ಬಂಗಾರಪೇಟೆ,ಆ.೧೭: ಗಡಿಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ವೈದ್ಯರನ್ನು ನೇಮಕ ಮಾಡಿ ಕೋಮಾ ಸ್ಥಿತಿಯಲ್ಲಿರುವ ಡಯಾಲಿಸಿಸ್ ಯಂತ್ರಗಳಿಗೆ ಮುಕ್ತಿ ನೀಡಿ ಜನಸಾಮಾನ್ಯರ ಆರೋಗ್ಯ ರಕ್ಷಣೆ ಮಾಡಬೇಕೆಂದು ಆ.೨೨ ರ ಮಂಗಳವಾರ ತಾಲ್ಲೂಕು ಆಸ್ಪತ್ರೆ ಮುಂದೆ ಜಾನುವಾರುಗಳ ಸಮೇತ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಗಡಿಭಾಗದ ಯರಗೋಳ್, ಗ್ರಾಮದ ಪಂಚಾಯಿತಿ ಕಟ್ಟೆಯಲ್ಲಿ ಸೇರಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಗ್ರಾಮೀಣ ಜನರಿಗೆ ಆರೋಗ್ಯ ಭಾಗ್ಯ ಒದಗಿಸುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋಟ್ಯಾಂತರ ಅನುದಾನದಲ್ಲಿ ಅಭಿವೃದ್ದಿಪಡಿಸಿರುವ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಗಡಿಭಾಗದ ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರಿಗೆ ಆರೋಗ್ಯ ಮರಿಚೀಕೆಯಾಗಿ ಜ್ವರ ಬಂದರೆ ನಗರದ ತಾಲ್ಲೂಕು ಆಸ್ಪತ್ರೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ ಎಂದು ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುವ ಕೆಲವು ವೈದ್ಯರು ಸಿಬ್ಬಂದಿ ಹಾಜರಾತಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ೨-೩ ದಿನ ಒಮ್ಮೆಲೆ ಸಹಿ ಮಾಡುವ ದಂದೆಗೆ ತಾಲ್ಲೂಕು ಆರೋಗ್ಯಾಧಿಕಾರಿಗಳು ರಕ್ಷಣೆ ಆಗಿ ನಿಂತಿರುವುದು ದುರಾದೃಷ್ಠಕರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿ.ಹೆಚ್,ಒ , ಪಿ,ಹೆಚ್.ಸಿ.ಒ ನರ್ಸ್ಗಳು , ಹಿರಿಯ ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತರು ಸೇರಿ ಒಟ್ಟು ೩೦ ಮಂದಿ ಕೆಲಸ ನಿರ್ವಹಿಸಿ ಸಂಬಳ ಪಡೆಯುತ್ತಿದ್ದರೂ ಬಡವರ ಆರೋಗ್ಯ ಎಂಬುದು ಖಾಸಗಿ ಆಸ್ಪತ್ರೆ ನಕಲಿ ಕ್ಲೀನಿಕ್‌ಗಳ ವೈದ್ಯರನ್ನು ಅವಲಂಬಿಸಿರುವ ಮಟ್ಟಕ್ಕೆ ಉಪ ಕೇಂದ್ರಗಳು ಹದಗೆಟ್ಟಿವೆ ಎಂದು ಆರೋಪ ಮಾಡಿದರು.
ಕಾಮಸಮುದ್ರ ಹೋಬಳಿ ಅದ್ಯಕ್ಷ ಮುನಿಕೃಷ್ಣ ಮಾತನಾಡಿ ಕೋಟ್ಯಾಂತರ ರೂಪಾಯಿ ಜನರ ತೆರಿಗೆ ಹಣದಲ್ಲಿ ತೆರೆದಿರುವ ಡಯಾಲಿಸಿಸ್ ಯಂತ್ರಗಳು ನುರಿತ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಕೋಮಾ ಸ್ಥಿತಿಯಲ್ಲಿರುವ ರೋಗಿಯಂತಾಗಿರುವ ಕೇಂದ್ರಗಳನ್ನು ತೆರೆದು ಕಿಡ್ನಿ ವೈಪಲ್ಯ ಸಮಸ್ಯೆಯಿಂದ ನರಳುತ್ತಿರುವ ರೋಗಿಗಳಿಗೆ ಉಚಿತ ಸೇವೆ ನೀಡುವಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ವಿಪಲವಾಗಿದ್ದಾರೆಂದು ಕಿಡಿಕಾರಿದರು.
ಗಡಿಭಾಗದ ಜನರ ತುರ್ತು ಪರಿಸ್ಥಿತಿ, ಅಪಘಾತ, ಹೆರಿಗೆ, ಮತ್ತಿತರ ಸಮಯದಲ್ಲಿ ರೋಗಿಗಳ ಸಮಸ್ಯೆಗೆ ಸ್ಪಂದಿಸಬೇಕಾದ ಸರ್ಕಾರಿ ಸೇವೆಯ ೧೦೮ ಆಂಬ್ಯೂಲೆನ್ಸ್ ಸೇವೆ ಯಮಲೋಕ ತೋರಿಸುವ ಸೇವೆಯಾಗಿ ಮಾರ್ಪಟ್ಟಿದೆ. ಕರೆ ಮಾಡಿದರೆ ಕಾಮಿಡಿ ಸಿನಿಮಾದಂತೆ ೨ ಗಂಟೆಗಳ ಕಾಲ ಸಿನಿಮಾ ಹಾಡುಗಳನ್ನು ಕೇಳಿಸಿ ರೋಗಿ ಪ್ರಾಣ ಕಳೆದುಕೊಂಡ ಮೇಲೆ ನಿಮ್ಮ ವಿಳಾಸ ಕೊಡಿ ಆಂಬ್ಯೂಲೆನ್ಸ್ ಬರುತ್ತಿದೆ ಎಂದು ಬೇಜವಬ್ದಾರಿಯಿಂದ ವರ್ತಿಸುವ ೧೦೮ ಖಾಸಗಿ ಸಿಬ್ಬಂದಿ ವಿರುದ್ದ ಕ್ರಮ ಕೈಗೊಂಡು ಪ್ರತಿ ಆರೋಗ್ಯ ಕೇಂದ್ರಗಳ ಹತ್ತಿರ ೨ ಆಂಬ್ಯೂಲೆನ್ಸ್ ವ್ಯವಸ್ಥೆ ಮಾಡಿ ಜನಸಾಮಾನ್ಯರ ತುರ್ತು ಪರಿಸ್ಥಿತಿಯಲ್ಲಿ ಸ್ಪಂದಿಸುವAತೆ ಸಭೆಯಲ್ಲಿ ಒತ್ತಾಯಿಸಿದರು.
ಆ.೨೨ ರ ಮಂಗಳವಾರ ಗಡಿಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ವೈದ್ಯರನ್ನು ನೇಮಕ ಮಾಡಿ ಕೋಮಾ ಸ್ಥಿತಿಯಲ್ಲಿರುವ ಡಯಾಲಿಸಿಸ್ ಯಂತ್ರಗಳಿಗೆ ಮುಕ್ತಿ ನೀಡಿ ೧೦೮ ಆಂಬ್ಯೂಲೆನ್ಸ್ ಸೇವೆ ಸರಿಪಡಿಸಿ ಜನಸಾಮಾನ್ಯರ ಆರೋಗ್ಯ ರಕ್ಷಣೆ ಮಾಡಬೇಕೆಂದು ತಾಲ್ಲೂಕು ಆಸ್ಪತ್ರೆ ಮುಂದೆ ಜಾನುವಾರುಗಳ ಸಮೇತ ಮುತ್ತಿಗೆ ಹಾಕಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾ.ಅ ಕದರಿನತ್ತ ಅಪ್ಪೋಜಿರಾವ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಾಂದ್‌ಪಾಷ, ಯಾರಂಘಟ್ಟ ಗಿರೀಶ್, ಮೂರಂಡಹಳ್ಳಿ ಶಿವಾರೆಡ್ಡಿ, ಮಂಗಸAದ್ರ ತಿಮ್ಮಣ್ಣ, ಬೀಮಗಾನಹಳ್ಳಿ ವಿಶ್ವ, ಗರಡು ಕೆಂಪನಳ್ಳಿ ಮುನಿರಾಜು, ಲಕ್ಷö್ಮಣ್, ಮಾಲೂರು ತಾ.ಅಧ್ಯಕ್ಷ ಯಲ್ಲಣ್ಣ, ಹರೀಶ್, ರಾಮಸಾಗರ ವೇಣು, ಬಾಬು, ಗೋವಿಂದಪ್ಪ, ಮುನೇಂದ್ರರಾವ್, ಸಂತೋಜಿರಾವ್, ಮುಂತಾದವರು ಇದ್ದರು.

Leave a Reply

Your email address will not be published. Required fields are marked *