ಡೆವಲಪ್ಮೆಂಟ್ ಆಫ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಪುಸ್ತಕ ಬಿಡುಗಡೆ :
ಬ್ಯಾಟರಾಯನಪುರ : ಕ್ಷೇತ್ರದ ನವರತ್ನ ಅಗ್ರಹಾರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಮತ್ತು ಆಳವಾದ ಅಧ್ಯಯನ ನಡೆಸಿರುವ 97 ವರ್ಷದ ಎಸ್ಜಿಕೆ ಮೂರ್ತಿ ರವರಿಂದ ರಚಿತವಾಗಿರುವ ‘ಡೆವಲಪ್ಮೆಂಟ್ ಆಫ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್’ ಪುಸ್ತಕವನ್ನು ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎಸ್. ಮುರುಳೀಧರ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು ಎಸ್ ಜಿ ಕೆ ಮೂರ್ತಿಯವರು ಮಿಲಿಟರಿ ಇಂಜಿನಿಯರಿಂಗ್ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಲ್ಲಿ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಛಾಪು ಮೂಡಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿರುವ ಎಸ್ ಜಿ ಕೆ ಮೂರ್ತಿಯವರು, ವಿಶಾಖಪಟ್ಟಣದಲ್ಲಿರುವ ನೇವಲ್ ಆರ್ನಮೆಂಟ್ ಡಿಪೋ, ಬೆಂಗಳೂರು ನಗರದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಹಿಂದೂಸ್ತಾನ್ ಲಿವರ್ ಲಿಮಿಟೆಡ್ ಸೇರಿದಂತೆ ಹಲವು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುವ ಮೂಲಕ ಕೊಡುಗೆ ನೀಡಿದ್ದಾರೆ.
ಪಂಚತಾರಾ ಹೋಟೆಲ್ಗಳ ನಿರ್ಮಾಣದಲ್ಲೂ ಇವರ ಕೌಶಲ ಎದ್ದು ಕಾಣುತ್ತದೆ. ಮುಂಬೈನ ಸಾಂತಾಕ್ರೂಜ್ ವಿಮಾನ ನಿಲ್ದಾಣದಲ್ಲಿರುವ ಸೆಂಟರ್ ಹೋಟೆಲ್ ಹಾಗೂ ಯಾಕ್ ಹೋಟೆಲ್ನಲ್ಲಿ ಇವರ ಇಂಜಿನಿಯರಿಂಗ್ ಪ್ರತಿಭೆ ಎದ್ದುಕಾಣುತ್ತದೆ. ನೂರಾರು ಕೊಠಡಿಗಳನ್ನು ನಿರ್ಮಿಸುವುದು ಅಷ್ಟು ಸುಲಭ ಅಲ್ಲ. ಆದರೆ ಮೂರ್ತಿ ಅವರಿಗೆ ಇದು ಸಲೀಸಾಗಿತ್ತು ಎಂದು ಅವರ ಕಾರ್ಯಸಾಧನೆಯನ್ನು ಶ್ಲಾಘಿಸಿದರು.
ಸ್ಟರ್ಲಿಂಗ್ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈ. ಲಿಮಿಟೆಡ್ ನಿರ್ದೇಶಕ ಎಂ.ಎನ್. ನಾಗೇಂದ್ರ ಕುಮಾರ್ ಮಾತನಾಡಿ ಮೂರ್ತಿ ಅವರ ಪ್ರತಿಭೆ ಆಗಾಧವಾದುದು, ಹೀಗಾಗಿ ಅವರು ಸೇವೆ ಸಲ್ಲಿಸಿದ ಕಡೆಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆತಿಥ್ಯ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಇವರ ಸಾಧನೆ ಅಪಾರವಾದುದು. ಬಿಡುಗಡೆಯಾಗಿರುವ ಈ ಕೃತಿಯಲ್ಲಿ ಹೋಟೆಲ್, ಪ್ರವಾಸೋದ್ಯಮದ ಬಗ್ಗೆ ಉತ್ತಮ ಮಾಹಿತಿ ಇದೆ. ಹೊಸದಾಗಿ ಆತಿಥ್ಯ ಕ್ಷೇತ್ರಕ್ಕೆ ಪ್ರವೇಶ ಮಾಡುವವರಿಗೆ ಈ ಪುಸ್ತಕ ಮಾರ್ಗದರ್ಶಿ ಕೈಪಿಡಿಯಾಗಿದೆ ಎಂದರು.
97 ವರ್ಷದ ಇಂಜಿನಿಯರ್ ವಿನೂತನ ಪ್ರಯತ್ನ :
ಡೆವಲಪ್ಮೆಂಟ್ ಆಫ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಪುಸ್ತಕ ಬಿಡುಗಡೆ :
ಬ್ಯಾಟರಾಯನಪುರ : ಕ್ಷೇತ್ರದ ನವರತ್ನ ಅಗ್ರಹಾರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಮತ್ತು ಆಳವಾದ ಅಧ್ಯಯನ ನಡೆಸಿರುವ 97 ವರ್ಷದ ಎಸ್ಜಿಕೆ ಮೂರ್ತಿ ರವರಿಂದ ರಚಿತವಾಗಿರುವ ‘ಡೆವಲಪ್ಮೆಂಟ್ ಆಫ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್’ ಪುಸ್ತಕವನ್ನು ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎಸ್. ಮುರುಳೀಧರ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು ಎಸ್ ಜಿ ಕೆ ಮೂರ್ತಿಯವರು ಮಿಲಿಟರಿ ಇಂಜಿನಿಯರಿಂಗ್ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಲ್ಲಿ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಛಾಪು ಮೂಡಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿರುವ ಎಸ್ ಜಿ ಕೆ ಮೂರ್ತಿಯವರು, ವಿಶಾಖಪಟ್ಟಣದಲ್ಲಿರುವ ನೇವಲ್ ಆರ್ನಮೆಂಟ್ ಡಿಪೋ, ಬೆಂಗಳೂರು ನಗರದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಹಿಂದೂಸ್ತಾನ್ ಲಿವರ್ ಲಿಮಿಟೆಡ್ ಸೇರಿದಂತೆ ಹಲವು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುವ ಮೂಲಕ ಕೊಡುಗೆ ನೀಡಿದ್ದಾರೆ.
ಪಂಚತಾರಾ ಹೋಟೆಲ್ಗಳ ನಿರ್ಮಾಣದಲ್ಲೂ ಇವರ ಕೌಶಲ ಎದ್ದು ಕಾಣುತ್ತದೆ. ಮುಂಬೈನ ಸಾಂತಾಕ್ರೂಜ್ ವಿಮಾನ ನಿಲ್ದಾಣದಲ್ಲಿರುವ ಸೆಂಟರ್ ಹೋಟೆಲ್ ಹಾಗೂ ಯಾಕ್ ಹೋಟೆಲ್ನಲ್ಲಿ ಇವರ ಇಂಜಿನಿಯರಿಂಗ್ ಪ್ರತಿಭೆ ಎದ್ದುಕಾಣುತ್ತದೆ. ನೂರಾರು ಕೊಠಡಿಗಳನ್ನು ನಿರ್ಮಿಸುವುದು ಅಷ್ಟು ಸುಲಭ ಅಲ್ಲ. ಆದರೆ ಮೂರ್ತಿ ಅವರಿಗೆ ಇದು ಸಲೀಸಾಗಿತ್ತು ಎಂದು ಅವರ ಕಾರ್ಯಸಾಧನೆಯನ್ನು ಶ್ಲಾಘಿಸಿದರು.
ಸ್ಟರ್ಲಿಂಗ್ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈ. ಲಿಮಿಟೆಡ್ ನಿರ್ದೇಶಕ ಎಂ.ಎನ್. ನಾಗೇಂದ್ರ ಕುಮಾರ್ ಮಾತನಾಡಿ ಮೂರ್ತಿ ಅವರ ಪ್ರತಿಭೆ ಆಗಾಧವಾದುದು, ಹೀಗಾಗಿ ಅವರು ಸೇವೆ ಸಲ್ಲಿಸಿದ ಕಡೆಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆತಿಥ್ಯ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಇವರ ಸಾಧನೆ ಅಪಾರವಾದುದು. ಬಿಡುಗಡೆಯಾಗಿರುವ ಈ ಕೃತಿಯಲ್ಲಿ ಹೋಟೆಲ್, ಪ್ರವಾಸೋದ್ಯಮದ ಬಗ್ಗೆ ಉತ್ತಮ ಮಾಹಿತಿ ಇದೆ. ಹೊಸದಾಗಿ ಆತಿಥ್ಯ ಕ್ಷೇತ್ರಕ್ಕೆ ಪ್ರವೇಶ ಮಾಡುವವರಿಗೆ ಈ ಪುಸ್ತಕ ಮಾರ್ಗದರ್ಶಿ ಕೈಪಿಡಿಯಾಗಿದೆ ಎಂದರು.