ಪಟ್ಟಣದ ಶ್ರೀ‌ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿ ಶುಭ ಹಾರೈಸಿದರು.

ಮೂಲತಃ ಎಸ್.ಗೋಪಾಲ್ ರವರು ಕೋಲಾರ ತಾಲ್ಲೂಕಿನ ಮಡಿವಾಳ ಗ್ರಾಮದಲ್ಲಿ ಜನಿಸಿದರು, ಅವರ ನಿರಂತರ ಪರಿಶ್ರಮದಿಂದ 1984ರಲ್ಲಿ ರೇಷ್ಮೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡರು, ತದ ನಂತರದಲ್ಲಿ ಇವರ ಸೇವಾ ಕಾರ್ಯಕ್ಕೆ ಅನುಗುಣವಾಗಿ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆ ಹರಸಿ ಬಂದವು, 2004ರಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ, 2017ರಲ್ಲಿ ರಾಜಸ್ವ ನಿರೀಕ್ಷಕರಾಗಿ, 2020ರಲ್ಲಿ ಆಹಾರ ನಿರೀಕ್ಷಕರಾಗಿ ವಿವಿಧ ಇಲಾಖೆಗಳಲ್ಲಿ ಸೇವೆಯನ್ನು ಸಲ್ಲಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಇವರ ಸುದೀರ್ಘ 39 ವರ್ಷಗಳ ಸೇವಾ ಅವಧಯಲ್ಲಿ ಇದುವರೆಗೂ ಯಾವುದೇ ಭ್ರಷ್ಟಾಚಾರದ ಕಳಂಕ ಇಲ್ಲದೆ ಆಡಳಿತ ನಡೆಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಎಸ್.ಗೋಪಾಲ್ ಎಂದಾಕ್ಷಣ ತಾಲ್ಲೂಕಿನಾದ್ಯಂತ ಸಭ್ಯ, ಸೇವಾ ಮನೋಭಾವ, ಪ್ರಾಮಾಣಿಕ ವ್ಯಕ್ತಿತ್ವ ಎಂಬ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.

ಕೋಟ್: 1
ಸರ್ಕಾರ ಮತ್ತು. ಸಾರ್ವಜನಿಕರ ನಡುವೆ ಸೇತುವೆ,:
ಪ್ರಸ್ತುತ ದಿನಗಳಲ್ಲಿ ಸರ್ಕಾರದ ಯೋಜನೆಗಳು ಜನರ ಮನೆ ಬಾಳಿಗೆ ತಲುಪಿಸುವಲ್ಲಿ ಆಡಳಿತ ವರ್ಗ ಸಂಪೂರ್ಣವಾಗಿ ವಿಫಲವಾಗುವುದು, ಸಣ್ಣಪುಟ್ಟ ಕೆಲಸಗಳಿಗೆ ಲಂಚದ ಬೇಡಿಕೆ ಇಡುವಂತಹ ಹತ್ತು ಹಲವು ಪ್ರಸಂಗಗಳು ನಮ್ಮ ಕಣ್ಮುಂದೆ ಕಾಣಸಿಗುತ್ತದೆ ಆದರೆ ಇದಕ್ಕೆ ತದ್ವಿರುದ್ಧವಾದ ನಿಲುವನ್ನು ಹೊಂದಿರುವ ಎಸ್. ಗೋಪಾಲ್ ರವರು “ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸೇತುವೆಯಾಗಿ” ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ.
ಹುಣಸನಹಳ್ಳಿ ವೆಂಕಟೇಶ್ ( ಕರ್ನಾಟಕ ದಲಿತ ರೈತ ಸೇನೆ ಸಂಸ್ಥಾಪನ ಅಧ್ಯಕ್ಷ)

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಶ್ಮಿ. ಆಹಾರ ಇಲಾಖೆ ಉಪನಿರ್ದೇಶಕಿ ಶೃತಿ. ಆರ್.ಐ. ಅಜಯ್. ಪವನ್. ಕಾರ್ಯದರ್ಶಿ ಚೇತನ್. ಶಿರಸ್ತೇದಾರ್ ಚಂದ್ರು. ಅಭಿಜಿತ್. ಸಿಬ್ಬಂದಿ ವರ್ಗದವರಾದ ಮಂಜುನಾಥ್. ತಿಮ್ಮರಾಯಪ್ಪ. ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನಕುಮಾರ್. ಸುರೇಶ್. ಶ್ರೀನಿವಾಸ್. ಮತ್ತು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ‌ ಶ್ರೀನಿವಾಸ್ ಹಾಗೂ ಸದಸ್ಯರು ಹಾಜರಿದ್ದರು.

ಬಂಗಾರಪೇಟೆ: ಸರ್ಕಾರಿ ಕೆಲಸ ದೇವರ ಕೆಲಸ ಎಂಬ ನಾನ್ನುಡಿಯಂತೆ 39 ವರ್ಷಗಳ ಕಾಲ ಸುಧೀರ್ಘವಾಗಿ ಕಳಂಕ ರಹಿತವಾಗಿ, ಭ್ರಷ್ಟಾಚಾರ ಮುಕ್ತವಾಗಿ, ಸಾರ್ವಜನಿಕರ ಸೇವೆ ಮಾಡಿ ವಯೋನಿವೃತ್ತಿ ಹೊಂದಿದ ಆಹಾರ ನಿರೀಕ್ಷಕ ಎಸ್.ಗೋಪಾಲ್ ರವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು.

ಪಟ್ಟಣದ ಶ್ರೀ‌ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿ ಶುಭ ಹಾರೈಸಿದರು.

ಮೂಲತಃ ಎಸ್.ಗೋಪಾಲ್ ರವರು ಕೋಲಾರ ತಾಲ್ಲೂಕಿನ ಮಡಿವಾಳ ಗ್ರಾಮದಲ್ಲಿ ಜನಿಸಿದರು, ಅವರ ನಿರಂತರ ಪರಿಶ್ರಮದಿಂದ 1984ರಲ್ಲಿ ರೇಷ್ಮೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡರು, ತದ ನಂತರದಲ್ಲಿ ಇವರ ಸೇವಾ ಕಾರ್ಯಕ್ಕೆ ಅನುಗುಣವಾಗಿ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆ ಹರಸಿ ಬಂದವು, 2004ರಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ, 2017ರಲ್ಲಿ ರಾಜಸ್ವ ನಿರೀಕ್ಷಕರಾಗಿ, 2020ರಲ್ಲಿ ಆಹಾರ ನಿರೀಕ್ಷಕರಾಗಿ ವಿವಿಧ ಇಲಾಖೆಗಳಲ್ಲಿ ಸೇವೆಯನ್ನು ಸಲ್ಲಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಇವರ ಸುದೀರ್ಘ 39 ವರ್ಷಗಳ ಸೇವಾ ಅವಧಯಲ್ಲಿ ಇದುವರೆಗೂ ಯಾವುದೇ ಭ್ರಷ್ಟಾಚಾರದ ಕಳಂಕ ಇಲ್ಲದೆ ಆಡಳಿತ ನಡೆಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಎಸ್.ಗೋಪಾಲ್ ಎಂದಾಕ್ಷಣ ತಾಲ್ಲೂಕಿನಾದ್ಯಂತ ಸಭ್ಯ, ಸೇವಾ ಮನೋಭಾವ, ಪ್ರಾಮಾಣಿಕ ವ್ಯಕ್ತಿತ್ವ ಎಂಬ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.

ಕೋಟ್: 1
ಸರ್ಕಾರ ಮತ್ತು. ಸಾರ್ವಜನಿಕರ ನಡುವೆ ಸೇತುವೆ,:
ಪ್ರಸ್ತುತ ದಿನಗಳಲ್ಲಿ ಸರ್ಕಾರದ ಯೋಜನೆಗಳು ಜನರ ಮನೆ ಬಾಳಿಗೆ ತಲುಪಿಸುವಲ್ಲಿ ಆಡಳಿತ ವರ್ಗ ಸಂಪೂರ್ಣವಾಗಿ ವಿಫಲವಾಗುವುದು, ಸಣ್ಣಪುಟ್ಟ ಕೆಲಸಗಳಿಗೆ ಲಂಚದ ಬೇಡಿಕೆ ಇಡುವಂತಹ ಹತ್ತು ಹಲವು ಪ್ರಸಂಗಗಳು ನಮ್ಮ ಕಣ್ಮುಂದೆ ಕಾಣಸಿಗುತ್ತದೆ ಆದರೆ ಇದಕ್ಕೆ ತದ್ವಿರುದ್ಧವಾದ ನಿಲುವನ್ನು ಹೊಂದಿರುವ ಎಸ್. ಗೋಪಾಲ್ ರವರು “ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸೇತುವೆಯಾಗಿ” ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ.
ಹುಣಸನಹಳ್ಳಿ ವೆಂಕಟೇಶ್ ( ಕರ್ನಾಟಕ ದಲಿತ ರೈತ ಸೇನೆ ಸಂಸ್ಥಾಪನ ಅಧ್ಯಕ್ಷ)

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಶ್ಮಿ. ಆಹಾರ ಇಲಾಖೆ ಉಪನಿರ್ದೇಶಕಿ ಶೃತಿ. ಆರ್.ಐ. ಅಜಯ್. ಪವನ್. ಕಾರ್ಯದರ್ಶಿ ಚೇತನ್. ಶಿರಸ್ತೇದಾರ್ ಚಂದ್ರು. ಅಭಿಜಿತ್. ಸಿಬ್ಬಂದಿ ವರ್ಗದವರಾದ ಮಂಜುನಾಥ್. ತಿಮ್ಮರಾಯಪ್ಪ. ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನಕುಮಾರ್. ಸುರೇಶ್. ಶ್ರೀನಿವಾಸ್. ಮತ್ತು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ‌ ಶ್ರೀನಿವಾಸ್ ಹಾಗೂ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *