದಾಖಲೆ ಸಲ್ಲಿಸಿ‌ ಸುಲಭವಾಗಿ ಇ-ಖಾತಾ ಪಡೆಯಲು ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ, ಕಂದಾಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಇಂತಹ ಜನಪ್ರಿಯ ಯೋಜನೆಯೊಂದನ್ನು ಜಾರಿಗೆ ತಂದಿರುವ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರಿಗೆ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸಚಿವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿ‌.ಹರಿ, ಬಿ.ಸಿ.ಸುರೇಶ್, ಪ್ರವೀಣ್, ಜ್ಞಾನಪ್ರಕಾಶ್, ಶಂಕರ್ ರಾವ್, ಪ್ರಿಯ ಡೋಮ್ನಿಕ್, ಇಂದಿರಾ, ರೂಪಾ, ಪ್ರಿಯ, ಮೋಹನ, ಜಯಲಕ್ಷ್ಮಮ್ಮ, ಶೀಲಾ, ಚೈತ್ರ, ಕಾಮೇಶ್, ಮನೋಹರ್ ಸೇರಿದಂತೆ ವಿದ್ಯಾರಣ್ಯಪುರ ವಾರ್ಡ್ ನ ನಾಗರೀಕರಿದ್ದರು.

Leave a Reply

Your email address will not be published. Required fields are marked *