ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್.ಪಿ ಕಚೇರಿ ಮುಂದೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಎಚ್ಚರಿಕೆ
ನೀಡಿದರು.
ದಲಿತ ಸಂಘಟನಗಳ ಮುಖಂಡರಾದ ಕಿರಣ್ ಕುಮಾರ್,ಅಂಬರೀಶ್, ಅಪ್ಪಸಂದ್ರ ನಾಗೇಶ್, ಶ್ರೀಕಾಂತ್ ರಾವನ್, ಅಮರ್ ನಾಥ್, ಸಜ್ಜನ್, ಮಂಜುನಾಥ್ ,ಪ್ರತಾಪ್, ರಾಜಪ್ಪ, ಸೇರಿದಂತೆ ದಲಿತಪರ ಸಂಘಟನೆಗಳ ಮುಖಂಡರುಗಳು ಪಾಲ್ಗೊಂಡಿದ್ದರು.

ಪರಿಶಿಷ್ಟರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ರಸ್ತೆತಡೆ ನಡಿಸಿ ಪ್ರತಿಭಟನೆ ಹೊಸಕೋಟೆ : ತಾಲ್ಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತರಬಹಳ್ಳಿಯಲ್ಲಿ ಕ್ಷುಲಕ ಕಾರಣಕ್ಕೆ ಪರಿಶಿಷ್ಟ ವರ್ಗದ ವ್ಯಕ್ತಿಗಳ ಮೇಲೆ ಸವರ್ಣಿಯರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದಲಿತ ಪರ ಸಂಘಟನೆಗಳು ರಸ್ತೆ ತಡೆ ನಡೆಸಿ ನಂದಗುಡಿ ಪೊಲೀಸ್ ಠಾಣೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ತರಬಹಳ್ಳಿಯಲ್ಲಿ ಆ.22ರಂದು ಪರಿಶಿಷ್ಟ ಜಾತಿಯ ಬಾಲಕೃಷ್ಣ ಹಾಗೂ ಸುಬ್ರಮಣ್ಯ ಎನ್ನುವವರ ಮೇಲೆ ಸವರ್ಣಿಯರಾದ ವೇಣು, ಪಿಳ್ಳೇಗೌಡ, ನಂದಕುಮಾರ್ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೂ, ಆರೋಪಿಗಳ ಬಂಧಿಸಲು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಪ್ರತಿಭಟನನಿರತರು ಅಸಮಾಧಾನ ವ್ಯಕ್ತಪಡಿಸಿದರು. ಹಲ್ಲೆಗೊಳಗಾದ ತರಬಹಳ್ಳಿ ಬಾಲಕೃಷ್ಣ ಮಾತನಾಡಿ ದೂರು ನೀಡಲು ಠಾಣೆಗೆ ಬಂದಾಗ ಆರೋಪಿಗಳು ಪೊಲೀಸರ ಎದುರೇ ನಮ್ಮ ಮೇಲೆ ದೌರ್ಜನ್ಯ ಮಾಡಲು ಯತ್ನಿಸಿದರು. ದಲಿತ ಸಂಘಟನೆಗಳು ನಿನ್ನ ಬೆಂಬಲಕ್ಕೆ ಬಂದು ಏನು ಮಾಡುತ್ತಾರೋ? ನೋಡೋಣ ಎಂದು ದಬ್ಬಾಳಿಕೆ ನಡೆಸಿದ್ದಾರೆ' ಎಂದು ಆರೋಪಿಸಿದರು. ಗ್ರಾಮದಲ್ಲಿ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ನಾವು ಗ್ರಾಮದಲ್ಲಿ ಜೀವನ ನಡೆಸಲು ಕಷ್ಟವಾಗಿದೆ. ಆದ್ದರಿಂದ ನಮಗೆ ಸೂಕ್ತ ರಕ್ಷಣೆಬೇಕು. ನಮಗೆ ರಕ್ಷಣೆ ಕೊಡಲಾಗದಿದ್ದರೆ ನಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಳಲು ತೋಡಿಕೊಂಡರು. ದಲಿತ ಹೋರಾಟಗಾರ ದೊಡ್ಡಹರಳಗೆರೆ ನಾಗೇಶ್ ರವರು ಮಾತನಾಡಿ ಪರಿಶಿಷ್ಟರ ಮನೆಗೆ ನುಗ್ಗಿ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಜರು ಗಿಸಬೇಕಿದ್ದ ಪೊಲೀಸರು ಆರೋಪಿಗಳ ಬಂಧಿಸದೆ ಮೀನಮೇಷ ಎಣಿಸುತ್ತಿರುವುದು ಖಂಡನೀಯ ಎಂದು ಹೇಳಿದರು. ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್.ಪಿ ಕಚೇರಿ ಮುಂದೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಎಚ್ಚರಿಕೆ
ನೀಡಿದರು.
ದಲಿತ ಸಂಘಟನಗಳ ಮುಖಂಡರಾದ ಕಿರಣ್ ಕುಮಾರ್,ಅಂಬರೀಶ್, ಅಪ್ಪಸಂದ್ರ ನಾಗೇಶ್, ಶ್ರೀಕಾಂತ್ ರಾವನ್, ಅಮರ್ ನಾಥ್, ಸಜ್ಜನ್, ಮಂಜುನಾಥ್ ,ಪ್ರತಾಪ್, ರಾಜಪ್ಪ, ಸೇರಿದಂತೆ ದಲಿತಪರ ಸಂಘಟನೆಗಳ ಮುಖಂಡರುಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *