ಅಭಿನಂದನೆ ಸಲ್ಲಿಸಿದ ಮಾಚೋಹಳ್ಳಿ ಬಿಜೆಪಿ ಮುಖಂಡರು :

ಯಲಹಂಕ : ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸತತ ಎರಡನೆಯ ಬಾರಿಗೆ ಪುನರಾಯ್ಕೆಯಾಗಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌ರವರನ್ನು ದಾಸನಪುರ ಹೋಬಳಿಯ ಮಾಚೋಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಬಿಜೆಪಿ ಮುಖಂಡರು, ಗ್ರಾ.ಪಂ.ಸದಸ್ಯರು ಗೌರವ ಸನ್ಮಾನದೊಂದಿಗೆ ವೆಂಕಟೇಶ್ವರಸ್ವಾಮಿಯ ಕಂಚಿನ ವಿಗ್ರಹ ನೀಡಿ ಅಭಿನಂದಿಸಿದರು.

ನಂತರ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ ವೆಂಕಟರಮಣಸ್ವಾಮಿಯ ಕೃಪೆಯಿಂದ ಸತತ ೨ನೆಯ ಬಾರಿಗೆ ದೇವಸ್ಥಾನದ ಆಡಳಿತ ಮಂಡಳಿಯ ನಿರ್ದೇಶಕನಾಗಿ ಆಯ್ಕೆಯಾಗಿ ರುವುದು ನಿಜಕ್ಕೂ ಸಂತೋಷ ಉಂಟು ಮಾಡಿದೆ. ಬಹಳ ವಿರಳ ಮಂದಿಗೆ ಎರಡನೆಯ ಬಾರಿಗೆ ನಿರ್ದೇಶಕ ಸ್ಥಾನದ ಅವಕಾಶ ದೊರೆತಿದೆ. ಕಳೆದ ಬಾರಿಯ ನನ್ನ ಸೇವಾ ಅವಧಿಯಲ್ಲಿ ರಾಜ್ಯದ ಹಾಗೂ ಯಲಹಂಕ ಕ್ಷೇತ್ರದ ಲಕ್ಷಾಂತರ ಜನತೆಗೆ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸಹಕರಿಸಿದ್ದೆ. ಈ ಬಾರಿನ ನನ್ನ ಸೇವಾ ಅವಧಿಯಲ್ಲಿ ಇನ್ನೂ ಹೆಚ್ಚಿನ ಜನರಿಗೆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸಹಕಾರ ನೀಡುತ್ತೇನೆ.

ಹಿರಿಯ ಕಾಂಗ್ರೆಸ್ ಮುಖಂಡರು, ಹಳಿಯಾಳ ಶಾಸಕರಾದ ಆರ್.ವಿ.ದೇಶಪಾಂಡೆಯವರು ಸಹ ನನ್ನೊಂದಿಗೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ರಾಜ್ಯದಿಂದ ಇಬ್ಬರು ಆಯ್ಕೆಯಾಗಿರುವುದು ತಿರುಪತಿಯಲ್ಲಿ ರಾಜ್ಯದ ಜನತೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಶ್ರಮಿಸಲು ಹೆಚ್ಚು ಸಹಕಾರಿಯಾಗಲಿದೆ. ತಿರುಪತಿಯಲ್ಲಿನ ಕರ್ನಾಟಕ ಭವನದಲ್ಲಿ ಕೆಲ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು, ಅವುಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯದ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಯವರೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲು ಶ್ರಮಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಆರ್‌ಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್, ಮಾಜಿ ಜಿ.ಪಂ.ಸದಸ್ಯ ಡಾ.ಉದ್ದಂಡಯ್ಯ, ಮಾಚೋಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಎನ್.ಸರಸ್ವತಿ ಮಾಯಣ್ಣ, ಮಾಜಿ ಅಧ್ಯಕ್ಷ ಎಂ.ಬಿ.ರಾಮಕೃಷ್ಣಯ್ಯ, ಬೈರವೇಶ್ವರ ಸಾಮಿಲ್ ಮಾಲೀಕ ಹೆಚ್.ಬಿ.ಬೋರೇಗೌಡ, ಗ್ರಾ.ಪಂ.ಸದಸ್ಯರಾದ ಎ.ನರಸಿಂಹಮೂರ್ತಿ, ಎಂ.ಹೆಚ್.ಪ್ರಕಾಶ್‌ಗೌಡ, ಸತೀಶ್‌ಕುಮಾರ್, ಆನಂದ್, ನಾರಾಯಣಪ್ಪ, ರೇವಣಸಿದ್ದಯ್ಯ, ಕೆ.ಪಿ.ಮಹೇಶ್, ಎಂ.ಗಂಗಾಧರ್ ಸೇರಿದಂತೆ ಇನ್ನಿತರರಿದ್ದರು.

ತಿರುಮಲ ದೇವಸ್ಥಾನ ಆಡಳಿತ ಮಂಡಳಿ ನಿರ್ದೇಶಕರಾಗಿ ವಿಶ್ವನಾಥ್ ಪುನರಾಯ್ಕೆ :

ಅಭಿನಂದನೆ ಸಲ್ಲಿಸಿದ ಮಾಚೋಹಳ್ಳಿ ಬಿಜೆಪಿ ಮುಖಂಡರು :

ಯಲಹಂಕ : ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸತತ ಎರಡನೆಯ ಬಾರಿಗೆ ಪುನರಾಯ್ಕೆಯಾಗಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌ರವರನ್ನು ದಾಸನಪುರ ಹೋಬಳಿಯ ಮಾಚೋಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಬಿಜೆಪಿ ಮುಖಂಡರು, ಗ್ರಾ.ಪಂ.ಸದಸ್ಯರು ಗೌರವ ಸನ್ಮಾನದೊಂದಿಗೆ ವೆಂಕಟೇಶ್ವರಸ್ವಾಮಿಯ ಕಂಚಿನ ವಿಗ್ರಹ ನೀಡಿ ಅಭಿನಂದಿಸಿದರು.

ನಂತರ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ ವೆಂಕಟರಮಣಸ್ವಾಮಿಯ ಕೃಪೆಯಿಂದ ಸತತ ೨ನೆಯ ಬಾರಿಗೆ ದೇವಸ್ಥಾನದ ಆಡಳಿತ ಮಂಡಳಿಯ ನಿರ್ದೇಶಕನಾಗಿ ಆಯ್ಕೆಯಾಗಿ ರುವುದು ನಿಜಕ್ಕೂ ಸಂತೋಷ ಉಂಟು ಮಾಡಿದೆ. ಬಹಳ ವಿರಳ ಮಂದಿಗೆ ಎರಡನೆಯ ಬಾರಿಗೆ ನಿರ್ದೇಶಕ ಸ್ಥಾನದ ಅವಕಾಶ ದೊರೆತಿದೆ. ಕಳೆದ ಬಾರಿಯ ನನ್ನ ಸೇವಾ ಅವಧಿಯಲ್ಲಿ ರಾಜ್ಯದ ಹಾಗೂ ಯಲಹಂಕ ಕ್ಷೇತ್ರದ ಲಕ್ಷಾಂತರ ಜನತೆಗೆ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸಹಕರಿಸಿದ್ದೆ. ಈ ಬಾರಿನ ನನ್ನ ಸೇವಾ ಅವಧಿಯಲ್ಲಿ ಇನ್ನೂ ಹೆಚ್ಚಿನ ಜನರಿಗೆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸಹಕಾರ ನೀಡುತ್ತೇನೆ.

ಹಿರಿಯ ಕಾಂಗ್ರೆಸ್ ಮುಖಂಡರು, ಹಳಿಯಾಳ ಶಾಸಕರಾದ ಆರ್.ವಿ.ದೇಶಪಾಂಡೆಯವರು ಸಹ ನನ್ನೊಂದಿಗೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ರಾಜ್ಯದಿಂದ ಇಬ್ಬರು ಆಯ್ಕೆಯಾಗಿರುವುದು ತಿರುಪತಿಯಲ್ಲಿ ರಾಜ್ಯದ ಜನತೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಶ್ರಮಿಸಲು ಹೆಚ್ಚು ಸಹಕಾರಿಯಾಗಲಿದೆ. ತಿರುಪತಿಯಲ್ಲಿನ ಕರ್ನಾಟಕ ಭವನದಲ್ಲಿ ಕೆಲ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು, ಅವುಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯದ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಯವರೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲು ಶ್ರಮಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಆರ್‌ಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್, ಮಾಜಿ ಜಿ.ಪಂ.ಸದಸ್ಯ ಡಾ.ಉದ್ದಂಡಯ್ಯ, ಮಾಚೋಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಎನ್.ಸರಸ್ವತಿ ಮಾಯಣ್ಣ, ಮಾಜಿ ಅಧ್ಯಕ್ಷ ಎಂ.ಬಿ.ರಾಮಕೃಷ್ಣಯ್ಯ, ಬೈರವೇಶ್ವರ ಸಾಮಿಲ್ ಮಾಲೀಕ ಹೆಚ್.ಬಿ.ಬೋರೇಗೌಡ, ಗ್ರಾ.ಪಂ.ಸದಸ್ಯರಾದ ಎ.ನರಸಿಂಹಮೂರ್ತಿ, ಎಂ.ಹೆಚ್.ಪ್ರಕಾಶ್‌ಗೌಡ, ಸತೀಶ್‌ಕುಮಾರ್, ಆನಂದ್, ನಾರಾಯಣಪ್ಪ, ರೇವಣಸಿದ್ದಯ್ಯ, ಕೆ.ಪಿ.ಮಹೇಶ್, ಎಂ.ಗಂಗಾಧರ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *