ದೇವನಹಳ್ಳಿ: ಹಾಲು ಉತ್ಪಾದಕ ರೈತರಿಗೆ ಹಸುಗಳಿಗೆ ಹಾಕುವ ಹಿಂಡಿ ಬೂಸಾಗಳ ಬೆಲೆ ಜಾಸ್ತಿಯಾಗಿರುವುದರಿಂದ ಹಸುಗಳ ಸಾಕಾಣಿಕೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 1ರಿಂದ ಹಾಲಿನ ದರ 3 ರೂಪಾಯಿ ಹೆಚ್ಚಳವಾಗುತ್ತಿದ್ದು ಅದು ರೈತರಿಗೆ ನೇರವಾಗಿ ತಲುಪಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ
ದೇವನಹಳ್ಳಿ ತಾಲೂಕು, ಐಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಹಿತದೃಷ್ಟಿಯಿಂದ ಹಿಂಡಿ ಬೂಸಾಗಳು ದರ ಹೆಚ್ಚಳದಿಂದ ರೈತರಿಗೆ ಹಸುಗಳ ಸಾಗಾಣಿಕೆಯಲ್ಲಿ ದುಬಾರಿ ವೆಚ್ಚವನ್ನು ತಗ್ಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರುಗಳು ಹಾಲಿನ ಬೆಲೆಯ ಹೆಚ್ಚಳವನ್ನು ಮಾಡಿದ್ದು ಅದು ರೈತರಿಗೆ ನೇರವಾಗಿ ವರ್ಗಾವಣೆ ಆಗುವಂತೆ ತೀರ್ಮಾನ ತೆಗೆದುಕೊಂಡಿದ್ದು ಆಗಸ್ಟ್1 ರಿಂದ ಇದು ಜಾರಿಗೆ ಬರಲಿದೆ. ರೈತರು ಹೆಚ್ಚು ಮತ್ತು ಗುಣಮಟ್ಟದ ಹಾಲು ಉತ್ಪಾದಿಸಿ ಹೈನುಗಾರಿಕೆಯಲ್ಲಿ ಯಾವುದೇ ತೊಂದರೆ ಉಂಟಾಗದೆ ಅವರ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ರೈತರ ಪರವಾಗಿ ಕೆಲಸ ಮಾಡಲಿದೆ ಎಂದರು.
ಬಮುಲ್ ನಿರ್ದೇಶಕ ಶ್ರೀನಿವಾಸ್ ಮಾತನಾಡಿ ತಾಲೂಕಿನ ಸಹಕಾರಿ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ತಾಲೂಕಿನಲ್ಲಿರುವ 67 ಸಹಕಾರ ಸಂಘಗಳಿಗೂ ಸ್ವಂತ ಕಟ್ಟಡ ನಿರ್ಮಾಣವಾದರೆ ತಾಲೂಕಿನ ಎಲ್ಲಾ ಗ್ರಾಮಗಳ ಹಾಲು ಉತ್ಪಾದಕರ ಸಂಘಗಳ ಸ್ವಂತ ಕಟ್ಟಡಗಳು ನಿರ್ಮಾಣವಾದಂತಾಗುತ್ತದೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಬಮುಲ್ ನಿಂದ ಬರುವ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಐಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಣ್ಣ ಮಾತನಾಡಿ ಎಲ್ಲರ ಸಹಕಾರದಿಂದ ನಮ್ಮ ಸಹಕಾರಿ ಸಂಘವು ಅಭಿವೃದ್ಧಿಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಈಗ ಎಲ್ಲರ ಪ್ರಯತ್ನಗಳಿಂದ ವಿಸ್ತರಣಾ ಕಟ್ಟಡ ನಿರ್ಮಾಣ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಸಂಘವು ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ ರಾಜಣ್ಣ, ಮಾಜಿ ಸದಸ್ಯ ಲಕ್ಷ್ಮಿ ನಾರಾಯಣ, ದೇವನಹಳ್ಳಿ ಶಿಬಿರ ಕಚೇರಿಯ ಸಹಾಯಕ ವ್ಯವಸ್ಥಾಪಕರಾದ ಡಿಕೆ ಮಂಜುನಾಥ್, ಜಿಕೆವಿಕೆ ಬೆಂಗಳೂರು ಸಹ ಪ್ರಾಧ್ಯಾಪಕಕರಾದ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ಉಪಾಧ್ಯಕ್ಷೆ ಲಕ್ಷ್ಮೀದೇವಿ, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ದೇವರಾಜ್, ನಿರ್ದೇಶಕರುಗಳಾದ ಶಂಕ್ರಪ್ಪ, ಅಂಜನಪ್ಪ, ಆನಂದ್ ,ಕೃಷ್ಣಪ್ಪ, ಅಶ್ವತಪ್ಪ, ಯಶೋದಮ್ಮ, ಮಂಜುನಾಥ್, ಲಕ್ಕಮ್ಮ, ಅರುಣ್ ಕುಮಾರ್ , ತಾಲೂಕು ಪಂಚಾಯತಿ ಮಾಜಿ ಸಸ್ಯರಾದ ವೆಂಕಟೇಶ್, ಮಂಜುನಾಥ್, ಲಕ್ಷ್ಮಣ್ ಗೌಡ, ಚನ್ನರಾಯಪಟ್ಟಣ ರೇಷ್ಮೆ ಬೆಳೆಗಾರರು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ನಂಜೇಗೌಡ, ಗ್ರಾಮ ಪಂಚಾಯತಿ ಸದಸ್ಯ ಕೇಶವ, ಗುತ್ತಿಗೆದಾರ ಮಂಜುನಾಥ್, ಗ್ರಾಮದ ಮುಖಂಡ ಲಕ್ಷ್ಮಣ್, ವಿತರಣಾಧಿಕಾರಿ ವಿಜಯಕುಮಾರ್, ಸಂಘದ ಕಾರ್ಯದರ್ಶಿ ಮಂಜುನಾಥ್, ಹಾಲು ಪರೀಕ್ಷಕ ಕೆ ವೆಂಕಟೇಶ್, ಸಹಾಯಕ ರಾಮಾಂಜಿನಪ್ಪ ಮುಂತಾದವರು ಇದ್ದರು.
ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಹಿತದೃಷ್ಟಿಯಿಂದ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಕೆ ಎಚ್ ಮುನಿಯಪ್ಪ.
ದೇವನಹಳ್ಳಿ: ಹಾಲು ಉತ್ಪಾದಕ ರೈತರಿಗೆ ಹಸುಗಳಿಗೆ ಹಾಕುವ ಹಿಂಡಿ ಬೂಸಾಗಳ ಬೆಲೆ ಜಾಸ್ತಿಯಾಗಿರುವುದರಿಂದ ಹಸುಗಳ ಸಾಕಾಣಿಕೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 1ರಿಂದ ಹಾಲಿನ ದರ 3 ರೂಪಾಯಿ ಹೆಚ್ಚಳವಾಗುತ್ತಿದ್ದು ಅದು ರೈತರಿಗೆ ನೇರವಾಗಿ ತಲುಪಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ
ದೇವನಹಳ್ಳಿ ತಾಲೂಕು, ಐಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಹಿತದೃಷ್ಟಿಯಿಂದ ಹಿಂಡಿ ಬೂಸಾಗಳು ದರ ಹೆಚ್ಚಳದಿಂದ ರೈತರಿಗೆ ಹಸುಗಳ ಸಾಗಾಣಿಕೆಯಲ್ಲಿ ದುಬಾರಿ ವೆಚ್ಚವನ್ನು ತಗ್ಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರುಗಳು ಹಾಲಿನ ಬೆಲೆಯ ಹೆಚ್ಚಳವನ್ನು ಮಾಡಿದ್ದು ಅದು ರೈತರಿಗೆ ನೇರವಾಗಿ ವರ್ಗಾವಣೆ ಆಗುವಂತೆ ತೀರ್ಮಾನ ತೆಗೆದುಕೊಂಡಿದ್ದು ಆಗಸ್ಟ್1 ರಿಂದ ಇದು ಜಾರಿಗೆ ಬರಲಿದೆ. ರೈತರು ಹೆಚ್ಚು ಮತ್ತು ಗುಣಮಟ್ಟದ ಹಾಲು ಉತ್ಪಾದಿಸಿ ಹೈನುಗಾರಿಕೆಯಲ್ಲಿ ಯಾವುದೇ ತೊಂದರೆ ಉಂಟಾಗದೆ ಅವರ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ರೈತರ ಪರವಾಗಿ ಕೆಲಸ ಮಾಡಲಿದೆ ಎಂದರು.
ಬಮುಲ್ ನಿರ್ದೇಶಕ ಶ್ರೀನಿವಾಸ್ ಮಾತನಾಡಿ ತಾಲೂಕಿನ ಸಹಕಾರಿ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ತಾಲೂಕಿನಲ್ಲಿರುವ 67 ಸಹಕಾರ ಸಂಘಗಳಿಗೂ ಸ್ವಂತ ಕಟ್ಟಡ ನಿರ್ಮಾಣವಾದರೆ ತಾಲೂಕಿನ ಎಲ್ಲಾ ಗ್ರಾಮಗಳ ಹಾಲು ಉತ್ಪಾದಕರ ಸಂಘಗಳ ಸ್ವಂತ ಕಟ್ಟಡಗಳು ನಿರ್ಮಾಣವಾದಂತಾಗುತ್ತದೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಬಮುಲ್ ನಿಂದ ಬರುವ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಐಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಣ್ಣ ಮಾತನಾಡಿ ಎಲ್ಲರ ಸಹಕಾರದಿಂದ ನಮ್ಮ ಸಹಕಾರಿ ಸಂಘವು ಅಭಿವೃದ್ಧಿಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಈಗ ಎಲ್ಲರ ಪ್ರಯತ್ನಗಳಿಂದ ವಿಸ್ತರಣಾ ಕಟ್ಟಡ ನಿರ್ಮಾಣ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಸಂಘವು ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ ರಾಜಣ್ಣ, ಮಾಜಿ ಸದಸ್ಯ ಲಕ್ಷ್ಮಿ ನಾರಾಯಣ, ದೇವನಹಳ್ಳಿ ಶಿಬಿರ ಕಚೇರಿಯ ಸಹಾಯಕ ವ್ಯವಸ್ಥಾಪಕರಾದ ಡಿಕೆ ಮಂಜುನಾಥ್, ಜಿಕೆವಿಕೆ ಬೆಂಗಳೂರು ಸಹ ಪ್ರಾಧ್ಯಾಪಕಕರಾದ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ಉಪಾಧ್ಯಕ್ಷೆ ಲಕ್ಷ್ಮೀದೇವಿ, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ದೇವರಾಜ್, ನಿರ್ದೇಶಕರುಗಳಾದ ಶಂಕ್ರಪ್ಪ, ಅಂಜನಪ್ಪ, ಆನಂದ್ ,ಕೃಷ್ಣಪ್ಪ, ಅಶ್ವತಪ್ಪ, ಯಶೋದಮ್ಮ, ಮಂಜುನಾಥ್, ಲಕ್ಕಮ್ಮ, ಅರುಣ್ ಕುಮಾರ್ , ತಾಲೂಕು ಪಂಚಾಯತಿ ಮಾಜಿ ಸಸ್ಯರಾದ ವೆಂಕಟೇಶ್, ಮಂಜುನಾಥ್, ಲಕ್ಷ್ಮಣ್ ಗೌಡ, ಚನ್ನರಾಯಪಟ್ಟಣ ರೇಷ್ಮೆ ಬೆಳೆಗಾರರು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ನಂಜೇಗೌಡ, ಗ್ರಾಮ ಪಂಚಾಯತಿ ಸದಸ್ಯ ಕೇಶವ, ಗುತ್ತಿಗೆದಾರ ಮಂಜುನಾಥ್, ಗ್ರಾಮದ ಮುಖಂಡ ಲಕ್ಷ್ಮಣ್, ವಿತರಣಾಧಿಕಾರಿ ವಿಜಯಕುಮಾರ್, ಸಂಘದ ಕಾರ್ಯದರ್ಶಿ ಮಂಜುನಾಥ್, ಹಾಲು ಪರೀಕ್ಷಕ ಕೆ ವೆಂಕಟೇಶ್, ಸಹಾಯಕ ರಾಮಾಂಜಿನಪ್ಪ ಮುಂತಾದವರು ಇದ್ದರು.