ಬಂಗಾರಪೇಟೆ: ಡಾ.ಬಿ.ಆರ್.ಅಂಬೇಡ್ಕರ್ರವರ ಆಶಯದಂತೆ ಶಿಕ್ಷಣವೆಂಬುವುದು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಸಮಾಜದಲ್ಲಿರುವಂತಹ ದೌರ್ಬಲ್ಯಗಳ ವಿರುದ್ದ ಘರ್ಜಿಸುವುದು, ಸಹಜ ಪ್ರಕ್ರಿಯೆ. ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ, ವಿದ್ಯೆ ಕಲಿತವನು ಈ ದೇಶದ ಆಸ್ತಿಯೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚಿಕ್ಕಅಂಕAಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಕುಳ ಗ್ರಾಮದಲ್ಲಿ, ನೂತನವಾಗಿ ನಿರ್ಮಿಸಿರುವ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಭೌದ್ದಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ನೂತನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಜ್ಞಾನವಂತರಾಗಿ ತಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸಬೇಕು. ಈ ನಿಟ್ಟಿನಲ್ಲಿ ೧೦ಲಕ್ಷ ರೂಗಳ ವೆಚ್ಚದಲ್ಲಿ ಅಗತ್ಯವಾದ ಪುಸ್ತಕಗಳನ್ನು ಆನ್ಲೈನ್ ಮೂಲಕ ಒದಗಿಸಲಾಗಿದೆ. ಆ ಮೂಲಕ ಐಎಎಸ್, ಕೆಎಎಸ್ ಇನ್ನಿತರ ಸ್ಪಾರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಈ ವೇಳೆ ಚಿಕ್ಕಅಂಕAಡಹಳ್ಳಿ ಗ್ರಾ.ಪಂ ಅಧ್ಯಕ್ಷ ಎಚ್.ಎಂ.ರವಿ ಮಾತನಾಡಿ, ಗ್ರಂಥಾಲಯಗಳು ಮಾನವನನ್ನು ಅಮೂರ್ತತೆಯಿಂದ ಮೂರ್ತತೆಯ ಕಡೆಗೆ ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನ ಕಡೆಗೆ ಕೊಂಡೊಯ್ಯುವ ಜ್ಞಾನ ಭಂಡಾರದ ಆಗರದ ಪ್ರತೀಕವಾಗಿದೆ. ಹಾಗಾಗಿ ಗ್ರಂಥಾಲಯಗಳು ಮಾನವ ಜೀವನ ಹಾಗೂ ಶಿಕ್ಷಣ ವ್ಯವಸ್ಥೆಯ, ಹೃದಯ ಮತ್ತು ಆತ್ಮದಂತೆ ಪರಸ್ಪರ ಸಂಬAಧವನ್ನು ಹೊಂದಿದೆ. ಮಾನವನ ವ್ಯಕ್ತಿಯು, ಅವನ ದೈಹಿಕ, ಮಾನಸಿಕ, ಬೌದ್ದಿಕ, ವಿಕಾಸದ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ. ಮಾನಸಿಕ ಭೌದ್ಧಿಕ ಸಾರ್ಮರ್ಥ್ಯದ ವೃದ್ಧಿಗೆ ಮತ್ತು ಜ್ಞಾನ ಸಂಪಾದನೆ ಗ್ರಂಥಾಲಯಗಳು ಸಹಕಾರಿಯಾಗಲಿದೆ ಎಂದರು.
ಗ್ರಂಥಾಲಯಗಳು ಸಂಶೋಧನೆ, ಮಾಹಿತಿ ಸಂಗ್ರಹ, ಸಂಪನ್ಮೂಲಗಳ ಕ್ರೂಢಿಕರಣಕ್ಕೆ ಸಹಕಾರಿಯಾಗಿದ್ದು, ಓದುಗರಲ್ಲಿ ಏಕಾಗ್ರತೆ ಉಂಟುಮಾಡುತ್ತಿದೆ. ಹಾಗೂ ಒಂದೇ ಸೂರಿನಡಿಯಲ್ಲಿ ಓದುಗರ ಆಸಕ್ತಿ ಅಭಿರುಚಿಗಳಿಗೆ ಅನುಗುಣವಾಗಿ ಪುಸ್ತಕ, ಪ್ರಬಂಧ, ನಿಯತಕಾಲಿಕೆ, ಕಾದಂಬರಿ, ಕಥೆ, ನಾಟಕ, ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾಗಿ ಬೇಕಾದ ಸಂಪನ್ಮೂಲಗಳನ್ನು ಒಳಗೊಂಡಿರುತ್ತದೆ. ಒಟ್ಟಾರೆಯಾಗಿ ಭೌತಿಕ ಕಟ್ಟಡದಲ್ಲಿ ಭೌದ್ದಿಕ ವಿಕಾಸಕ್ಕೆ ಬೇಕಾದ ಜ್ಞಾನ ಭಂಡಾರದ ಸಂಗ್ರಹವೇ ಗ್ರಂಥಾಲಯವಾಗಿದೆ.
ಈ ಸಂದರ್ಭದಲ್ಲಿ ಪಿಡಿಓ ಚಿತ್ರಾ, ಉಪಾಧ್ಯಕ್ಷ ಮಂಗಳಾಕ್ಷಮ್ಮ ಶ್ರೀನಿವಾಸಗೌಡ, ಸದ್ಯಸರಾದ ಹರೀಶ್ಕುಮಾರ್, ನಗೀನತಾಜ್, ಮೂರ್ತಿ, ಶಿವಶಂಕರ್, ಎಸ್.ರಾಧ, ಲಕ್ಷö್ಮಮ್ಮ, ರಾಮಪ್ಪ, ನಯಾಜ್ಪಾಷ, ಶ್ರೀರಾಮ್, ವೆಂಕಟೇಶ್ಗೌಡ, ಇತರರು ಉಪಸ್ಥಿತರಿದ್ದರು.
