ಸರ್ಕಾರದ ನಿಯಮ ಪಾಲನೆ ಮಾಡದೇ ಇರುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು:ಕೆ ಆರ್ ಎಸ್ ಆಗ್ರಹ
ವರದಿ:ಮೇಘರಾಜ ವಾಲಿಕಾರ
ಇಂಡಿ:ತಾಲೂಕು ಕಛೆರಿಗಳಲ್ಲಿ ಗುರುತಿನ ಚೀಟಿ ಧರಿಸುವ ಹಾಗೂ ಹುದ್ದೆಯ ನಾಮ ಫಲಕ ಸೇರಿದಂತೆ ಸರ್ಕಾರದ ನಿಯಮ ಪಾಲನೆ ಮಾಡದೇ ಇರುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು. ಕಛೇರಿಯ ಬಹುತೇಕ ಸಿಬ್ಬಂದಿಗಳು ಗುರುತಿನ ಚೀಟಿ ಧರಿಸುವುದಿಲ್ಲ. ಆದರಿಂದ ಇಲ್ಲಿ ಸರ್ಕಾರಿ ನೌಕರರು ಯಾರು ಸಾರ್ವಜನಿಕರು ಯಾರು ಎನ್ನುವುದು ತಿಳಿಯುತ್ತಿಲ್ಲ. ಅದಕ್ಕಾಗಿ ಇನ್ನೂ ಮುಂದೆ ಗುತ್ತಿಗೆ ನೌಕರರು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಸರ್ಕಾರದ ನಿಯಮ ಪಾಲನೆ ಮಾಡಬೇಕೆಂದು ಉಪವಿಭಾಗಾಧಿಕಾರಿಗಳು ಇಂಡಿ
ತಹಶೀಲ್ದಾರರು ಇಂಡಿ ಜಿಲ್ಲಾ ವಿಜಯಪುರ ಅವರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಇಂಡಿ ತಾಲೂಕು ಘಟಕ ಮನವಿ ಮಾಡಿಕೊಂಡರು. ಸರ್ಕಾರದ ನಿಯಮ ಪಾಲನೆ ಮಾಡದೇ ಇದ್ದ ಸಿಬ್ಬಂದಿಗಳು ನಮಗೆ ಕಂಡು ಬಂದಲ್ಲಿ ತಮ್ಮ ಗಮನಕ್ಕೆ ತರುತ್ತೇವೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕಕೊಂಡರು.