ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಬಳಿ ಅಮಾನುಷವಾಗಿ ಅತ್ಯಾಚಾರ ಮತ್ತು ಕೊಲೆಗೀಡಾಗಿದ್ದ ಸೌಜನ್ಯ ಪ್ರಕರಣ ಇತ್ತೀಚಿಗೆ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿದೆ. ಆರೋಪಿ ಸಂತೋಷ್ ನಿರ್ದೋಷಿ ಎಂದು ನ್ಯಾಯಾಲಯವೇ ತೀರ್ಪು ನೀಡಿರುವುದು ಸೌಜನ್ಯ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತಿರುವ ಸೌಜನ್ಯ ಪರ ಹೋರಾಟಗಾರರಿಗೆ ಮತ್ತಷ್ಟು ಬಲ ಬಂದಿದ್ದು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಭಾಗಗಳಲ್ಲಿ ಅಪಾರ ಜನ ಬೆಂಬಲ ವ್ಯಕ್ತವಾಗಿದೆ.

ಕೇವಲ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ್ಯಂತ ಸೌಜನ್ಯಳಂತಹ ಮುಗ್ಧ ಹುಡುಗಿಯ ಸಾವಿಗೆ ನ್ಯಾಯ ದೊರಕಬೇಕೆಂಬ ಕೂಗು ಕೇಳಿ ಬರುತ್ತಿದ್ದು,ಇದೇ ಪ್ರಕರಣವನ್ನು ಸ್ಪೂರ್ತಿಯಾಗಿಟ್ಟುಕೊಂಡು ನಟ ನಿರ್ಮಾಪಕ ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ತುಮಕೂರು ತಮ್ಮ ಸಂವಿಧಾನ ಸಿನಿ ಕಂಬೈನ್ಸ್ ಲಾಂಛನದಡಿಯಲ್ಲಿ ಜಸ್ಟಿಸ್ ಫಾರ್ ಸೌಮ್ಯ ಎಂಬ ಚಿತ್ರವನ್ನು ಕಥೆ ಚಿತ್ರಕಥೆ ಬರೆದು ನಿರ್ಮಿಸಲು ಹೊರಟಿದ್ದು ನಿರ್ದೇಶನದ ಹೊಣೆಯನ್ನು ಅವರೇ ಹೊತ್ತಿದ್ದಾರೆ.

ಇತ್ತೀಚೆಗೆ ತುಮಕೂರಿನಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಚಿತ್ರದ ಟೈಟಲ್ ಅನಾವರಣ ಮಾಡಿ ಸೌಜನ್ಯ ಪ್ರಕರಣದ ಹೋರಾಟಕ್ಕೆ ಪೂರಕವಾಗಿ ಚಿತ್ರ ನಿರ್ಮಿಸುತ್ತಿರುವ ಚಿತ್ರತಂಡಕ್ಕೆ ಶುಭಕೋರಿ ಚಿತ್ರವು ನನ್ನ ಮಗಳು ಸೌಜನ್ಯಳಂತಹ ಮುಗ್ಧ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಕೊನೆ ಆಗಬೇಕು. ಅದಕ್ಕೆ ರಾಜ್ಯಾದ್ಯಂತ ಎಲ್ಲಾ ವರ್ಗದ ಜನರು ನಮ್ಮ ಬೆಂಬಲಕ್ಕೆ ನಿಲ್ಲಬೇಕು. ಸೌಜನ್ಯ ಪ್ರಕರಣ ಮುಗಿದು ಹೋದ ಕಥೆ ಎಂಬ ಮನಸ್ಥಿತಿಯಲ್ಲಿರುವ ಸರ್ಕಾರ ಕೇವಲ ಸೌಜನ್ಯ ಮಾತ್ರವಲ್ಲ ಅವಳಂತಹ ನೂರಾರು ಮುಗ್ದ ಹೆಣ್ಣು ಮಕ್ಕಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಹೋರಾಟದ ತೀವ್ರತೆಗೆ ಇಂತಹ ಚಿತ್ರಗಳು ನೆರವಿಗೆ ಬರಬೇಕು ಎಂದರು.

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅರ್ಜುನ್ ಪಾಳೇಗಾರ ರವರು ಮಾತನಾಡಿ ಇದು ಕೇವಲ ಸೌಜನ್ಯಲಂತಹ ಒಬ್ಬಳು ಹೆಣ್ಣು ಮಗಳ ಕಥೆಯಲ್ಲ,ನಾಡಿನ ದೇಶದ ಪ್ರತಿಯೊಂದು ಮನೆಯ ಹೆಣ್ಣು ಮಕ್ಕಳ ಕರುಣಾಜನಕ ಕಥೆ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ದೌರ್ಜನ್ಯ ಅತ್ಯಾಚಾರದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ಪ್ರತಿಯೊಬ್ಬರ ಕಥೆ ಎಂದರು.

