ದೇವನಹಳ್ಳಿ: ತಾಲೂಕಿನ ವಿಜಯಪುರ ಮತ್ತು ಸೂಲಿಬೆಲೆ ರಸ್ತೆಯ ಬದಿಯಲ್ಲಿರುವ ಸುಮಾರು 20ಕ್ಕೂ ಹೆಚ್ಚು ಮರಗಳನ್ನು ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ತಂತಿಗಳಿಗೆ ತಗುಲುತ್ತವೆ ಎಂದು ಬುಡ ಸಮೇತ ಕತ್ತರಿಸಿ ಹಾಕಿದ್ದಾರೆ. ವಿದ್ಯುತ್ ಕಂಬಗಳು ಸುಮಾರು 20 ಅಡಿಗೂ ಹೆಚ್ಚು ಎತ್ತರವಿದ್ದು, ಕತ್ತರಿಸಿ ಹಾಕಿರುವ ಮರಗಳು ಇನ್ನೂ 15 ಅಡಿಗಳಷ್ಟು ಮಾತ್ರ ಬೆಳೆದಿವೆ. ಆದರೂ ಬೆಸ್ಕಾಂ ಅಧಿಕಾರಿಗಳು ಗಿಡಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕಿರುವುದು ಪರಿಸರ ಪ್ರೇಮಿಗಳ ಮತ್ತು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಅಲ್ಲದೆ ಕಟಾವು ಮಾಡಿದ ಮರಗಳಿಗೆ ಬದಲಾಗಿ ಅದರ ಎರಡರಷ್ಟು ಮರಗಳನ್ನು ನೆಡೆಬೇಕೆಂದು ಪರಿಸರ ಪ್ರೇಮಿ ಶ್ರೀದರ್ ಆಗ್ರಹಿಸಿದ್ದಾರೆ.

ಸರ್ಕಾರ ಅರಣ್ಯ ಇಲಾಖೆಯ ವತಿಯಿಂದ ಪರಿಸರ ದಿನಾಚರಣೆ ಪರಿಸರ ಸಂರಕ್ಷಣೆ ಎಂದು ಪ್ರತೀ ವರ್ಷ ಸಾವಿರಾರು ಗಿಡಗಳನ್ನು ನೆಡುತ್ತದೆ. ಆದರೆ ಪರಿಸರ ಬಗ್ಗೆ ಕಾಳಜಿ ಅರಿವು ಇಲ್ಲದ ದೇವನಹಳ್ಳಿಯ ಬೆಸ್ಕಾಂ ಅಧಿಕಾರಿಗಳು ದೇವನಹಳ್ಳಿಯಿಂದ ಸೂಲಿಬೆಲೆ ಮತ್ತು ವಿಜಯಪುರ ರಸ್ತೆಗಳ ಬದಿಯಲ್ಲಿ 20 ಕ್ಕೂ ಹೆಚ್ಚು ಮರಗಳನ್ನು ಕಡಿದು ಪರಿಸರಕ್ಕೆ ಹಾನಿ ಎಸಗಿದ್ದಾರೆ. ಅರಣ್ಯ ಇಲಾಖೆಯಿಂದ ಪ್ರತೀ ವರ್ಷ ಲಕ್ಷಾಂತರ ಹಣ ವ್ಯಯ ಮಾಡಿ ಸಸಿಗಳು ನೆಡುತ್ತಾರೆ. ಈ ಸಸಿಗಳನ್ನು ನೆಡಲು ಜನರ ತೆರಿಗೆ ಹಣವನ್ನು ಬಳಕೆ ಮಾಡಿರುವುದು ಬೆಸ್ಕಾಂ ಅಧಿಕಾರಿಗಳು ಬೇಕಾಬಿಟ್ಟಿ ಮನಸೋಇಚ್ಚೆ ಮರಗಿಡಗಳನ್ನು ಕಡಿದು ಹಾಕುವುದಕ್ಕಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪರಿಸರ ಪ್ರೇಮಿಗಳು ಸಾರ್ವಜನಿಕರು ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ. ಈಗ ಕಟಾವು ಮಾಡಿರುವ ಮರಗಳಿಗೆ ಬದಲಾಗಿ ಸಸಿಗಳನ್ನು ಬೆಸ್ಕಾಂ ಅಧಿಕಾರಿಗಳು ನೆಡಬೇಕಿದೆ. ಬೆಸ್ಕಾಂ ಅಧಿಕಾರಿಗಳ ಈ ಕೃತ್ಯದ ವಿರುಧ್ಧ ಕಾನೂನಾತ್ಮಕ ಹೋರಾಟ ಮಾಡುವ ಬಗ್ಗೆಯು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪರಿಸರ ಉಳಿಸಿ ಹೋರಾಟ ಸಮಿತಿಯ ದಯಾನಂದ ಹೇಳಿದ್ದಾರೆ.

ದೇವನಹಳ್ಳಿ ವೃತ್ತದ ಬೆಸ್ಕಾಂ ಸಹಾಯಕ ಇಂಜಿಯರ್ ಮಾನಸ‌ ಅವರ ಬೆಜವಬ್ದಾರಿ ಕೆಲಸಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿದ್ದು ಮಾನಸ ಅವರಿಗೆ ಪರಿಸರದ ಬಗ್ಗೆ ಅರಿವು ಮತ್ತು ಕಾಳಜಿಯ ಕೊರತೆ ಇದರಲ್ಲಿ ಕಂಡುಬರುತ್ತಿದೆ ಮರಗಳು ವಿದ್ಯುತ್ ತಂತಿಯನ್ನು ಸ್ಪರ್ಶಿಸುವ ಸ್ಥಿತಿಯಲ್ಲಿ ಈಗ ಆಧುನಿಕ ಕವರ್ ಕಾಂಟ್ಯಾಕ್ಟರ್ ಅಳವಡಿಸಿ ಮರಗಳನ್ನು ಉಳಿಸುವ ವ್ಯವಸ್ಥೆ ಇದೆ ಅನಿವಾರ್ಯ ಸಂದರ್ಭದಲ್ಲಿ 6 ಮೀಟರ್ ಮೇಲ್ಪಟ್ಟು ಮರದ ರೆಂಬೆ-ಕೊಂಬೆಗಳ್ನು ಮಾತ್ರ ಕತ್ತರಿಸಬಹುದಾಗಿದೆ ಯಾವುದೇ ಮರಗಳನ್ನಾಗಲಿ ಗಿಡಗಳನ್ನಾಗಲಿ ಬುಡದಿಂದ ಕತ್ತರಿಸಿ ಹಾಕುವುದು ನಿಯಮಗಳ ಉಲ್ಲಂಘನೆ ಯಾಗಿದೆ ಪರಿಸರದಲ್ಲಿ ಆಕ್ಸಿಜನ್ ಉತ್ಪತ್ತಿಯಾಗಲು ಮರಗಳ ಅಗತ್ಯದ ಬಗ್ಗೆ ಸರ್ಕಾರವೇ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು ಸರ್ಕಾರದ ಅಧಿಕಾರಿಗಳೆ ಈ ಬಗ್ಗೆ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ ಎಂದು ಪಿವಿಸಿ (ಎಸ್) ನ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್ ಪ್ರಶ್ನಿಸಿದ್ದಾರೆ.

ದೇವನಹಳ್ಳಿ ಬೆಸ್ಕಾಂ ಸಹಾಯಕ ಇಂಜಿನಿಯರ್ ಮಾನಸ ನಿರ್ಲಕ್ಷ್ಯ ರಸ್ತೆ ಬದಿಯಲ್ಲಿ ಮರಗಳ ಮಾರಣ ಹೋಮ.

ದೇವನಹಳ್ಳಿ: ತಾಲೂಕಿನ ವಿಜಯಪುರ ಮತ್ತು ಸೂಲಿಬೆಲೆ ರಸ್ತೆಯ ಬದಿಯಲ್ಲಿರುವ ಸುಮಾರು 20ಕ್ಕೂ ಹೆಚ್ಚು ಮರಗಳನ್ನು ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ತಂತಿಗಳಿಗೆ ತಗುಲುತ್ತವೆ ಎಂದು ಬುಡ ಸಮೇತ ಕತ್ತರಿಸಿ ಹಾಕಿದ್ದಾರೆ. ವಿದ್ಯುತ್ ಕಂಬಗಳು ಸುಮಾರು 20 ಅಡಿಗೂ ಹೆಚ್ಚು ಎತ್ತರವಿದ್ದು, ಕತ್ತರಿಸಿ ಹಾಕಿರುವ ಮರಗಳು ಇನ್ನೂ 15 ಅಡಿಗಳಷ್ಟು ಮಾತ್ರ ಬೆಳೆದಿವೆ. ಆದರೂ ಬೆಸ್ಕಾಂ ಅಧಿಕಾರಿಗಳು ಗಿಡಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕಿರುವುದು ಪರಿಸರ ಪ್ರೇಮಿಗಳ ಮತ್ತು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಅಲ್ಲದೆ ಕಟಾವು ಮಾಡಿದ ಮರಗಳಿಗೆ ಬದಲಾಗಿ ಅದರ ಎರಡರಷ್ಟು ಮರಗಳನ್ನು ನೆಡೆಬೇಕೆಂದು ಪರಿಸರ ಪ್ರೇಮಿ ಶ್ರೀದರ್ ಆಗ್ರಹಿಸಿದ್ದಾರೆ.

ಸರ್ಕಾರ ಅರಣ್ಯ ಇಲಾಖೆಯ ವತಿಯಿಂದ ಪರಿಸರ ದಿನಾಚರಣೆ ಪರಿಸರ ಸಂರಕ್ಷಣೆ ಎಂದು ಪ್ರತೀ ವರ್ಷ ಸಾವಿರಾರು ಗಿಡಗಳನ್ನು ನೆಡುತ್ತದೆ. ಆದರೆ ಪರಿಸರ ಬಗ್ಗೆ ಕಾಳಜಿ ಅರಿವು ಇಲ್ಲದ ದೇವನಹಳ್ಳಿಯ ಬೆಸ್ಕಾಂ ಅಧಿಕಾರಿಗಳು ದೇವನಹಳ್ಳಿಯಿಂದ ಸೂಲಿಬೆಲೆ ಮತ್ತು ವಿಜಯಪುರ ರಸ್ತೆಗಳ ಬದಿಯಲ್ಲಿ 20 ಕ್ಕೂ ಹೆಚ್ಚು ಮರಗಳನ್ನು ಕಡಿದು ಪರಿಸರಕ್ಕೆ ಹಾನಿ ಎಸಗಿದ್ದಾರೆ. ಅರಣ್ಯ ಇಲಾಖೆಯಿಂದ ಪ್ರತೀ ವರ್ಷ ಲಕ್ಷಾಂತರ ಹಣ ವ್ಯಯ ಮಾಡಿ ಸಸಿಗಳು ನೆಡುತ್ತಾರೆ. ಈ ಸಸಿಗಳನ್ನು ನೆಡಲು ಜನರ ತೆರಿಗೆ ಹಣವನ್ನು ಬಳಕೆ ಮಾಡಿರುವುದು ಬೆಸ್ಕಾಂ ಅಧಿಕಾರಿಗಳು ಬೇಕಾಬಿಟ್ಟಿ ಮನಸೋಇಚ್ಚೆ ಮರಗಿಡಗಳನ್ನು ಕಡಿದು ಹಾಕುವುದಕ್ಕಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪರಿಸರ ಪ್ರೇಮಿಗಳು ಸಾರ್ವಜನಿಕರು ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ. ಈಗ ಕಟಾವು ಮಾಡಿರುವ ಮರಗಳಿಗೆ ಬದಲಾಗಿ ಸಸಿಗಳನ್ನು ಬೆಸ್ಕಾಂ ಅಧಿಕಾರಿಗಳು ನೆಡಬೇಕಿದೆ. ಬೆಸ್ಕಾಂ ಅಧಿಕಾರಿಗಳ ಈ ಕೃತ್ಯದ ವಿರುಧ್ಧ ಕಾನೂನಾತ್ಮಕ ಹೋರಾಟ ಮಾಡುವ ಬಗ್ಗೆಯು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪರಿಸರ ಉಳಿಸಿ ಹೋರಾಟ ಸಮಿತಿಯ ದಯಾನಂದ ಹೇಳಿದ್ದಾರೆ.

ದೇವನಹಳ್ಳಿ ವೃತ್ತದ ಬೆಸ್ಕಾಂ ಸಹಾಯಕ ಇಂಜಿಯರ್ ಮಾನಸ‌ ಅವರ ಬೆಜವಬ್ದಾರಿ ಕೆಲಸಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿದ್ದು ಮಾನಸ ಅವರಿಗೆ ಪರಿಸರದ ಬಗ್ಗೆ ಅರಿವು ಮತ್ತು ಕಾಳಜಿಯ ಕೊರತೆ ಇದರಲ್ಲಿ ಕಂಡುಬರುತ್ತಿದೆ ಮರಗಳು ವಿದ್ಯುತ್ ತಂತಿಯನ್ನು ಸ್ಪರ್ಶಿಸುವ ಸ್ಥಿತಿಯಲ್ಲಿ ಈಗ ಆಧುನಿಕ ಕವರ್ ಕಾಂಟ್ಯಾಕ್ಟರ್ ಅಳವಡಿಸಿ ಮರಗಳನ್ನು ಉಳಿಸುವ ವ್ಯವಸ್ಥೆ ಇದೆ ಅನಿವಾರ್ಯ ಸಂದರ್ಭದಲ್ಲಿ 6 ಮೀಟರ್ ಮೇಲ್ಪಟ್ಟು ಮರದ ರೆಂಬೆ-ಕೊಂಬೆಗಳ್ನು ಮಾತ್ರ ಕತ್ತರಿಸಬಹುದಾಗಿದೆ ಯಾವುದೇ ಮರಗಳನ್ನಾಗಲಿ ಗಿಡಗಳನ್ನಾಗಲಿ ಬುಡದಿಂದ ಕತ್ತರಿಸಿ ಹಾಕುವುದು ನಿಯಮಗಳ ಉಲ್ಲಂಘನೆ ಯಾಗಿದೆ ಪರಿಸರದಲ್ಲಿ ಆಕ್ಸಿಜನ್ ಉತ್ಪತ್ತಿಯಾಗಲು ಮರಗಳ ಅಗತ್ಯದ ಬಗ್ಗೆ ಸರ್ಕಾರವೇ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು ಸರ್ಕಾರದ ಅಧಿಕಾರಿಗಳೆ ಈ ಬಗ್ಗೆ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ ಎಂದು ಪಿವಿಸಿ (ಎಸ್) ನ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *