ದೇವನಹಳ್ಳಿ : ಕಳೆದ ಹಲವು ವರ್ಷಗಳಿಂದ ಶಕ್ತಿ ದೇವತೆಗಳ ಆರಾಧನಾ ಕಾರ್ಯವನ್ನು ತಾಲೂಕು ಬೂದಿಗೆರೆಯಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಣೆಗೆ ಮಾಡಿಕೊಂಡು ಬರಲಾಗುತ್ತಿದೆ ಪ್ರತಿವರ್ಷ ಗ್ರಾಮಸ್ಥರೆಲ್ಲ ಸಂಪ್ರದಾಯದಂತೆ ಶಕ್ತಿ ದೇವತೆಗಳ ಪೂಜಾ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ ಊರಿನಲ್ಲಿ ಸುಖ, ಶಾಂತಿ, ನೆಮ್ಮದಿ ಸ್ಥಾಪಿತವಾಗಿ ಕಂಟಕಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಈ ಹಿಂದಿನಿಂದಲೂ ಇದೆ ಅದರಂತೆ ಸಪ್ತ ದೇವತೆಗಳ ಜಾತ್ರಾ ಮಹೋತ್ಸವನ್ನು ನಮ್ಮ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಮುಖಂಡ ಹಾಗೂ ಬೂದಿಗೆರೆ ಗ್ರಾಮ ಪಂಚಾಯಿತಿ ಸದಸ್ಯ (ಕೋಟಿ ನಾರಾಯಣ ಸ್ವಾಮಿ) ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ಭಾನುವಾರ ಸಪ್ತ ದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಊರಿನಲ್ಲಿ ಎಲ್ಲರೂ ಭಕ್ತಿ ಭಾವದಿಂದ ದೇವತೆಗಳ ಜಾತ್ರಾ ಮಹೋತ್ಸವವನ್ನು ಆಚರಿಸುವುದರಿಂದ ನಿತ್ಯ ಜೀವನದ ಜಂಜಾಟದಲ್ಲಿ ಮುಳುಗಿರುವ ಜನರ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಉಂಟಾಗಿ ಕೃತಾರ್ಥ ಭಾವ ಮೂಡುತ್ತದೆ ಗ್ರಾಮ ದೇವತೆಗಳು ಒಲಿದರೆ ಇಷ್ಟಾರ್ಥ ಸಿದ್ದಿಸುತ್ತದೆ ಬೂದಿಗೆರೆ ಸುತ್ತಮುತ್ತಲಿನಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೂದಿಗೆರೆ ಪಂಚಾಯಿತಿ ಸದಸ್ಯರಾದ ಕೃಷ್ಣಮ್ಮಬಾಬು, ಗ್ರಾಮಸ್ಥರಾದ ವೆಂಕಟರಮಣಪ್ಪ, ಚಿನ್ನಸ್ವಾಮಿ, ಮುನಿರಾಜು, ರಾಮಚಂದ್ರ, ನಾಗೇಂದ್ರ, ವೆಂಕಟೇಶ್, ಬಿಪಿಎಲ್ ಮಂಜುನಾಥ್ ಮುಂತಾದವರು ಇದ್ದರು.
ಬೂದಿಗೆರೆಯಲ್ಲಿ ಸಪ್ತ ದೇವಿಯರ ಅದ್ದೂರಿ ಜಾತ್ರಾ ಮಹೋತ್ಸವ.
ದೇವನಹಳ್ಳಿ : ಕಳೆದ ಹಲವು ವರ್ಷಗಳಿಂದ ಶಕ್ತಿ ದೇವತೆಗಳ ಆರಾಧನಾ ಕಾರ್ಯವನ್ನು ತಾಲೂಕು ಬೂದಿಗೆರೆಯಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಣೆಗೆ ಮಾಡಿಕೊಂಡು ಬರಲಾಗುತ್ತಿದೆ ಪ್ರತಿವರ್ಷ ಗ್ರಾಮಸ್ಥರೆಲ್ಲ ಸಂಪ್ರದಾಯದಂತೆ ಶಕ್ತಿ ದೇವತೆಗಳ ಪೂಜಾ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ ಊರಿನಲ್ಲಿ ಸುಖ, ಶಾಂತಿ, ನೆಮ್ಮದಿ ಸ್ಥಾಪಿತವಾಗಿ ಕಂಟಕಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಈ ಹಿಂದಿನಿಂದಲೂ ಇದೆ ಅದರಂತೆ ಸಪ್ತ ದೇವತೆಗಳ ಜಾತ್ರಾ ಮಹೋತ್ಸವನ್ನು ನಮ್ಮ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಮುಖಂಡ ಹಾಗೂ ಬೂದಿಗೆರೆ ಗ್ರಾಮ ಪಂಚಾಯಿತಿ ಸದಸ್ಯ (ಕೋಟಿ ನಾರಾಯಣ ಸ್ವಾಮಿ) ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ಭಾನುವಾರ ಸಪ್ತ ದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಊರಿನಲ್ಲಿ ಎಲ್ಲರೂ ಭಕ್ತಿ ಭಾವದಿಂದ ದೇವತೆಗಳ ಜಾತ್ರಾ ಮಹೋತ್ಸವವನ್ನು ಆಚರಿಸುವುದರಿಂದ ನಿತ್ಯ ಜೀವನದ ಜಂಜಾಟದಲ್ಲಿ ಮುಳುಗಿರುವ ಜನರ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಉಂಟಾಗಿ ಕೃತಾರ್ಥ ಭಾವ ಮೂಡುತ್ತದೆ ಗ್ರಾಮ ದೇವತೆಗಳು ಒಲಿದರೆ ಇಷ್ಟಾರ್ಥ ಸಿದ್ದಿಸುತ್ತದೆ ಬೂದಿಗೆರೆ ಸುತ್ತಮುತ್ತಲಿನಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೂದಿಗೆರೆ ಪಂಚಾಯಿತಿ ಸದಸ್ಯರಾದ ಕೃಷ್ಣಮ್ಮಬಾಬು, ಗ್ರಾಮಸ್ಥರಾದ ವೆಂಕಟರಮಣಪ್ಪ, ಚಿನ್ನಸ್ವಾಮಿ, ಮುನಿರಾಜು, ರಾಮಚಂದ್ರ, ನಾಗೇಂದ್ರ, ವೆಂಕಟೇಶ್, ಬಿಪಿಎಲ್ ಮಂಜುನಾಥ್ ಮುಂತಾದವರು ಇದ್ದರು.