ನಿರ್ಮಾಪಕ ನಿರ್ದೇಶಕ ಟೈಗರ್ ನಾಗ್ ತುಮಕೂರು ಮಾತನಾಡುತ್ತಾ ರಾಜ್ಯದಲ್ಲಿ ನಡೆಯುತ್ತಿರುವ ನೈಜ ವಿದ್ಯಮಾನಗಳನ್ನು ಗಮನಿಸಿ ಅವುಗಳಿಂದ ಸ್ಪೂರ್ತಿ ಪಡೆದು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ ನಿಮ್ಮೆಲ್ಲರಿಗೂ ತಿಳಿದ ಹಾಗೆ ನನ್ನ ಸಂಸ್ಥೆಯ ಮೊದಲ ಚಿತ್ರ ಅಡವಿ ಸಿನಿಮಾ ಪೂರ್ಣಗೊಂಡು ಕೊನೆ ಹಂತಕ್ಕೆ ತಲುಪಿದೆ DTS ಕಾರ್ಯ ನಡೆಯುತ್ತಿದೆ,‌ ಇಂದು ಸಂವಿಧಾನ ಸಿನಿ ಕಂಬೈನ್ಸ್ ಸಂಸ್ಥೆಯ ಮುಂದಿನ ಸಿನಿಮಾ ಜಸ್ಟೀಸ್ ಫಾರ್ ಸೌಮ್ಯ ಚಿತ್ರದ ಶೀರ್ಷಿಕೆ ಅನಾವರಣವನ್ನು ಇಂದು ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸಹೋದರಿ ಸೌಜನ್ಯಳ ತಾಯಿ ಶ್ರೀಮತಿ ಕುಸುಮಾವತಿ ಅವರಿಂದ ಬಿಡುಗಡೆ ಮಾಡಲಾಯಿತು. ಈ ಚಿತ್ರದಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿ ಇಟ್ಟುಕೊಂಡು ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಅತ್ಯಾಚಾರ ಶೋಷಣೆ ಅಮಾಯಕರ ಕೊಲೆ ಮತ್ತು ಧಾರ್ಮಿಕ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ತಂತ್ರಗಾರಿಕೆ ವಂಚನೆ ದಬ್ಬಾಳಿಕೆ ಧಾರ್ಮಿಕ ಹೆಸರಿನಲ್ಲಿ ದಲಿತರ ಭೂಮಿ ಕಬ್ಬಳಿಕೆ ಎಲ್ಲವನ್ನೂ ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಜನಾಂದೋಲನದ ಮುಂದೆ ಎಳೆ ಎಳೆಯಾಗಿ ನೈಜತೆ ಸತ್ಯ ತೆರೆದಿಡುಲು ಮುಂದಾಗಿದ್ದೇವೆ ಈಗಾಗಲೇ ರಾಜ್ಯದ ದಲಿತ ಸಂಘಟನೆಗಳು ಪ್ರಗತಿಪರರು ಬುದ್ದಿ ಜೀವಿಗಳಿಗು ಕನ್ನಡ ಪರ ಸಂಘಟನೆಗಳು ಮಾನವ ಹಕ್ಕುಗಳ ಸಂಸ್ಥೆ ಸೇರಿದಂತೆ ಹಲವು ಸಂಘಟನೆಗಳು ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ, ಶೇಕಡಾ 80% ಸೌಜನ್ಯ ಗೆ ನ್ಯಾಯ ಕೊಡಿಸಲು ದ್ವನಿ ಎತ್ತಿ ಪರವಾಗಿ ನಿಂತಿದ್ದಾರೆ ಈ ಅನ್ಯಾಯವನ್ನು ಇಡೀ ದೇಶ ಕಂಡಿಸುತ್ತಿದೆ ಎಂದು ಹೇಳಿದ್ದಾರೆ. ಈ ಚಿತ್ರವು ಫ್ರೀ ಪ್ರೊಡಕ್ಷನ್ ಕೆಲಸ ಮುಗಿಸಿ ಮುಂದಿನ ವಾರದಿಂದ ಚಿತ್ರೀಕರಣ ಮಾಡಲು ತಯಾರಾಗಿದ್ದೇವೆ ಅದ್ದೂರಿ ವೆಚ್ಚದಲ್ಲಿ ಯಾವುದೇ ಕೊರತೆ ಇಲ್ಲದೆ ಅಚ್ಚುಕಟ್ಟಾಗಿ ಸಿನಿಮಾ ಮಾಡಲು ಪ್ಲಾನ್ ಮಾಡಿದ್ದೇವೆ ಚಿತ್ರದಲ್ಲಿ ಮಹೇಶ್ ತಿಮ್ಮರೋಡಿ ಪಾತ್ರದಲ್ಲಿ ಚಿತ್ರದ ನಾಯಕ ಅರ್ಜುನ್ ಪಾಳ್ಳೇಗಾರ ಹೊತ್ತಿದ್ದಾರೆ ನಿರಪರಾಧಿ ಸಂತೋಷ್ ರಾವ್ ಪಾತ್ರದಲ್ಲಿ ಅರ್ಜುನ್ ಕೃಷ್ಣ, ಕಾಣಿಸಿಕೊಳ್ಳುತ್ತಿದ್ದಾರೆ ಕಾಮುಕರ ಕಾಮದಾಸಗೆ ಬಲಿಯಾದ ಸಹೋದರಿ ಸೌಜನ್ಯ ಪಾತ್ರದಲ್ಲಿ ವನಿತಾ ನಿಭಾಯಿಸುತ್ತಿದ್ದಾರೆ. ಶಿವಮೊಗ್ಗ ರಾಮಣ್ಣ ನಿರ್ಮಲಾ ಸಿದ್ದಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿಪಿನ್ ವಿ ರಾಜ್ ಛಾಯಾಗ್ರಹಣ. ಮಂಜು ಮಹಾದೇವ ಎರಡು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಕೆ. ಮಂಜು ಕೋಟೆಕೆರೆ ಸಂಭಾಷಣೆಯ ಒರೆಯನ್ನುತ್ತಿದ್ದಾರೆ ಮುಂದಿನ ವಾರದಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ನಿರ್ಮಾಪಕ ನಿರ್ದೇಶಕ ಟೈಗರ್ ನಾಗ್ ತುಮಕೂರು ತಿಳಿಸಿದ್ದಾರೆ.

