ಕಾರಮಂಗಲ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುಟ್ಟಹಳ್ಳಿ ಎಸ್. ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಹೆಚ್. ಕೃಷ್ಣಪ್ಪ ಆಯ್ಕೆ
ಬಂಗಾರಪೇಟೆ : ತಾಲ್ಲೂಕಿನ ಕಾರಮಂಗಲ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳಾದ ಗುಟ್ಟಹಳ್ಳಿ ಎಸ್. ಮಂಜುನಾಥ್ ಹಾಗೂ ಎಂ.ಎಸ್. ಆನಂದ್ ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.ಹಾಗು ಉಪಾಧ್ಯಕ್ಷರ ಸ್ಥಾನಕ್ಕೆ ಹೆಚ್.ಕೃಷ್ಣಪ್ಪ ಮತ್ತು ಮುನಿಯಪ್ಪ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸದರು. ನಂತರ ಚುನಾವಣೆಯಲ್ಲಿ ಗುಟ್ಟಹಳ್ಳಿಎಸ್. ಮಂಜುನಾಥ್ 8 ಮತ ಪಡೆದಿದ್ದಾರೆ. ಎಂ.ಎಸ್. ಆನಂದ್ 4ಮತ ಪಡೆದಿದ್ದಾರೆ. ಈ ಹಿನ್ನೆಲೆ ಅಧ್ಯಕ್ಷರ ಸ್ಥಾನಕ್ಕೆ ಗುಟ್ಟಹಳ್ಳಿ ಎಸ್.ಮಂಜುನಾಥ್ ಆಯ್ಕೆ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಎಚ್.ಕೃಷ್ಣಪ್ಪ 9 ಹಾಗೂ ಮುನಿಯಪ್ಪ 3 ಮತ ಪಡೆದ ಹಿನ್ನೆಲೆ ಉಪಾಧ್ಯಕ್ಷರಾಗಿ ಎಚ್.ಕೃಷ್ಣಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ನವೀನ್ ತಿಳಿಸಿದರು.
ಈ ವೇಳೆ ನೂತನ ಅಧ್ಯಕ್ಷರಾದ ಗುಟ್ಟಹಳ್ಳಿಎಸ್. ಮಂಜುನಾಥ್ ರವರು ಮಾತನಾಡಿ, ಇಂದು ನನ್ನನ್ನು ಪಕ್ಷಾತೀತವಾಗಿ ಆಯ್ಕೆ ಮಾಡಿದ್ದಾರೆ ಮೊದಲಿಗೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.ನನ್ನ ಆಡಳಿತ ಅವಧಿಯಲ್ಲಿ ಜನರಿಗೆ ಉತ್ತಮ ಸೇವೆ ನೀಡುತ್ತೇನೆ, ರೈತರಿಗೆ ಹಾಗೂ ಮಹಿಳಾ ಸಂಘಗಳಿಗೆ ಇನ್ನು ಹೆಚ್ಚು ಬಡ್ಡಿ ರಹಿತ ಸಾಲವನ್ನು ಒದಗಿಸುತ್ತೇನೆ ಮತ್ತು ಸಂಘವನ್ನು ಅಭಿವೃದ್ಧಿಪಡಿಸಲು ಹೆಚ್ಚು ಶ್ರಮವಹಿಸುತ್ತೇನೆ ಎಂದರು.
ಉಪಾಧ್ಯಕ್ಷ ಕೃಷ್ಣಪ್ಪರವರು ಮಾತನಾಡಿ, ಇಂದು ನಡೆದ 2023 ನೇ ಸಾಲಿನ ಚುನಾವಣೆಯಲ್ಲಿ ನನ್ನನ್ನು ಐದು ವರ್ಷಗಳ ಕಾಲ ಪಕ್ಷಾತೀತವಾಗಿ ಬೆಂಬಲಿಸಿದ ಎಲ್ಲಾ ನಿರ್ದೇಶಕರಿಗೂ ಅಭಿನಂದನೆ ಸಲ್ಲಿಸುತ್ತೇನೆ, ಮುಂದಿನ ದಿನಗಳಲ್ಲಿ ನಮ್ಮ ಸಂಘದ ಎಲ್ಲಾ ರೈತರಿಗೂ ಹಾಗೂ ಮಹಿಳೆಯರಿಗೂ ಸಾಲ ಸೌಲಭ್ಯವನ್ನು ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಭೈರಮ್ಮ, ಪ್ರಮೀಳಾ ಮುನಿರಾಜು, ಮುರಳಿ, ಮರಿಯಪ್ಪ, ರಾಜೇಶ್, ಕಮಲಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್,ವೆಂಕಟೇಶ್ ರೆಡ್ಡಿ, ಮುಖಂಡರಾದ ಕೆ.ಜಿ ಮುನಿರಾಜು, ಬಿ.ಕೆ. ಶ್ರೀ ರಾಮ್, ಎಲ್ಲೇಗೌಡ, ಸಹಕಾರ ಸಂಘದ ಕಾರ್ಯದರ್ಶಿ ಪ್ರಕಾಶ್ ಮೊದಲಾದವರು ಇದ್ದರು.