ಸಿಆರ್ ಪಿಎಫ್ ಯೋಧರಿಗೆ ಸಲಾಮಿ ಶಸ್ತ್ರ- ಅತಿ ಉತ್ಕೃಷ್ಟ ಸೇವಾ ಪದಕ ನೀಡಿ ಗೌರವ :

ಯಲಹಂಕ : ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯ 85ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಯಲಹಂಕದ ಸಿಆರ್ ಪಿಎಫ್ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕರ್ನಾಟಕ, ಕೇರಳ ವಿಭಾಗದ ಐಜಿಪಿ ಉಷಾಕಿರಣ್ ಕಂಡೋಲನ ಸಿಆರ್ ಪಿಎಫ್ ನ ವಿವಿಧ ಕೇಂದ್ರಗಳ ಆವರಣದಲ್ಲಿ 35 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ದೇಶಕ್ಕಾಗಿ ಹೋರಾಡಿ ಬಲಿದಾನ ಮಾಡಿರುವ ಸಿಆರ್ ಪಿಎಫ್ ಯೋಧರಿಗೆ ‘ಸಲಾಮಿ ಶಸ್ತ್ರ’ ಗೌರವ, ಸೇವಾ ಅವಧಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಿಆರ್ ಪಿಎಫ್ ಯೋಧರಿಗೆ ‘ಅತಿ ಉತ್ಕ್ರಷ್ಠ ಸೇವಾ ಪದಕ’ ನೀಡಿ ಗೌರವಿಸಿದರು.

ನಂತರ ಮಾತನಾಡಿದ ಅವರು 1939 ರಲ್ಲಿ ಮಧ್ಯಪ್ರದೇಶದ ನೀಮುಚ್ ನಲ್ಲಿ ಆರಂಭಗೊಂಡ ಕೇಂದ್ರೀಯ ಮೀಸಲು ಪೋಲಿಸ್ ಪಡೆ ಅಂದಿನಿಂದ ಇಂದಿನವರೆಗೂ ಸಾಗಿ ಬಂದಿರುವ ರೀತಿ, ಸಲ್ಲಿಸಿರುವ ಸೇವೆ, ದೇಶದ ಭದ್ರತೆಯ ನಿಟ್ಟಿನಲ್ಲಿ ಸಿಆರ್ ಪಿಎಫ್ ನೀಡಿರುವ ಅಮೂಲ್ಯ ಕೊಡುಗೆ ಮಹತ್ವಪೂರ್ಣ ವಾದುದು. ದೇಶದ ಭದ್ರತೆಗಾಗಿ ನಮ್ಮ ಸಹಸ್ರಾರು ಸಿಆರ್ ಪಿಎಫ್ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಪ್ರಾಮಾಣಿಕ ಸೇವೆ ನಿಜಕ್ಕೂ ಅತ್ಯಮೂಲ್ಯವಾದುದು, 85 ನೇ ಸಂಸ್ಥಾಪನಾ ದಿನಾಚರಣೆಯ ಈ ಸಂದರ್ಭದಲ್ಲಿ ಅಂತಹ ಹುತಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದ್ದು, ಅವರ ನಿಷ್ಕಲ್ಮಷವಾದ ಸೇವೆಯಿಂದಾಗಿಯೇ ದೇಶದ ಜನತೆ ನಿರಾತಂಕವಾಗಿ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಆರ್ ಪಿಎಫ್ ಡಿಐಜಿಪಿ ಇಮಾನ್ಷು ಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೊಟ್, ಐಎಫ್ ಎಸ್ ಅಧಿಕಾರಿ ಸರೀನಾ ಸಿಕ್ಕಲಿಗರ್ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

ಸಿಆರ್ ಪಿಎಫ್ ನ 85ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ವನಮಹೋತ್ಸವ :

ಸಿಆರ್ ಪಿಎಫ್ ಯೋಧರಿಗೆ ಸಲಾಮಿ ಶಸ್ತ್ರ- ಅತಿ ಉತ್ಕೃಷ್ಟ ಸೇವಾ ಪದಕ ನೀಡಿ ಗೌರವ :

ಯಲಹಂಕ : ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯ 85ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಯಲಹಂಕದ ಸಿಆರ್ ಪಿಎಫ್ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕರ್ನಾಟಕ, ಕೇರಳ ವಿಭಾಗದ ಐಜಿಪಿ ಉಷಾಕಿರಣ್ ಕಂಡೋಲನ ಸಿಆರ್ ಪಿಎಫ್ ನ ವಿವಿಧ ಕೇಂದ್ರಗಳ ಆವರಣದಲ್ಲಿ 35 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ದೇಶಕ್ಕಾಗಿ ಹೋರಾಡಿ ಬಲಿದಾನ ಮಾಡಿರುವ ಸಿಆರ್ ಪಿಎಫ್ ಯೋಧರಿಗೆ ‘ಸಲಾಮಿ ಶಸ್ತ್ರ’ ಗೌರವ, ಸೇವಾ ಅವಧಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಿಆರ್ ಪಿಎಫ್ ಯೋಧರಿಗೆ ‘ಅತಿ ಉತ್ಕ್ರಷ್ಠ ಸೇವಾ ಪದಕ’ ನೀಡಿ ಗೌರವಿಸಿದರು.

ನಂತರ ಮಾತನಾಡಿದ ಅವರು 1939 ರಲ್ಲಿ ಮಧ್ಯಪ್ರದೇಶದ ನೀಮುಚ್ ನಲ್ಲಿ ಆರಂಭಗೊಂಡ ಕೇಂದ್ರೀಯ ಮೀಸಲು ಪೋಲಿಸ್ ಪಡೆ ಅಂದಿನಿಂದ ಇಂದಿನವರೆಗೂ ಸಾಗಿ ಬಂದಿರುವ ರೀತಿ, ಸಲ್ಲಿಸಿರುವ ಸೇವೆ, ದೇಶದ ಭದ್ರತೆಯ ನಿಟ್ಟಿನಲ್ಲಿ ಸಿಆರ್ ಪಿಎಫ್ ನೀಡಿರುವ ಅಮೂಲ್ಯ ಕೊಡುಗೆ ಮಹತ್ವಪೂರ್ಣ ವಾದುದು. ದೇಶದ ಭದ್ರತೆಗಾಗಿ ನಮ್ಮ ಸಹಸ್ರಾರು ಸಿಆರ್ ಪಿಎಫ್ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಪ್ರಾಮಾಣಿಕ ಸೇವೆ ನಿಜಕ್ಕೂ ಅತ್ಯಮೂಲ್ಯವಾದುದು, 85 ನೇ ಸಂಸ್ಥಾಪನಾ ದಿನಾಚರಣೆಯ ಈ ಸಂದರ್ಭದಲ್ಲಿ ಅಂತಹ ಹುತಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದ್ದು, ಅವರ ನಿಷ್ಕಲ್ಮಷವಾದ ಸೇವೆಯಿಂದಾಗಿಯೇ ದೇಶದ ಜನತೆ ನಿರಾತಂಕವಾಗಿ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಆರ್ ಪಿಎಫ್ ಡಿಐಜಿಪಿ ಇಮಾನ್ಷು ಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೊಟ್, ಐಎಫ್ ಎಸ್ ಅಧಿಕಾರಿ ಸರೀನಾ ಸಿಕ್ಕಲಿಗರ್ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *