ಬಳ್ಳಾರಿ ಆ,28
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕಲಾವಿದರಿಗೆ ಸಲ್ಲಬೇಕಾದ ಲಕ್ಷಾಂತರ ರೂಪಾಯಿಗಳ ಅನುದಾನವನ್ನು ಗುಳುಂ ಮಾಡಿರುವುದು ಕಂಡು ಬಂದಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ವರ್ಗಾವಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ. ಇದರಿಂದ ನಿಜವಾದ ಮತ್ತು ಬಡ ಕಲಾವಿದರಿಗೆ ಅನ್ಯಾಯವಾಗಿದೆ. ಕಾರಣ ಲಕ್ಷಾಂತರ ರೂಪಾಯಿಗಳ ಅಕ್ರಮ ಎಸಗಿರುವ ಅಧಿಕಾರಿಯ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕು, ಮತ್ತು ಇಲಾಖೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು 10 ಸಾವಿರಕ್ಕೆ ಏರಿಸಬೇಕು, ಪಿಂಚಣಿ ವಯೋಮಿತಿಯನ್ನು ಇಳಿಸಬೇಕೆಂಬ ಬೇಡಿಕೆಯ ಜೊತೆಗೆ ಆದಷ್ಟು ಶೀಘ್ರವಾಗಿ ನಗರದ ನಲ್ಲಚರುವು ಪ್ರದೇಶದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರವನ್ನು ಕಲಾವಿದರ ಉಪಯೋಗಕ್ಕೆ ನೀಡಬೇಕೆಂಧು ಕಲಾವಿದರ ಸಂಘದ ಅಧ್ಯಕ್ಷ ರಂಗ ನಿರ್ಧೇಶಕ ಜಗಧೀಶ್ ಮತ್ತು ಇತರರು ಸರ್ಕಾರವನ್ನು ಒತ್ತಾಯಿಸಿದರು.
ಇಂದು ನಗರದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಹೆಚ್ಚುವರಿ ಡಿ.ಸಿಯವರಿಗೆ ಮನವಿ ಪತ್ರವನ್ನು ನೀಡಿ, ಮಾತನಾಡಿದ ಅವರು, ಕಲಾವಿದರಿಗೆ ನೀಡುತ್ತಿರುವ ಅನುದಾನ ಬಹಳ ಕಡಿಮೆ ಅದಕ್ಕಿಂತ ದುಪ್ಪಟ್ಟು ಖರ್ಚು ನಮಗಾಗುತ್ತದೆ. ಅನುದಾನ ಯಾವುದಕ್ಕೂ ಆಗುತ್ತಿಲ್ಲ ಅನುದಾನದ ಮೊತ್ತವನ್ನು ಏರಿಸಬೇಕು, ಬಯಲಾಟ ಕಲಾವಿದರಿಗೆ ಕೆವಲ 25 ಸಾವಿರ ರೂಪಾಯಿ ನೀಡುತ್ತಿದ್ದಾರೆ. ಇದು ವೇದಿಕೆ ನಿರ್ಮಾಣಕ್ಕೂ ಆಗುವುದಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದರು.
ಇದಕ್ಕೂ ಮುನ್ನ ನಾರಾಯಣರಾವ್ ಪಾರ್ಕ್ ನಲ್ಲಿ ಸೇರಿ ಡಾ. ರಾಜಕುಮಾರ್ ರಸ್ತೆಯ ಮೂಲಕ ಪ್ರತಿಭಟನೆಯಲ್ಲಿ ಬಂದು ಗಡಗಿ ಚೆನ್ನಪ್ಪ ವೃತ್ತದಲ್ಲಿ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಹುಲಿಕುಂಟೇಶ್ವರ ತೊಗಳುಗೊಂಬೆ ಟ್ರಸ್ಟ್ ನ ಅಧ್ಯಕ್ಷ ಕೆ ಹೊನ್ನೂರಸ್ವಾಮಿ, ಸುಬ್ಬಣ್ಣ, ಬಯಲಾಟ ಕಲಾವಿದ ತಿಪ್ಪೇಸ್ವಾಮಿ ಮುದ್ದಟನೂರು, ಸುಂಕಪ್ಪ ಯರಗುಡಿ, ಚಿಗುರು ಕಲಾತಂಡದ ಹುಲುಗಪ್ಪ ಸೇರಿದಂತೆ ನೂರಾರು ಜನ ಕಲಾವಿದರಿದ್ದರು.

1ನೇ ಸುದ್ದಿ ಸಾರ್,

ಅನುದಾನ ದುರುಪಯೋಗ, ಕಲಾವಿದರಿಗೆ ಪಿಂಚಣಿ 10 ಸಾವಿರಕ್ಕೇರುಸುವುದು ಮತ್ತು ಜೋಳದರಾಶಿ ದೊಡ್ಡನಗೌಡ ರಂಗಮಂದಿರವನ್ನು ಶೀಘ್ರ ಆರಂಭಿಸುವಂತೆ ಕಲಾವಿದರಿಂದ ಪ್ರತಿಭಟನೆ

ಬಳ್ಳಾರಿ ಆ,28
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕಲಾವಿದರಿಗೆ ಸಲ್ಲಬೇಕಾದ ಲಕ್ಷಾಂತರ ರೂಪಾಯಿಗಳ ಅನುದಾನವನ್ನು ಗುಳುಂ ಮಾಡಿರುವುದು ಕಂಡು ಬಂದಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ವರ್ಗಾವಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ. ಇದರಿಂದ ನಿಜವಾದ ಮತ್ತು ಬಡ ಕಲಾವಿದರಿಗೆ ಅನ್ಯಾಯವಾಗಿದೆ. ಕಾರಣ ಲಕ್ಷಾಂತರ ರೂಪಾಯಿಗಳ ಅಕ್ರಮ ಎಸಗಿರುವ ಅಧಿಕಾರಿಯ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕು, ಮತ್ತು ಇಲಾಖೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು 10 ಸಾವಿರಕ್ಕೆ ಏರಿಸಬೇಕು, ಪಿಂಚಣಿ ವಯೋಮಿತಿಯನ್ನು ಇಳಿಸಬೇಕೆಂಬ ಬೇಡಿಕೆಯ ಜೊತೆಗೆ ಆದಷ್ಟು ಶೀಘ್ರವಾಗಿ ನಗರದ ನಲ್ಲಚರುವು ಪ್ರದೇಶದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರವನ್ನು ಕಲಾವಿದರ ಉಪಯೋಗಕ್ಕೆ ನೀಡಬೇಕೆಂಧು ಕಲಾವಿದರ ಸಂಘದ ಅಧ್ಯಕ್ಷ ರಂಗ ನಿರ್ಧೇಶಕ ಜಗಧೀಶ್ ಮತ್ತು ಇತರರು ಸರ್ಕಾರವನ್ನು ಒತ್ತಾಯಿಸಿದರು.
ಇಂದು ನಗರದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಹೆಚ್ಚುವರಿ ಡಿ.ಸಿಯವರಿಗೆ ಮನವಿ ಪತ್ರವನ್ನು ನೀಡಿ, ಮಾತನಾಡಿದ ಅವರು, ಕಲಾವಿದರಿಗೆ ನೀಡುತ್ತಿರುವ ಅನುದಾನ ಬಹಳ ಕಡಿಮೆ ಅದಕ್ಕಿಂತ ದುಪ್ಪಟ್ಟು ಖರ್ಚು ನಮಗಾಗುತ್ತದೆ. ಅನುದಾನ ಯಾವುದಕ್ಕೂ ಆಗುತ್ತಿಲ್ಲ ಅನುದಾನದ ಮೊತ್ತವನ್ನು ಏರಿಸಬೇಕು, ಬಯಲಾಟ ಕಲಾವಿದರಿಗೆ ಕೆವಲ 25 ಸಾವಿರ ರೂಪಾಯಿ ನೀಡುತ್ತಿದ್ದಾರೆ. ಇದು ವೇದಿಕೆ ನಿರ್ಮಾಣಕ್ಕೂ ಆಗುವುದಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದರು.
ಇದಕ್ಕೂ ಮುನ್ನ ನಾರಾಯಣರಾವ್ ಪಾರ್ಕ್ ನಲ್ಲಿ ಸೇರಿ ಡಾ. ರಾಜಕುಮಾರ್ ರಸ್ತೆಯ ಮೂಲಕ ಪ್ರತಿಭಟನೆಯಲ್ಲಿ ಬಂದು ಗಡಗಿ ಚೆನ್ನಪ್ಪ ವೃತ್ತದಲ್ಲಿ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಹುಲಿಕುಂಟೇಶ್ವರ ತೊಗಳುಗೊಂಬೆ ಟ್ರಸ್ಟ್ ನ ಅಧ್ಯಕ್ಷ ಕೆ ಹೊನ್ನೂರಸ್ವಾಮಿ, ಸುಬ್ಬಣ್ಣ, ಬಯಲಾಟ ಕಲಾವಿದ ತಿಪ್ಪೇಸ್ವಾಮಿ ಮುದ್ದಟನೂರು, ಸುಂಕಪ್ಪ ಯರಗುಡಿ, ಚಿಗುರು ಕಲಾತಂಡದ ಹುಲುಗಪ್ಪ ಸೇರಿದಂತೆ ನೂರಾರು ಜನ ಕಲಾವಿದರಿದ್ದರು.

1ನೇ ಸುದ್ದಿ ಸಾರ್,

Leave a Reply

Your email address will not be published. Required fields are marked *