ವೇಮಗಲ್ : ಕೋಲಾರ ತಾಲೂಕಿನ ನರಸಾಪುರ ಬಳಿ ಇರುವ ವಿಸ್ಟ್ರಾನ್ ಕಂಪನಿಯಲ್ಲಿ ಕೋಲಾರ ಅನ್ನದಾತನ ಹೆಣ್ಣು ಮಕ್ಕಳಿಗೆ ಕಾಯಂ ಕೆಲಸವನ್ನು ನೀಡಬೇಕೆಂದು ಕರ್ನಾಟಕ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರದ ಎಂ ಬಾಬಣ್ಣನವರು ಒತ್ತಾಯಿಸಿದ್ದಾರೆ.

ಪತ್ರಿಕ ಪ್ರಕಟಣೆಯಲ್ಲಿ ಮಾತನಾಡಿದವರು ಬಡ ರೈತರ ಹೆಣ್ಣು ಮಕ್ಕಳನ್ನು
ಅಗತ್ಯವಿದ್ದಾಗ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ತದನಂತರ ಉತ್ಪಾದನೆಯು ಕಡಿಮೆಯಾದಾಗ ಇವರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. ಈ ರೀತಿ ಮಾಡುತ್ತಿರುವುದರಿಂದ ಜಿಲ್ಲೆಯ ಹೆಣ್ಣು ಮಕ್ಕಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಕಂಪನಿಯಲ್ಲಿ ಖಾಯಂ ಉದ್ಯೋಗವನ್ನು ಸ್ಥಳೀಯ ಬಡ ಹೆಣ್ಣು ಮಕ್ಕಳಿಗೆ ನೀಡಬೇಕೆಂದರೂ ಆದರೆ ಇಲ್ಲಿನ ತಾರತಮ್ಯದಿಂದ ಕಾಯಂ ಕೆಲಸಗಳನ್ನು ಬೇರೆ ರಾಜ್ಯದವರಿಗೆ ನೀಡಿದ್ದಾರೆ ನಮ್ಮ ಜಿಲ್ಲೆಯ ಕಾರ್ಖಾನೆಗಳಿಗೆ ಭೂಮಿ ನೀಡಿದ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ ಕಾಯಂ ಕೆಲಸವನ್ನು ನೀಡದಿದ್ದರೆ ಮುಂದೆ ದಿನಗಳಲ್ಲಿ ಬೃಹತ್ ಹೋರಾಟವನ್ನು ಮಾಡಲಾಗುವುದು ಎಂದು ತಿಳಿಸಿದರು .

Leave a Reply

Your email address will not be published. Required fields are marked *