ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಅವಲಂಬಿಸಿರುವ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ವ್ಯವಸಾಯ ಸೇವಾ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ ಎಂದು ಕೆಪಿಸಿಸಿ ಸದಸ್ಯ ಶಾಂತಕುಮಾರ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ವಿಶ್ವನಾಥಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಹೈನುಗಾರಿಕೆ ಮತ್ತು ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವ ರೈತರು ಸಾಲದ ಸಂಕಷ್ಟದಿಂದ ಹೊರ ಬರುವ ಉದ್ದೇಶದಿಂದ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಸಾಲಮನ್ನಾಕ್ಕೆ ಆದ್ಯತೆ ನೀಡಲಾಗಿತ್ತು. ಕೃಷಿಗೆ ಸಂಬಂದಿಸಿದ ಸಾಧನ, ಸಲಕರಣೆಗಳಿಗೆ ಒತ್ತು ನೀಡಿ, ಷೇರುದಾರರಿಗೆ ಕಾಲ-ಕಾಲಕ್ಕೆ ಬೀಜ, ಗೊಬ್ಬರ ಸಬ್ಸಿಡಿ ವಿತರಣೆ, ಹಸು, ಕುರಿ, ಮೇಕೆ, ಕೋಳಿ, ಆಭರಣ ಮತ್ತು ಕೃಷಿ ಸಾಲಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸಹಕಾರ ಸಂಘವು ಸರ್ವತೋಮುಖವಾಗಿ ಬೆಳವಣಿಗೆ ಹೊಂದಬೇಕು ಎಂದು ಶಾಂತ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

ವಿಶ್ವನಾಥಪುರ ಸೊಸೈಟಿಯ ನೂತನ ಅಧ್ಯಕ್ಷ ರಾಮನಾಥಪುರದ ಪ್ರಸನ್ನಕುಮಾರ್ ಮಾತನಾಡಿ, ಈ ಹಿಂದಿನ ಸಾಲಿನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದೇನೆ. ಸೊಸೈಟಿಯ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಎಲ್ಲಾ ಸದಸ್ಯರ ಸಹಕಾರ ಅಗತ್ಯವಿದೆ. ಬೆಳೆ ಸಾಲವನ್ನು ಷೇರುದಾರರು ಕಡಿಮೆ ಬಡ್ಡಿ ಧರದಲ್ಲಿ ಪಡೆದು ಮರುಪಾವತಿಸಬೇಕು. ನಮ್ಮ ಸೊಸೈಟಿಯಲ್ಲಿ ಸಾಲ, ಸೌಲಭ್ಯ ಪಡೆಯಲು ಸಾಕಷ್ಟು ರೈತರು ಹಿಂದೇಟು ಹಾಕುತ್ತಾರೆ ಇದರ ಉಪಯೋಗವನ್ನು ಉಳಿದ ಜಿಲ್ಲೆಗಳ ರೈತರು ಲಾಭ ಪಡೆದುಕೊಳ್ಳುತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೃಷಿ ಸಾಲಕ್ಕೆ ಪ್ರತಿಯಾಗಿ ಬಡ್ಡಿ ದರ ದುಬಾರಿಯಾಗಿರುತ್ತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ರೈತರ ಸಂಕಷ್ಟದ ಸಮಯದಲ್ಲಿ ಸಕಾಲದಲ್ಲಿ ಕೈ ಹಿಡಿಯುವುದೇ ಸಹಕಾರ ಸಂಘಗಳು, ಸೊಸೈಟಿಯು ಹಲವು ವರ್ಷಗಳಿಂದ ಹಳೇ ಕಟ್ಟಡದಲೇ ವ್ಯವಹರಿಸುತ್ತಾ ಬಂದಿದ್ದು, ಹೊಸಕಟ್ಟಡ ನಿರ್ಮಾಣ ಹಾಗೂ 23 ಗ್ರಾಮಗಳನ್ನು ಒಳಗೊಂಡ ಸೊಸೈಟಿಗೆ ದೂರ ದೂರಿನಿಂದ ಬರುವ ರೈತರಿಗೆ ಅನಾನುಕೂಲದ ಬಗೆಯೂ ಸಚಿವರ ಗಮನಕ್ಕೆ ತರುತ್ತೇನೆ ಎಂದರು.

ಈ ಸಂದರ್ಭದಲ್ಲಿ ದೇವನಹಳ್ಳಿ ಖಾದಿಬೋರ್ಡ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಪಕ್ಷದ ಮುಖಂಡರಾದ ಬೆಂಡಿಗಾನಹಳ್ಳಿ ದೇವರಾಜು, ಶ್ರೀ ರಾಮಯ್ಯ, ಸಂಪಂಗಪ್ಪ, ನಾಗೇಗೌಡ, ಬೀರಸಂದ್ರ ಬೈರೇಗೌಡ, ಕೆಂಪಣ್ಣ, ನಾಗರಾಜು, ಮಧು ಸುಧನ್, ಮುನಿವೆಂಕಟಪ್ಪ, ವಿಶ್ವನಾಥಪುರ ಶ್ರೀರಾಮಯ್ಯ, ಬ್ಯಾಡರಹಳ್ಳಿ ಆಂಜಿನಪ್ಪ, ನಾಗರಾಜು, ನಾಗೇಶ್, ರಾಮನಾಥಪುರ ಸೋಮಶೇಖರ್, ರಾಜಣ್ಣ, ಕೆಂಪಣ್ಣ, ವಿಶ್ವನಾಥಪುರ ವಿಎಸ್‌ಎಸ್‌ಎನ್ ನೂತನ ಉಪಾಧ್ಯಕ್ಷ ಶ್ರೀರಾಮಯ್ಯ, ನಿರ್ದೇಶಕರಾದ ಚಂದ್ರಪ್ಪ, ರಮೇಶ್, ನರಸಿಂಹರಾಜು, ವೆಂಕಟಲಕ್ಷ್ಮಮ್ಮ, ಶಿಲ್ಪ, ಸಿ.ಮುನೇಗೌಡ, ಅರ್ಜುನ್ ಗೌಡ, ಮುನಿರಾಜು, ರವಿಕುಮಾರ್, ಸುಬ್ಬೇಗೌಡ, ಚುನಾವಣಾಧಿಕಾರಿ ಚೇತನ, ಸಿಇಒ ಕೃಷ್ಣಮೂರ್ತಿ ಮುಂತಾದವರು ಇದ್ದರು.

ಹೈನುಗಾರಿಕೆ ಅವಲಂಬಿಸಿರುವ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರ ಸಂಘಗಳ ಪಾತ್ರ ಅಗತ್ಯ: ದ್ಯಾವರಹಳ್ಳಿ ಶಾಂತ್ ಕುಮಾರ್.

ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಅವಲಂಬಿಸಿರುವ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ವ್ಯವಸಾಯ ಸೇವಾ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ ಎಂದು ಕೆಪಿಸಿಸಿ ಸದಸ್ಯ ಶಾಂತಕುಮಾರ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ವಿಶ್ವನಾಥಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಹೈನುಗಾರಿಕೆ ಮತ್ತು ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವ ರೈತರು ಸಾಲದ ಸಂಕಷ್ಟದಿಂದ ಹೊರ ಬರುವ ಉದ್ದೇಶದಿಂದ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಸಾಲಮನ್ನಾಕ್ಕೆ ಆದ್ಯತೆ ನೀಡಲಾಗಿತ್ತು. ಕೃಷಿಗೆ ಸಂಬಂದಿಸಿದ ಸಾಧನ, ಸಲಕರಣೆಗಳಿಗೆ ಒತ್ತು ನೀಡಿ, ಷೇರುದಾರರಿಗೆ ಕಾಲ-ಕಾಲಕ್ಕೆ ಬೀಜ, ಗೊಬ್ಬರ ಸಬ್ಸಿಡಿ ವಿತರಣೆ, ಹಸು, ಕುರಿ, ಮೇಕೆ, ಕೋಳಿ, ಆಭರಣ ಮತ್ತು ಕೃಷಿ ಸಾಲಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸಹಕಾರ ಸಂಘವು ಸರ್ವತೋಮುಖವಾಗಿ ಬೆಳವಣಿಗೆ ಹೊಂದಬೇಕು ಎಂದು ಶಾಂತ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

ವಿಶ್ವನಾಥಪುರ ಸೊಸೈಟಿಯ ನೂತನ ಅಧ್ಯಕ್ಷ ರಾಮನಾಥಪುರದ ಪ್ರಸನ್ನಕುಮಾರ್ ಮಾತನಾಡಿ, ಈ ಹಿಂದಿನ ಸಾಲಿನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದೇನೆ. ಸೊಸೈಟಿಯ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಎಲ್ಲಾ ಸದಸ್ಯರ ಸಹಕಾರ ಅಗತ್ಯವಿದೆ. ಬೆಳೆ ಸಾಲವನ್ನು ಷೇರುದಾರರು ಕಡಿಮೆ ಬಡ್ಡಿ ಧರದಲ್ಲಿ ಪಡೆದು ಮರುಪಾವತಿಸಬೇಕು. ನಮ್ಮ ಸೊಸೈಟಿಯಲ್ಲಿ ಸಾಲ, ಸೌಲಭ್ಯ ಪಡೆಯಲು ಸಾಕಷ್ಟು ರೈತರು ಹಿಂದೇಟು ಹಾಕುತ್ತಾರೆ ಇದರ ಉಪಯೋಗವನ್ನು ಉಳಿದ ಜಿಲ್ಲೆಗಳ ರೈತರು ಲಾಭ ಪಡೆದುಕೊಳ್ಳುತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೃಷಿ ಸಾಲಕ್ಕೆ ಪ್ರತಿಯಾಗಿ ಬಡ್ಡಿ ದರ ದುಬಾರಿಯಾಗಿರುತ್ತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ರೈತರ ಸಂಕಷ್ಟದ ಸಮಯದಲ್ಲಿ ಸಕಾಲದಲ್ಲಿ ಕೈ ಹಿಡಿಯುವುದೇ ಸಹಕಾರ ಸಂಘಗಳು, ಸೊಸೈಟಿಯು ಹಲವು ವರ್ಷಗಳಿಂದ ಹಳೇ ಕಟ್ಟಡದಲೇ ವ್ಯವಹರಿಸುತ್ತಾ ಬಂದಿದ್ದು, ಹೊಸಕಟ್ಟಡ ನಿರ್ಮಾಣ ಹಾಗೂ 23 ಗ್ರಾಮಗಳನ್ನು ಒಳಗೊಂಡ ಸೊಸೈಟಿಗೆ ದೂರ ದೂರಿನಿಂದ ಬರುವ ರೈತರಿಗೆ ಅನಾನುಕೂಲದ ಬಗೆಯೂ ಸಚಿವರ ಗಮನಕ್ಕೆ ತರುತ್ತೇನೆ ಎಂದರು.

ಈ ಸಂದರ್ಭದಲ್ಲಿ ದೇವನಹಳ್ಳಿ ಖಾದಿಬೋರ್ಡ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಪಕ್ಷದ ಮುಖಂಡರಾದ ಬೆಂಡಿಗಾನಹಳ್ಳಿ ದೇವರಾಜು, ಶ್ರೀ ರಾಮಯ್ಯ, ಸಂಪಂಗಪ್ಪ, ನಾಗೇಗೌಡ, ಬೀರಸಂದ್ರ ಬೈರೇಗೌಡ, ಕೆಂಪಣ್ಣ, ನಾಗರಾಜು, ಮಧು ಸುಧನ್, ಮುನಿವೆಂಕಟಪ್ಪ, ವಿಶ್ವನಾಥಪುರ ಶ್ರೀರಾಮಯ್ಯ, ಬ್ಯಾಡರಹಳ್ಳಿ ಆಂಜಿನಪ್ಪ, ನಾಗರಾಜು, ನಾಗೇಶ್, ರಾಮನಾಥಪುರ ಸೋಮಶೇಖರ್, ರಾಜಣ್ಣ, ಕೆಂಪಣ್ಣ, ವಿಶ್ವನಾಥಪುರ ವಿಎಸ್‌ಎಸ್‌ಎನ್ ನೂತನ ಉಪಾಧ್ಯಕ್ಷ ಶ್ರೀರಾಮಯ್ಯ, ನಿರ್ದೇಶಕರಾದ ಚಂದ್ರಪ್ಪ, ರಮೇಶ್, ನರಸಿಂಹರಾಜು, ವೆಂಕಟಲಕ್ಷ್ಮಮ್ಮ, ಶಿಲ್ಪ, ಸಿ.ಮುನೇಗೌಡ, ಅರ್ಜುನ್ ಗೌಡ, ಮುನಿರಾಜು, ರವಿಕುಮಾರ್, ಸುಬ್ಬೇಗೌಡ, ಚುನಾವಣಾಧಿಕಾರಿ ಚೇತನ, ಸಿಇಒ ಕೃಷ್ಣಮೂರ್ತಿ ಮುಂತಾದವರು ಇದ್ದರು.

Leave a Reply

Your email address will not be published. Required fields are marked *