ವರದಿ:- ಕುಮಾರ್
ಪಾವಗಡ:- ಸರ್ಕಾರಿ ಶಿಕ್ಷಕರಿಗೆ ಸೇಡು ಹೊಡೆಯುವಂತೆ ಆಥಿತಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು ಕನಿಷ್ಠ ವೇತನ ನೀಡದೆ ಕಡೆಗಣಿಸುತ್ತಿರುವ ರಾಜ್ಯ ಸರ್ಕಾರ ಎಂದು ತಾಲೂಕು ಅಧ್ಯಕ್ಷರಾದ ಆದಿನಾರಾಯಣನಾಯ್ಕ್ ತಿಳಿಸಿದರು.
ಶಾಲೆ ತೊರೆಯೋಣ ಎಂಬ ಅಭಿಯಾನವನ್ನು ಕೈಗೊಂಡ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅತಿಥಿ ಶಿಕ್ಷಕರಿಂದ ಪಟ್ಟಣ ದಂಡಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಶಾಂತಿಯುತ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್
ನರಸಿಂಹಮೂರ್ತಿ ರವರಿಗೆ ಮನವಿ ಪತ್ರ ಸಲ್ಲಿಸಿದರು.ಅಧ್ಯಕ್ಷರು ಆದಿನಾರಾಯಣನಾಯ್ಕ್ ಅವರು ಮಾತನಾಡುತಾ, ರಾಜ್ಯದ್ಯಾಂತ ಒಟ್ಟು 40,000 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ರಾಜ್ಯದ ಶಿಕ್ಷಣ ಇಲಾಖೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.ತಾಲೂಕಿನಾದ್ಯಾಂತ 180 ಅತಿಥಿ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದರು.ಸರ್ಕಾರವೂ ಮಾತ್ರ ಕೇವಲ ಒಬ್ಬ ದಿನ ಕೂಲಿ ಕಾರ್ಮಿಕನಿಗಿಂದ ಕಡಿಮೆಯ ವೇತನ ನೀಡಿ ಕೈ ತೊಳೆದು ಕೊಳ್ಳುತ್ತಿದ್ದಾರೆ .
ಪ್ರಾಥಮಿಕ ಶಿಕ್ಷಕರಿಗೆ ಹತ್ತು ಸಾವಿರ ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ಹತ್ತು ಸಾವಿರದ ಐದು ನೂರು ವೇತನ ನಿಗದಿಯನ್ನೂ ನೀಡುತ್ತಿದ್ದಾರೆ . ಈ ವೇತನದಲ್ಲಿ ಪಟ್ಟಣದಿಂದ ಹಳ್ಳಿಗಳಿಗೆ ಹಳ್ಳಿಗಳಿಂದ ಗಡಿ ಭಾಗದಲ್ಲಿರುವ ಗ್ರಾಮಗಳ ಶಾಲೆಗಳಿಗೆ ಹೋಗಲು ತಿಂಗಳಿಗೆ ಕನಿಷ್ಠ ಮೂರರಿಂದ ನಾಲ್ಕು ಸಾವಿರದಷ್ಟು ಬಸ್ ಚಾರ್ಜಿಗಳಿಗೆ ಮೀಸಲಿಡಬೇಕಾಗುತ್ತದೆ. ಇನುವುಳ್ಳಿದ ಉಳಿದ ಸಂಬಳದಲ್ಲಿ
ಕುಟುಂಬವನ್ನು ಪೋಷಿಸಿಕೊಳ್ಳಲು ಜನ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಆದ್ದರಿಂದ ನಮಗೆ ಶಿಕ್ಷಕ ಶಿಕ್ಷಕರಿಗೆ ಸೇವಾ ಭದ್ರತೆ 5% ಕೃಪಾಂಕವನ್ನು ದೆಹಲಿ, ಹರಿಯಾಣ, ಪಂಜಾಬ್, ಮತ್ತು ಉತ್ತರ ಪ್ರದೇಶ ಈ ಎಲ್ಲಾ ರಾಜ್ಯದ ಸರ್ಕಾರಗಳು ಕೈಕೊಂಡ ರೀತಿಯಲ್ಲಿ ನಮ್ಮ ಸರ್ಕಾರ ನಮ್ಮನ್ನು ಖಾಯಂ ಗೊಳಿಸಬೇಕು ಆಯಾ ಶಾಲೆಗಳಲ್ಲಿ ಸೇವ ದೃಢೀಕರಣ ಪತ್ರ ನೀಡಬೇಕು ಅವಘಡಗಳು ಸಂಭವಿಸಿದಾಗ ಪರಿಹಾರ ಧನ, ಜೀವಾ ವಿಮೆ, ಪ್ರತಿ ತಿಂಗಳು ಸರಿಯಾದ ವೇತನ ಮಾಡಿ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬೇಕು ಖಾಯಂ ಶಿಕ್ಷಕರಿಗೆ ಕೊಡುವ ಸಮಾನ ಸ್ಥಾನಮಾನ ಮತ್ತು ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು ಹಾಗೂ ಅತಿಥಿ ಶಿಕ್ಷಕರ ಎಂಬ ಪದವನ್ನು ತೆಗೆದುಹಾಕಿ ಗೌರವ ಶಿಕ್ಷಕ ಎಂದು ನಮೂದಿಸಬೇಕು ಎಂದರು.ನಮ್ಮ ಸಮಸ್ಯೆಗಳನ್ನು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಹಲವಾರು ಬಾರಿ ಮನವಿ ಮಾಡಿದರು ಮನವಿಗೆ ಸ್ಪಂದಿಸದೇ ಮರೆಯಾಗಿದ್ದಾರೆ ಎಂದು ಆಗ್ರಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಳಾದ ಗೋಪಾಲ್, ಟಿ ಎನ್ ಪೇಟೆ
ಸಹಕಾರ್ಯದರ್ಶಿ ಮಾರಯ್ಯ,
ಖಜಾಂಚಿ ಲೋಕೇಶ್, ಏಕಾಂತೇಶ್ವರ ಹಾಗೂ ಕವಿತಾ, ಸುಲ್ತಾನ್ ಬೀ,ಶಾಕೀರ, ಚಿಂತಾಮಣಿ, ರಾಜು ರಂಗಸಮುದ್ರ, ಸ್ವಾರಣ್ಣ ಮಹೇಶ್, ಇನ್ನೂ ಮುಂತಾದ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.
ಸೇವಾ ಭದ್ರತೆ ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿದ ಅತಿಥಿ ಶಿಕ್ಷಕರು
ವರದಿ:- ಕುಮಾರ್
ಪಾವಗಡ:- ಸರ್ಕಾರಿ ಶಿಕ್ಷಕರಿಗೆ ಸೇಡು ಹೊಡೆಯುವಂತೆ ಆಥಿತಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು ಕನಿಷ್ಠ ವೇತನ ನೀಡದೆ ಕಡೆಗಣಿಸುತ್ತಿರುವ ರಾಜ್ಯ ಸರ್ಕಾರ ಎಂದು ತಾಲೂಕು ಅಧ್ಯಕ್ಷರಾದ ಆದಿನಾರಾಯಣನಾಯ್ಕ್ ತಿಳಿಸಿದರು.
ಶಾಲೆ ತೊರೆಯೋಣ ಎಂಬ ಅಭಿಯಾನವನ್ನು ಕೈಗೊಂಡ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅತಿಥಿ ಶಿಕ್ಷಕರಿಂದ ಪಟ್ಟಣ ದಂಡಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಶಾಂತಿಯುತ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್
ನರಸಿಂಹಮೂರ್ತಿ ರವರಿಗೆ ಮನವಿ ಪತ್ರ ಸಲ್ಲಿಸಿದರು.ಅಧ್ಯಕ್ಷರು ಆದಿನಾರಾಯಣನಾಯ್ಕ್ ಅವರು ಮಾತನಾಡುತಾ, ರಾಜ್ಯದ್ಯಾಂತ ಒಟ್ಟು 40,000 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ರಾಜ್ಯದ ಶಿಕ್ಷಣ ಇಲಾಖೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.ತಾಲೂಕಿನಾದ್ಯಾಂತ 180 ಅತಿಥಿ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದರು.ಸರ್ಕಾರವೂ ಮಾತ್ರ ಕೇವಲ ಒಬ್ಬ ದಿನ ಕೂಲಿ ಕಾರ್ಮಿಕನಿಗಿಂದ ಕಡಿಮೆಯ ವೇತನ ನೀಡಿ ಕೈ ತೊಳೆದು ಕೊಳ್ಳುತ್ತಿದ್ದಾರೆ .
ಪ್ರಾಥಮಿಕ ಶಿಕ್ಷಕರಿಗೆ ಹತ್ತು ಸಾವಿರ ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ಹತ್ತು ಸಾವಿರದ ಐದು ನೂರು ವೇತನ ನಿಗದಿಯನ್ನೂ ನೀಡುತ್ತಿದ್ದಾರೆ . ಈ ವೇತನದಲ್ಲಿ ಪಟ್ಟಣದಿಂದ ಹಳ್ಳಿಗಳಿಗೆ ಹಳ್ಳಿಗಳಿಂದ ಗಡಿ ಭಾಗದಲ್ಲಿರುವ ಗ್ರಾಮಗಳ ಶಾಲೆಗಳಿಗೆ ಹೋಗಲು ತಿಂಗಳಿಗೆ ಕನಿಷ್ಠ ಮೂರರಿಂದ ನಾಲ್ಕು ಸಾವಿರದಷ್ಟು ಬಸ್ ಚಾರ್ಜಿಗಳಿಗೆ ಮೀಸಲಿಡಬೇಕಾಗುತ್ತದೆ. ಇನುವುಳ್ಳಿದ ಉಳಿದ ಸಂಬಳದಲ್ಲಿ
ಕುಟುಂಬವನ್ನು ಪೋಷಿಸಿಕೊಳ್ಳಲು ಜನ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಆದ್ದರಿಂದ ನಮಗೆ ಶಿಕ್ಷಕ ಶಿಕ್ಷಕರಿಗೆ ಸೇವಾ ಭದ್ರತೆ 5% ಕೃಪಾಂಕವನ್ನು ದೆಹಲಿ, ಹರಿಯಾಣ, ಪಂಜಾಬ್, ಮತ್ತು ಉತ್ತರ ಪ್ರದೇಶ ಈ ಎಲ್ಲಾ ರಾಜ್ಯದ ಸರ್ಕಾರಗಳು ಕೈಕೊಂಡ ರೀತಿಯಲ್ಲಿ ನಮ್ಮ ಸರ್ಕಾರ ನಮ್ಮನ್ನು ಖಾಯಂ ಗೊಳಿಸಬೇಕು ಆಯಾ ಶಾಲೆಗಳಲ್ಲಿ ಸೇವ ದೃಢೀಕರಣ ಪತ್ರ ನೀಡಬೇಕು ಅವಘಡಗಳು ಸಂಭವಿಸಿದಾಗ ಪರಿಹಾರ ಧನ, ಜೀವಾ ವಿಮೆ, ಪ್ರತಿ ತಿಂಗಳು ಸರಿಯಾದ ವೇತನ ಮಾಡಿ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬೇಕು ಖಾಯಂ ಶಿಕ್ಷಕರಿಗೆ ಕೊಡುವ ಸಮಾನ ಸ್ಥಾನಮಾನ ಮತ್ತು ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು ಹಾಗೂ ಅತಿಥಿ ಶಿಕ್ಷಕರ ಎಂಬ ಪದವನ್ನು ತೆಗೆದುಹಾಕಿ ಗೌರವ ಶಿಕ್ಷಕ ಎಂದು ನಮೂದಿಸಬೇಕು ಎಂದರು.ನಮ್ಮ ಸಮಸ್ಯೆಗಳನ್ನು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಹಲವಾರು ಬಾರಿ ಮನವಿ ಮಾಡಿದರು ಮನವಿಗೆ ಸ್ಪಂದಿಸದೇ ಮರೆಯಾಗಿದ್ದಾರೆ ಎಂದು ಆಗ್ರಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಳಾದ ಗೋಪಾಲ್, ಟಿ ಎನ್ ಪೇಟೆ
ಸಹಕಾರ್ಯದರ್ಶಿ ಮಾರಯ್ಯ,
ಖಜಾಂಚಿ ಲೋಕೇಶ್, ಏಕಾಂತೇಶ್ವರ ಹಾಗೂ ಕವಿತಾ, ಸುಲ್ತಾನ್ ಬೀ,ಶಾಕೀರ, ಚಿಂತಾಮಣಿ, ರಾಜು ರಂಗಸಮುದ್ರ, ಸ್ವಾರಣ್ಣ ಮಹೇಶ್, ಇನ್ನೂ ಮುಂತಾದ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.