ಭಾರತ ಮೂಲತಃ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಶೇ 60%ರಷ್ಟು ಜನರು ವ್ಯವಸಾಯ ಮಾಡುವುದರ ಮೂಲಕ ದೇಶದ ಜನತೆಯ ಹಸಿವನ್ನು ನೀಗಿಸುತ್ತಿದ್ದಾರೆ. ಆದರೆ ಪ್ರಸ್ತುತ ವಿದ್ಯಾಮಾನಗಳನ್ನು ಅವಲೋಕಿಸಿದಾಗ ಅನ್ನದಾತರು ಸಂಕಷ್ಟದಲ್ಲಿದ್ದಾರೆ, ಅವರ ಭವಿಷ್ಯವನ್ನು ಉಜ್ವಲಗೊಳಿಸವ ನಿಟ್ಟಿನಲ್ಲಿ ವ್ಯವಸಾಯೋತ್ಪನ ಸಹಕಾರಿ ಸಂಘಗಳ ಅಧ್ಯಕ್ಷನಾಗಿ ನಾನು ಬದ್ಧನಾಗಿರುತ್ತೇನೆ. ಎಂದು ಪಿಚ್ಚಳ್ಳಿ ಗೋವಿಂದರಾಜು ಅಭಿಪ್ರಾಯಪಟ್ಟರು:

ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ವ್ಯವಸಾಯೋತ್ಪನ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗಳಲ್ಲಿ ಪಿಚ್ಚಹಳ್ಳಿ ಗೋವಿಂದರಾಜು ಎರಡನೇ ಅವಧಿಗೆ ಅಧ್ಯಕ್ಷರಾಗಿ, ಹಾಗೂ ಉಪಾಧ್ಯಕ್ಷರಾಗಿ ರಂಗಾಚಾರಿ ಅವಿರೋಧವಾಗಿ ಆಯ್ಕೆ ಆದರು,
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಹಕಾರಿ ಸಂಸ್ಥೆಗಳು ಸ್ವಯಿಚ್ಛೆಯಿಂದ ಪ್ರಜಾಪ್ರಭುತ್ವ ತತ್ವಗಳ ಆಧಾರದ ಮೇಲೆ ರಚನೆಯಾದ ಸಂಸ್ಥೆಯಾಗಿದೆ, ಈ ಸಂಸ್ಥೆಯಲ್ಲಿ ನೋಂದಣಿಯಾದ ಸದಸ್ಯರು ಹೂಡಿಕೆ ಮಾಡುವುದರ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸುತ್ತಾರೆ, ಸಹಕಾರಿ ಸಂಘಗಳು ರೈತಾಪಿ ವರ್ಗದ ಸುಸ್ಥಿರ ಅಭಿವೃದ್ಧಿಗೆ ಶ್ರಮವಹಿಸುತ್ತದೆ, ನನ್ನ ಮೊದಲನೆಯ ಅವಧಿಯಲ್ಲಿ ಕಳಂಕ ಮುಕ್ತನಾಗಿ ಸದಸ್ಯರ ಮನೋಭಾವಗಳಿಗೆ ಧಕ್ಕೆ ತರದ ರೀತಿಯಲ್ಲಿ ಹಗಲಿರುಳು ಅವರ ಏಳಿಗೆಗಾಗಿ ಶ್ರಮಿಸಿದ್ದೇನೆ, ಆದಕಾರಣ ಸರ್ವ ಸದಸ್ಯರು ನನ್ನನ್ನು ಎರಡನೇ ಬಾರಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ತಾರತಮ್ಯ ರಹಿತವಾಗಿ ಎಲ್ಲರ ಸಹಕಾರದೊಂದಿಗೆ ಸಮಸ್ತ ಅಭಿವೃದ್ಧಿಗಾಗಿ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ.

ಮುಂದಿರುವ ಗುರಿ ಉದ್ದೇಶಗಳು:
ಶಾಸಕ ಎಸ್. ಎನ್. ನಾರಾಯಣಸ್ವಾಮಿರವರ ಮಾರ್ಗದರ್ಶನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರ ಸಹಕಾರದೊಂದಿಗೆ ಕಾಮಸಮುದ್ರ ವ್ಯಾಪ್ತಿಯಲ್ಲಿ ಡಿಸಿಸಿ ಬ್ಯಾಂಕ್ ಅನ್ನು ಸ್ಥಾಪಿಸಲಾಗುವುದು ಮತ್ತು ಬತ್ತಲಹಳ್ಳಿ ಗ್ರಾಮದಲ್ಲಿ ವ್ಯವಸಾಯ ಉತ್ಪನ್ನ ಸಹಕಾರ ಸಂಘ ಸ್ಥಾಪಿಸಲಾಗುವುದು, ಇದರೊಟ್ಟಿಗೆ ನಮ್ಮ ಕಾರ್ಯ ವ್ಯಾಪ್ತಿ ಮೀರಿ ಬೀದಿ ಬದಿ ವ್ಯಾಪಾರಿಗಳನ್ನು ಒಳಗೊಂಡಂತೆ ಎಸ್. ಎಸ್. ಜಿ. ಕೆ.ಸಿ.ಸಿ ಮತ್ತು .ಟಿ.ಎಲ್. ಸಾಲಗಳನ್ನು ಒದಗಿಸಲಾಗುವುದು, ಆ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಸಹಕಾರ ಸಂಘವನ್ನಾಗಿಸುವ ಪರಮೋಚ್ಛಗುರಿ ನನ್ನದಾಗಿದೆ ಹಾಗೂ ನನ್ನ ಗೆಲುವಿಗೆ ಸಹಕರಿಸಿದ ಹ್ಯಾಟ್ರಿಕ್ ದಾಖಲೆಯ ವೀರ ಶಾಸಕ ಎಸ್. ಎನ್. ನಾರಾಯಣಸ್ವಾಮಿ ರವರಿಗೆ, ಸೋಲಿಲ್ಲದ ಸರದಾರ ಸತತವಾಗಿ ಮೂರನೇ ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆದಿ ನಾರಾಯಣ ಕುಟ್ಟಿ ರವರಿಗೆ, ಸೈಯದ್ ಅಜ್ಮತುಲ್ಲಾ ರವರಿಗೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಸಹಕರಿಸಿದ ಎಲ್ಲಾ ಹಿರಿಯ ಮುಖಂಡರಿಗೆ ತುಂಬಾ, ತುಂಬಾ ಅಭಿನಂದನೆಗಳು ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಂಗಾಚಾರಿ, ನಿರ್ದೇಶಕರಾದ ವಿ. ನಾರಾಯಣಸ್ವಾಮಿ. ಟಿ. ನಟರಾಜ್. ವೆಂಕಟೇಶ್. ಬಾಬುಗೌಡ. ಸಿ. ವೆಂಕಟೇಶ್ ಹಂಸಗಿರಿ. ಕಾವೇರಿ. ಚಂದ್ರಕಾಂತಮ್ಮ. ಲಕ್ಷ್ಮಮ್ಮ. ಉಪಸ್ಥಿತರಿದ್ದರು

Leave a Reply

Your email address will not be published. Required fields are marked *