ಸಂವಿಧಾನ ಸಿನಿ ಕಂಬೈನ್ಸ್ ಲಾಂಛನದಡಿ ಜಸ್ಟಿಸ್ ಫಾರ್ ಸೌಮ್ಯ ಎಂಬ ಚಿತ್ರದ ಟೈಟಲ್ ಬಿಡುಗಡೆ

ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಬಳಿ ಅಮಾನುಷವಾಗಿ ಅತ್ಯಾಚಾರ ಮತ್ತು ಕೊಲೆಗೀಡಾಗಿದ್ದ ಸೌಜನ್ಯ ಪ್ರಕರಣ ಇತ್ತೀಚಿಗೆ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿದೆ. ಆರೋಪಿ ಸಂತೋಷ್ ನಿರ್ದೋಷಿ ಎಂದು ನ್ಯಾಯಾಲಯವೇ ತೀರ್ಪು ನೀಡಿರುವುದು ಸೌಜನ್ಯ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತಿರುವ ಸೌಜನ್ಯ ಪರ ಹೋರಾಟಗಾರರಿಗೆ ಮತ್ತಷ್ಟು ಬಲ ಬಂದಿದ್ದು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಭಾಗಗಳಲ್ಲಿ ಅಪಾರ ಜನ ಬೆಂಬಲ ವ್ಯಕ್ತವಾಗಿದೆ.

ಕೇವಲ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ್ಯಂತ ಸೌಜನ್ಯಳಂತಹ ಮುಗ್ಧ ಹುಡುಗಿಯ ಸಾವಿಗೆ ನ್ಯಾಯ ದೊರಕಬೇಕೆಂಬ ಕೂಗು ಕೇಳಿ ಬರುತ್ತಿದ್ದು,ಇದೇ ಪ್ರಕರಣವನ್ನು ಸ್ಪೂರ್ತಿಯಾಗಿಟ್ಟುಕೊಂಡು ನಟ ನಿರ್ಮಾಪಕ ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ತುಮಕೂರು ತಮ್ಮ ಸಂವಿಧಾನ ಸಿನಿ ಕಂಬೈನ್ಸ್ ಲಾಂಛನದಡಿಯಲ್ಲಿ ಜಸ್ಟಿಸ್ ಫಾರ್ ಸೌಮ್ಯ ಎಂಬ ಚಿತ್ರವನ್ನು ಕಥೆ ಚಿತ್ರಕಥೆ ಬರೆದು ನಿರ್ಮಿಸಲು ಹೊರಟಿದ್ದು ನಿರ್ದೇಶನದ ಹೊಣೆಯನ್ನು ಅವರೇ ಹೊತ್ತಿದ್ದಾರೆ.

