ಚಿಕ್ಕಬಳ್ಳಾಪುರ: ಪಿಪಿಎಚ್ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಮಾಡಲಾಯಿತು.
ಹಾಕಿ ಮಾಂತ್ರಿಕ ಧ್ಯಾನ್ ಚಂದ್ ರವರ ಹುಟ್ಟು ಹಬ್ಬದ ಉದ್ಘಾಟನೆಯನ್ನು ಕೆ. ವಿ. ವಿಪಂಚಗಿರಿ ದತ್ತಿಯ ಮೆನೇಜರ್ ಲಕ್ಷ್ಮಣ ಸ್ವಾಮಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬಿಪಿಎಡ್ ಶಿಕ್ಷಣಾರ್ಥಿಗಳು ತಮ್ಮ ನೃತ್ಯಗಳ ಮೂಲಕ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಿದರು. ಹಾಗೂ ಧ್ಯಾನ್ ಚಂದ್ ರವರ ಸಾಧನೆಗಳನ್ನು ಮಕ್ಕಳಿಗೆ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕಿಯರು,ಮಕ್ಕಳು ಮತ್ತು ಇತರರು ಹಾಜರಿದ್ದರು.