ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ದೊಡ್ಡಜಾಲ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳಾಗಿದ್ದ ದೊಡ್ಡಜಾಲ ಗ್ರಾಮದ ಆರ್ ಬೈರೇಗೌಡ, ಉಪಾಧ್ಯಕ್ಷರಾಗಿ ನವರತ್ನ ಅಗ್ರಹಾರ ಗ್ರಾಮದ ಗೌರಮ್ಮ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡಜಾಲ ಗ್ರಾ.ಪಂ.ಯಲ್ಲಿ ಒಟ್ಟು 14 ಜನ ಸದಸ್ಯರಿದ್ದು, ಗುರುವಾರ ನಡೆದ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್ ಬೈರೇಗೌಡ, ಉಪಾಧ್ಯಕ್ಷರಾಗಿ ಗೌರಮ್ಮ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ನೂತನ ಅಧ್ಯಕ್ಷ ಆರ್ ಬೈರೇಗೌಡ ಮಾತನಾಡಿ ನೂತನ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷ ಉಂಟು ಮಾಡಿದ್ದು, ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ ಅನಂತ ಧನ್ಯವಾದಗಳು. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರಗತಿಯ ನಿಟ್ಟಿನಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆಗಳನ್ನು ಪುರಸ್ಕರಿಸಿ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಬ್ಯಾಟರಾಯನಪುರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಗೌರವ ಸನ್ಮಾನ ನೀಡಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ದಾನೇಗೌಡ, ಎ.ಪಿ.ಕೃಷ್ಣಪ್ಪ, ಮಾಜಿ ಗ್ರಾ.ಪಂ.ಅಧ್ಯಕ್ಷ ಹಾಲಿ ಸದಸ್ಯ ಎನ್ ಕೆ ಮಹೇಶ್ ಕುಮಾರ್, ಹಂಸವೇಣಿ, ಶೃತಿ, ಗೀತಾ, ಭಾಗ್ಯಮ್ಮ, ಮುಖಂಡರಾದ ಮುನಿಯಪ್ಪ, ಚನ್ನಕೃಷ್ಣಪ್ಪ, ಎ ಸಿ ಗೋವಿಂದರಾಜು, ದೊಡ್ಡೇಗೌಡ, ಅಪ್ಪಾಜಿ, ಚಂದ್ರಪ್ಪ ಪಿ., ಶಿವಕುಮಾರ್, ನಾಣಿ ಸೇರಿದಂತೆ ಗ್ರಾ. ಪಂ. ಸರ್ವ ಸದಸ್ಯರಿದ್ದರು.
ದೊಡ್ಡಜಾಲ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ :
ಅಧ್ಯಕ್ಷರಾಗಿ ಆರ್ ಬೈರೇಗೌಡ ಉಪಾಧ್ಯಕ್ಷರಾಗಿ ಗೌರಮ್ಮ ಕೃಷ್ಣಪ್ಪ ಅವಿರೋಧ ಆಯ್ಕೆ :
ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ದೊಡ್ಡಜಾಲ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳಾಗಿದ್ದ ದೊಡ್ಡಜಾಲ ಗ್ರಾಮದ ಆರ್ ಬೈರೇಗೌಡ, ಉಪಾಧ್ಯಕ್ಷರಾಗಿ ನವರತ್ನ ಅಗ್ರಹಾರ ಗ್ರಾಮದ ಗೌರಮ್ಮ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡಜಾಲ ಗ್ರಾ.ಪಂ.ಯಲ್ಲಿ ಒಟ್ಟು 14 ಜನ ಸದಸ್ಯರಿದ್ದು, ಗುರುವಾರ ನಡೆದ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್ ಬೈರೇಗೌಡ, ಉಪಾಧ್ಯಕ್ಷರಾಗಿ ಗೌರಮ್ಮ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ನೂತನ ಅಧ್ಯಕ್ಷ ಆರ್ ಬೈರೇಗೌಡ ಮಾತನಾಡಿ ನೂತನ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷ ಉಂಟು ಮಾಡಿದ್ದು, ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ ಅನಂತ ಧನ್ಯವಾದಗಳು. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರಗತಿಯ ನಿಟ್ಟಿನಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆಗಳನ್ನು ಪುರಸ್ಕರಿಸಿ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಬ್ಯಾಟರಾಯನಪುರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಗೌರವ ಸನ್ಮಾನ ನೀಡಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ದಾನೇಗೌಡ, ಎ.ಪಿ.ಕೃಷ್ಣಪ್ಪ, ಮಾಜಿ ಗ್ರಾ.ಪಂ.ಅಧ್ಯಕ್ಷ ಹಾಲಿ ಸದಸ್ಯ ಎನ್ ಕೆ ಮಹೇಶ್ ಕುಮಾರ್, ಹಂಸವೇಣಿ, ಶೃತಿ, ಗೀತಾ, ಭಾಗ್ಯಮ್ಮ, ಮುಖಂಡರಾದ ಮುನಿಯಪ್ಪ, ಚನ್ನಕೃಷ್ಣಪ್ಪ, ಎ ಸಿ ಗೋವಿಂದರಾಜು, ದೊಡ್ಡೇಗೌಡ, ಅಪ್ಪಾಜಿ, ಚಂದ್ರಪ್ಪ ಪಿ., ಶಿವಕುಮಾರ್, ನಾಣಿ ಸೇರಿದಂತೆ ಗ್ರಾ. ಪಂ. ಸರ್ವ ಸದಸ್ಯರಿದ್ದರು.