ಬೀದರ: ಪ್ರತಿದಿನ ಬೆಳಿಗ್ಗೆ ಎದ್ದು ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯುವುದರ ಮುಖಾಂತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನಿಸಬೇಕೆಂದು ರಾಜಸ್ಥಾನದ ಕ್ಯಾನ್ಸರ್ ತಜ್ಞರಾದ ಡಾ. ಪ್ರೇಮ್ ಮಸಂದ್ ಭಾಯಿ ತಿಳಿಸಿದರು.
ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಪಾವನಧಾಮ ಕೇಂದ್ರದಲ್ಲಿ ಆಯೋಜಿಸಿದ “2023ರ ಸಕಾರಾತ್ಮಕ ಪರಿವರ್ತನೆ ವರ್ಷದ ಪ್ರಾರಂಭೋತ್ಸವ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜಾಗತಿಕರಣ ಮತ್ತು ಆಧುನಿಕರಣದ ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ವಿಚಾರಗಳಿಂದ ಓಡುತ್ತಿದ್ದಾರೆಯೇ ವಿನಃ ಶಾರೀರಿಕವಾಗಿ ಯಾರೂ ಓಡುತ್ತಿಲ್ಲ. ಶಾರಿರಿಕವಾಗಿ ಓಡಿದರೆ ಆರೋಗ್ಯಕ್ಕೆ ಕನಿಷ್ಠ ಪಕ್ಷ ಸಹಕಾರಿಯಾಗುತ್ತದೆ. ನಾವು ಋಣಾತ್ಮಕ ವಿಚಾರಗಳನ್ನು ಎಷ್ಟು ತಲೆಯಿಂದ ತೆಗೆದುಹಾಕುತ್ತೆವೆಯೋ ಅಷ್ಟು ಧನಾತ್ಮಕ ವಿಚಾರಗಳು ನÀಮ್ಮ ಮನಸ್ಸಿನಲ್ಲಿ ಕುಳಿತುಕೊಳ್ಳುತ್ತವೆ. ಇದರಿಂದ ಜೀವನ ಸುಲಭವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ ಆನಂದಶೆಟ್ಟಿ ಮಾತನಾಡಿ ಸಕಾರಾತ್ಮಕ ವಿಚಾರಗಳ ಮೂಲಕ ಜನರನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯುವ ಕಾರ್ಯ ಬ್ರಹ್ಮಾಕುಮಾರಿ ಸಂಸ್ಥೆ ಅದ್ಭುತವಾಗಿ ಮಾಡುತ್ತಿದೆ. ಈ ಸಕಾರಾತ್ಮಕ ವಿಚಾರಗಳ ಧ್ಯೇಯ ಕೇವಲ ಇದೇ ವರ್ಷ ಇಟ್ಟುಕೊಳ್ಳದೇ ಪ್ರತೀ ವರ್ಷ ಜನರ ಹೃದಯದಲ್ಲಿ ಬಿತ್ತುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ಬೀದರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಬಿ.ಎಸ್.ಬಿರಾದಾರ ಮಾತನಾಡಿ ಮನುಷ್ಯನ ಜೀವನದಲ್ಲಿ ಆಧ್ಯಾತ್ಮ ಮತ್ತು ಧ್ಯಾನ ಬಹಳ ಪರಿಣಾಮ ಬೀರುತ್ತವೆ. ಧ್ಯಾನದಿಂದ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣುತ್ತೇವೆ. ಮನಸ್ಸಿನಲ್ಲಿ ಉತ್ತಮ ಭಾವನೆಗಳು ಮೂಡುತ್ತವೆ. ಉತ್ತಮ ಭಾವನೆಯಿಂದ ಜೀವನ ಉಜ್ವಲಗೊಳ್ಳುತ್ತದೆ. ಆದ್ದರಿಂದ ದುರ್ಗುಣಗಳನ್ನು ಅಳಿದು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ನಾನಕ ಝಿರಾ ಸಾಹೀಬ್ ಫೌಂಡೇಶನ್ ಉಪಾಧ್ಯಕ್ಷರಾದ ಡಾ. ರೇಷ್ಮಾ ಕೌರ್ ಮಾತನಾಡಿ ಇಂದಿನ ಯುವಕರು ಫೇಸ್ಬುಕ್ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ತಲ್ಲಿನರಾಗಿ ಜೀವನದ ನಿಜವಾದ ಅರ್ಥವನ್ನೇ ಮರೆಯುತ್ತಿದ್ದಾರೆ. ಒಬ್ಬರಿಗೊಬ್ಬರು ಭೇಟಿಯಾಗುವದು ಪ್ರೀತಿಯಿಂದ ಮಾತನಾಡುವದು ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗುವದನ್ನು ಕಡಿಮೆ ಮಾಡುತ್ತಿದ್ದಾರೆ. ಆದರಿಂದ ಆದಷ್ಟು ಮಟ್ಟಿಗೆ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಸಂದೇಶಗಳನ್ನು ನೋಡದೆ ಆತ್ಮೀಯರ ಜ್ಯೋತೆ ಭೇಟಿಯಾಗಿ ಮಾತನಾಡುವ ರೂಢಿಯನ್ನು ಬೆಳೆಶಿಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರಜಾಪಿತ ಬ್ರಾಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಪಾವನಾಧಾಮ ಕೇಂದ್ರದ ಸಂಚಾಲಕ್ಕಿ ಬಿ ಕೆ ಗುರುದೇವಿ ಬೆಹೇನ್ ಸ್ವಾಗತಿಸಿ ನಿರೂಪಿಸಿದರು ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದರು