ಜಾಮಿಯಾ ಮಸೀದಿ ಕಮಿಟಿ ವತಿಯಿಂದ ಸಚಿವ ಎಂ ಸಿ ಸುಧಾಕರ್ ರವರಿಗೆ ಹೃದಯ ಸ್ಪರ್ಶಿ ಸನ್ಮಾನ.

ಚಿಂತಾಮಣಿ :ನಗರದ ದೊಡ್ಡಪೇಟೆಯಲ್ಲಿರುವ ಜಾಮಿಯ ಮಸೀದಿ ವತಿಯಿಂದ ಪವಿತ್ರ ಮೊಹರಂ ಹಬ್ಬದ ಅಂಗವಾಗಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅವರಿಗೆ ಹೃದಯಸ್ಪರ್ಶವಾಗಿ ಸನ್ಮಾನಿಸಲಾಯಿತು.

ನಗರದ ಮಾಳಪ್ಪಳ್ಳಿಯಲ್ಲಿರುವ ಸಚಿವ ನಿವಾಸಕ್ಕೆ ತೆರಳಿ ಜಾಮಿಯಾ ಮಸೀದಿ ಕಮಿಟಿಯ ಪದಾಧಿಕಾರಿಗಳು ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಮೂನ್ ಸ್ಟಾರ್ ಗೌಸ್ ಪಾಷ ಅವರು ಮಾತನಾಡಿ ಮಸೀದಿ ನೂತನ ಕಮಿಟಿ ಅಸ್ತಿತ್ವಕ್ಕೆ ಬರಲು ತುಂಬಾ ಹೃದಯದಿಂದ ಸಹಕರಿಸಿದ ಸನ್ಮಾನ್ಯ ಸಚಿವರಿಗೆ ಕೃತಜ್ಞತೆಗಳು ಸಲ್ಲಿಸಿದರು.

ಮುಂದಿನ ದಿನಗಳಲ್ಲಿ ಸಹ ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರ ಅಭಿವೃದ್ಧಿಗೆ ಮಾನ್ಯ ಸಚಿವರಿಂದ ಹಾಗೂ ರಾಜ್ಯ ಸರ್ಕಾರ ವತಿಯಿಂದ ಉತ್ತಮ ಸಹಕಾರ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪವಿತ್ರ ಮೊಹರಂ ಹಬ್ಬದ ಸಂದರ್ಭದಲ್ಲಿ ಜಾಮಿಯಾ ಮಸೀದಿ ಕಮಿಟಿ ವತಿಯಿಂದ ತಾಲೂಕಿನ ಎಲ್ಲಾ ಮುಸ್ಲಿಂ ಬಾಂಧವರ ಪರವಾಗಿ ಮಾನ್ಯ ಸಚಿವರಿಗೆ ಸನ್ಮಾನಿಸುವುದಾಗಿ ಹೇಳಿದರು.

ಸನ್ಮಾನ ಸ್ವೀಕರಿಸಿದ ಸಚಿವ ಎಂ ಸಿ ಸುಧಾಕರ್ ರವರು ಮಾತನಾಡಿ ರಾಜ್ಯದ ಹಿಂದೂ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಹಾಗೂ ಪುಣ್ಯತಾನವಾಗಿರುವ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮ ಜಾನ್ ಬಾಬಾ ಜಾನ್ ದರ್ಗಾ ವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರ ಜೊತೆ ಈಗಾಗಲೇ ಚರ್ಚೆನಡೆಸಲಾಗಿದ್ದು ಶೀಘ್ರದಲ್ಲೇ ರಾಜ್ಯದಲ್ಲೇ ಮಾದರಿ ದರ್ಗಾ ವನ್ನಾಗಿ ಮಾಡಲು ಪಣ ತೊಟ್ಟಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಮಿವುಲ್ಲಾ, ಕಾರ್ಯದರ್ಶಿ ಮಹಮ್ಮದ್ ಇನಾಯತುಲ್ಲಾ, ಸದಸ್ಯರಾದ ಮುಜೀರ್ ಅಹಮದ್, ಅಕ್ಮಲ್ ಖಾನ್,ಪರ್ವೇಜ್ ಅಹಮದ್,ಆಕ್ರಂ ಪಾಷಾ,ಜಮೀರ್ ಉಲ್ಲಾ ಖಾನ್,ಸೈಯದ್ ಮೌಲಾ, ಸೈಯದ್ ಟಿಪ್ಪು,ಡಾ. ಅಲ್ತಾಫ್ ಪಾಷಾ, ಇಲಿಯಾಸ್, ಮತ್ತು
ಜಾಮಿಯಾ ಮಸೀದಿ ಕಮಿಟಿ ಸದಸ್ಯರು ಉಪಸ್ಥಿತಿಯಿದ್ದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಮುರುಗಮಲ್ಲ ದರ್ಗಾ ಅಭಿವೃದ್ದಿಪಡಿಸಲಾಗುವುದು: ಸಚಿವ ಸುಧಾಕರ್

ಜಾಮಿಯಾ ಮಸೀದಿ ಕಮಿಟಿ ವತಿಯಿಂದ ಸಚಿವ ಎಂ ಸಿ ಸುಧಾಕರ್ ರವರಿಗೆ ಹೃದಯ ಸ್ಪರ್ಶಿ ಸನ್ಮಾನ.

ಚಿಂತಾಮಣಿ :ನಗರದ ದೊಡ್ಡಪೇಟೆಯಲ್ಲಿರುವ ಜಾಮಿಯ ಮಸೀದಿ ವತಿಯಿಂದ ಪವಿತ್ರ ಮೊಹರಂ ಹಬ್ಬದ ಅಂಗವಾಗಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅವರಿಗೆ ಹೃದಯಸ್ಪರ್ಶವಾಗಿ ಸನ್ಮಾನಿಸಲಾಯಿತು.

ನಗರದ ಮಾಳಪ್ಪಳ್ಳಿಯಲ್ಲಿರುವ ಸಚಿವ ನಿವಾಸಕ್ಕೆ ತೆರಳಿ ಜಾಮಿಯಾ ಮಸೀದಿ ಕಮಿಟಿಯ ಪದಾಧಿಕಾರಿಗಳು ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಮೂನ್ ಸ್ಟಾರ್ ಗೌಸ್ ಪಾಷ ಅವರು ಮಾತನಾಡಿ ಮಸೀದಿ ನೂತನ ಕಮಿಟಿ ಅಸ್ತಿತ್ವಕ್ಕೆ ಬರಲು ತುಂಬಾ ಹೃದಯದಿಂದ ಸಹಕರಿಸಿದ ಸನ್ಮಾನ್ಯ ಸಚಿವರಿಗೆ ಕೃತಜ್ಞತೆಗಳು ಸಲ್ಲಿಸಿದರು.

ಮುಂದಿನ ದಿನಗಳಲ್ಲಿ ಸಹ ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರ ಅಭಿವೃದ್ಧಿಗೆ ಮಾನ್ಯ ಸಚಿವರಿಂದ ಹಾಗೂ ರಾಜ್ಯ ಸರ್ಕಾರ ವತಿಯಿಂದ ಉತ್ತಮ ಸಹಕಾರ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪವಿತ್ರ ಮೊಹರಂ ಹಬ್ಬದ ಸಂದರ್ಭದಲ್ಲಿ ಜಾಮಿಯಾ ಮಸೀದಿ ಕಮಿಟಿ ವತಿಯಿಂದ ತಾಲೂಕಿನ ಎಲ್ಲಾ ಮುಸ್ಲಿಂ ಬಾಂಧವರ ಪರವಾಗಿ ಮಾನ್ಯ ಸಚಿವರಿಗೆ ಸನ್ಮಾನಿಸುವುದಾಗಿ ಹೇಳಿದರು.

ಸನ್ಮಾನ ಸ್ವೀಕರಿಸಿದ ಸಚಿವ ಎಂ ಸಿ ಸುಧಾಕರ್ ರವರು ಮಾತನಾಡಿ ರಾಜ್ಯದ ಹಿಂದೂ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಹಾಗೂ ಪುಣ್ಯತಾನವಾಗಿರುವ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮ ಜಾನ್ ಬಾಬಾ ಜಾನ್ ದರ್ಗಾ ವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರ ಜೊತೆ ಈಗಾಗಲೇ ಚರ್ಚೆನಡೆಸಲಾಗಿದ್ದು ಶೀಘ್ರದಲ್ಲೇ ರಾಜ್ಯದಲ್ಲೇ ಮಾದರಿ ದರ್ಗಾ ವನ್ನಾಗಿ ಮಾಡಲು ಪಣ ತೊಟ್ಟಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಮಿವುಲ್ಲಾ, ಕಾರ್ಯದರ್ಶಿ ಮಹಮ್ಮದ್ ಇನಾಯತುಲ್ಲಾ, ಸದಸ್ಯರಾದ ಮುಜೀರ್ ಅಹಮದ್, ಅಕ್ಮಲ್ ಖಾನ್,ಪರ್ವೇಜ್ ಅಹಮದ್,ಆಕ್ರಂ ಪಾಷಾ,ಜಮೀರ್ ಉಲ್ಲಾ ಖಾನ್,ಸೈಯದ್ ಮೌಲಾ, ಸೈಯದ್ ಟಿಪ್ಪು,ಡಾ. ಅಲ್ತಾಫ್ ಪಾಷಾ, ಇಲಿಯಾಸ್, ಮತ್ತು
ಜಾಮಿಯಾ ಮಸೀದಿ ಕಮಿಟಿ ಸದಸ್ಯರು ಉಪಸ್ಥಿತಿಯಿದ್ದರು.

Leave a Reply

Your email address will not be published. Required fields are marked *