ಕೆ.ಆರ್.ಪುರ,ಜು.3- ತಹಸೀಲ್ದಾರ್ ಅಜಿತ್ ರೈ ವಿರುದ್ಧ ಉನ್ನತ ತನಿಖೆ ನಡೆಸುವಂತೆ ಒತ್ತಾಯಿಸಿ ಜನತಾ ರೈತ ಸಂಘಟನೆ ಕಾರ್ಯಕರ್ತರು ಇಂದು ಕೆಆರ್ ಪುರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಆರ್.ಈರೇಗೌಡ ಅವರು ಭ್ರಷ್ಟ ಅಧಿಕಾರಿ ಅಜಿತ್ ರೈ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಯಬೇಕು, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಭ್ರಷ್ಟ ಅಧಿಕಾರಿ ಇಷ್ಟೊಂದು ಅಕ್ರಮ ಮಾಡಲು ಯಾರ್ಯಾರು ಕಾರಣ ಅನ್ನೋದು ಬೆಳಕಿಗೆ ಬರಬೇಕು ಎಂದು ಆಗ್ರಹಿಸಿದರು.
ಅನುಕಂಪದ ಆಧಾರದಲ್ಲಿ ನೌಕರಿ ಪಡೆದು ಭಾರೀ ಭ್ರಷ್ಟಾಚಾರ ನಡೆಸಿರುವ ಅಜಿತ್ ರೈ ವಿರುದ್ದ ದೊಡ್ಡ ತನಿಖೆ ನಡೆಯಬೇಕು. ಈತನೊಬ್ಬನೇ ಅಲ್ಲದೆ ಇವರಿಗೆ ಸಹಕಾರ ನೀಡಿದವರ ವಿರುದ್ಧ ಕ್ರಮವಾಗಬೇಕು ಎಂದು ದೂರಿದರು.
ಈ ನಿಟ್ಟಿನಲ್ಲಿ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು, ಅಜಿತ್ ರೈ ತಮ್ಮ ಅವಧಿಯಲ್ಲಿ ಅನೇಕ ಭೂಗಳ್ಳರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ, ನೂರಾರು ರೈತರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋ ಆರೋಪವಿದ್ದು ಸರ್ಕಾರ ಎಲ್ಲ ದೃಷ್ಟಿಕೋನಗಳಲ್ಲಿ ತನಿಖೆ ನಡೆಸಲು ಆದೇಶಿಸಬೇಕು ಎಂದರು.
ಈ ವೇಳೆ ಯುವ ಘಟಕದ ಅಧ್ಯಕ್ಷ ಸತೀಶ್ ಗೌಡ,
ಉಪಾಧ್ಯಕ್ಷ ಹಾಗು ಖಜಾಂಚಿ ಶ್ರೀನಿವಾಸ್,ಪ್ರಧಾನ ಕಾರ್ಯದರ್ಶಿ ಸತೀಶ್ ಎಂ. ಮಹಿಳಾ ಘಟಕದ ಉಷಾ ವಿಜಯ್ ಕುಮಾರ್, ರಾಧಾ, ಜಯಂತಿ ಬಾಲು, ಮಹೇಶ್ ಸಿಂಹ, ಕೃಪಾಕರರೆಡ್ಡಿ, ಮೂರ್ತಿ, ವೀರೇಶ್, ಪಾಲ್ ಜಯಪ್ರಕಾಶ್ ಹಾಗು ಇನ್ನಿತರರು ಉಪಸ್ಥಿತರಿದ್ದರು.