ಇತ್ತೀಚೆಗೆ ತುಮಕೂರಿನಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಚಿತ್ರದ ಟೈಟಲ್ ಅನಾವರಣ ಮಾಡಿ ಸೌಜನ್ಯ ಪ್ರಕರಣದ ಹೋರಾಟಕ್ಕೆ ಪೂರಕವಾಗಿ ಚಿತ್ರ ನಿರ್ಮಿಸುತ್ತಿರುವ ಚಿತ್ರತಂಡಕ್ಕೆ ಶುಭಕೋರಿ ಚಿತ್ರವು ನನ್ನ ಮಗಳು ಸೌಜನ್ಯಳಂತಹ ಮುಗ್ಧ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಕೊನೆ ಆಗಬೇಕು. ಅದಕ್ಕೆ ರಾಜ್ಯಾದ್ಯಂತ ಎಲ್ಲಾ ವರ್ಗದ ಜನರು ನಮ್ಮ ಬೆಂಬಲಕ್ಕೆ ನಿಲ್ಲಬೇಕು. ಸೌಜನ್ಯ ಪ್ರಕರಣ ಮುಗಿದು ಹೋದ ಕಥೆ ಎಂಬ ಮನಸ್ಥಿತಿಯಲ್ಲಿರುವ ಸರ್ಕಾರ ಕೇವಲ ಸೌಜನ್ಯ ಮಾತ್ರವಲ್ಲ ಅವಳಂತಹ ನೂರಾರು ಮುಗ್ದ ಹೆಣ್ಣು ಮಕ್ಕಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಹೋರಾಟದ ತೀವ್ರತೆಗೆ ಇಂತಹ ಚಿತ್ರಗಳು ನೆರವಿಗೆ ಬರಬೇಕು ಎಂದರು.

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅರ್ಜುನ್ ಪಾಳೇಗಾರ ರವರು ಮಾತನಾಡಿ ಇದು ಕೇವಲ ಸೌಜನ್ಯಲಂತಹ ಒಬ್ಬಳು ಹೆಣ್ಣು ಮಗಳ ಕಥೆಯಲ್ಲ,ನಾಡಿನ ದೇಶದ ಪ್ರತಿಯೊಂದು ಮನೆಯ ಹೆಣ್ಣು ಮಕ್ಕಳ ಕರುಣಾಜನಕ ಕಥೆ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ದೌರ್ಜನ್ಯ ಅತ್ಯಾಚಾರದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ಪ್ರತಿಯೊಬ್ಬರ ಕಥೆ ಎಂದರು.

ನಿರ್ಮಾಪಕ ನಿರ್ದೇಶಕ ಟೈಗರ್ ನಾಗ್ ತುಮಕೂರು ಮಾತನಾಡುತ್ತಾ ರಾಜ್ಯದಲ್ಲಿ ನಡೆಯುತ್ತಿರುವ ನೈಜ ವಿದ್ಯಮಾನಗಳನ್ನು ಗಮನಿಸಿ ಅವುಗಳಿಂದ ಸ್ಪೂರ್ತಿ ಪಡೆದು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ ನಿಮ್ಮೆಲ್ಲರಿಗೂ ತಿಳಿದ ಹಾಗೆ ನನ್ನ ಸಂಸ್ಥೆಯ ಮೊದಲ ಚಿತ್ರ ಅಡವಿ ಸಿನಿಮಾ ಪೂರ್ಣಗೊಂಡು ಕೊನೆ ಹಂತಕ್ಕೆ ತಲುಪಿದೆ DTS ಕಾರ್ಯ ನಡೆಯುತ್ತಿದೆ,‌ ಇಂದು ಸಂವಿಧಾನ ಸಿನಿ ಕಂಬೈನ್ಸ್ ಸಂಸ್ಥೆಯ ಮುಂದಿನ ಸಿನಿಮಾ ಜಸ್ಟೀಸ್ ಫಾರ್ ಸೌಮ್ಯ ಚಿತ್ರದ ಶೀರ್ಷಿಕೆ ಅನಾವರಣವನ್ನು ಇಂದು ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸಹೋದರಿ ಸೌಜನ್ಯಳ ತಾಯಿ ಶ್ರೀಮತಿ ಕುಸುಮಾವತಿ ಅವರಿಂದ ಬಿಡುಗಡೆ ಮಾಡಲಾಯಿತು. ಈ ಚಿತ್ರದಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿ ಇಟ್ಟುಕೊಂಡು ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಅತ್ಯಾಚಾರ ಶೋಷಣೆ ಅಮಾಯಕರ ಕೊಲೆ ಮತ್ತು ಧಾರ್ಮಿಕ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ತಂತ್ರಗಾರಿಕೆ ವಂಚನೆ ದಬ್ಬಾಳಿಕೆ ಧಾರ್ಮಿಕ ಹೆಸರಿನಲ್ಲಿ ದಲಿತರ ಭೂಮಿ ಕಬ್ಬಳಿಕೆ ಎಲ್ಲವನ್ನೂ ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಜನಾಂದೋಲನದ ಮುಂದೆ ಎಳೆ ಎಳೆಯಾಗಿ ನೈಜತೆ ಸತ್ಯ ತೆರೆದಿಡುಲು ಮುಂದಾಗಿದ್ದೇವೆ ಈಗಾಗಲೇ ರಾಜ್ಯದ ದಲಿತ ಸಂಘಟನೆಗಳು ಪ್ರಗತಿಪರರು ಬುದ್ದಿ ಜೀವಿಗಳಿಗು ಕನ್ನಡ ಪರ ಸಂಘಟನೆಗಳು ಮಾನವ ಹಕ್ಕುಗಳ ಸಂಸ್ಥೆ ಸೇರಿದಂತೆ ಹಲವು ಸಂಘಟನೆಗಳು ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ, ಶೇಕಡಾ 80% ಸೌಜನ್ಯ ಗೆ ನ್ಯಾಯ ಕೊಡಿಸಲು ದ್ವನಿ ಎತ್ತಿ ಪರವಾಗಿ ನಿಂತಿದ್ದಾರೆ ಈ ಅನ್ಯಾಯವನ್ನು ಇಡೀ ದೇಶ ಕಂಡಿಸುತ್ತಿದೆ ಎಂದು ಹೇಳಿದ್ದಾರೆ. ಈ ಚಿತ್ರವು ಫ್ರೀ ಪ್ರೊಡಕ್ಷನ್ ಕೆಲಸ ಮುಗಿಸಿ ಮುಂದಿನ ವಾರದಿಂದ ಚಿತ್ರೀಕರಣ ಮಾಡಲು ತಯಾರಾಗಿದ್ದೇವೆ ಅದ್ದೂರಿ ವೆಚ್ಚದಲ್ಲಿ ಯಾವುದೇ ಕೊರತೆ ಇಲ್ಲದೆ ಅಚ್ಚುಕಟ್ಟಾಗಿ ಸಿನಿಮಾ ಮಾಡಲು ಪ್ಲಾನ್ ಮಾಡಿದ್ದೇವೆ ಚಿತ್ರದಲ್ಲಿ ಮಹೇಶ್ ತಿಮ್ಮರೋಡಿ ಪಾತ್ರದಲ್ಲಿ ಚಿತ್ರದ ನಾಯಕ ಅರ್ಜುನ್ ಪಾಳ್ಳೇಗಾರ ಹೊತ್ತಿದ್ದಾರೆ ನಿರಪರಾಧಿ ಸಂತೋಷ್ ರಾವ್ ಪಾತ್ರದಲ್ಲಿ ಅರ್ಜುನ್ ಕೃಷ್ಣ, ಕಾಣಿಸಿಕೊಳ್ಳುತ್ತಿದ್ದಾರೆ ಕಾಮುಕರ ಕಾಮದಾಸಗೆ ಬಲಿಯಾದ ಸಹೋದರಿ ಸೌಜನ್ಯ ಪಾತ್ರದಲ್ಲಿ ವನಿತಾ ನಿಭಾಯಿಸುತ್ತಿದ್ದಾರೆ. ಶಿವಮೊಗ್ಗ ರಾಮಣ್ಣ ನಿರ್ಮಲಾ ಸಿದ್ದಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿಪಿನ್ ವಿ ರಾಜ್ ಛಾಯಾಗ್ರಹಣ. ಮಂಜು ಮಹಾದೇವ ಎರಡು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಕೆ. ಮಂಜು ಕೋಟೆಕೆರೆ ಸಂಭಾಷಣೆಯ ಒರೆಯನ್ನುತ್ತಿದ್ದಾರೆ ಮುಂದಿನ ವಾರದಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ನಿರ್ಮಾಪಕ ನಿರ್ದೇಶಕ ಟೈಗರ್ ನಾಗ್ ತುಮಕೂರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *