ಪತ್ರಿಕಾ ವಿತರಕರ ದಿನಾಚರಣೆ :

ಯಲಹಂಕ : ಯಲಹಂಕ  ದಿನಪತ್ರಿಕೆ ವಿತರಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯವನ್ನು ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ‘ಪತ್ರಿಕೆಗಳ ಪ್ರಸರಣದಲ್ಲಿ ವಿತರಕರ ಪಾತ್ರ ಮಹತ್ವಪೂರ್ಣವಾದುದು. ಸೂರ್ಯೋದಯಕ್ಕೆ ಮುನ್ನವೇ ಎದ್ದು, ತಮ್ಮ ಕಾಯಕದಲ್ಲಿ ತೊಡಗಿಕೊಳ್ಳುವ ವಿತರಕರ ಶಿಸ್ತು, ಕಾರ್ಯಮಗ್ನತೆ ನಿಜಕ್ಕೂ ಪ್ರಶಂಸನೀಯ. ಚಳಿ, ಮಳೆ ಲೆಕ್ಕಿಸದೆ ಕಾರ್ಯನಿರ್ವಹಿಸುವ ಅವರ ಶಿಸ್ತು ಅನುಕಣೀಯವಾದುದು ಎಂದರು.

ಕಾರ್ಯಕ್ರಮದ ಪ್ರಯುಕ್ತ ಯಲಹಂಕದ ಹಿರಿಯ ವಿತರಕರಾದ ಬಾಲಾಜಿ, ಉಮೇಶ್, ಮಂಜು, (ಏರ್ ಫೋರ್ಸ್ ), ಹಿರಿಯ ಪತ್ರಿಕೆ ಹುಡುಗ ಮಂಜು, ಶಿಕ್ಷಕಿಯರಾದ ಯಶೋದಾ ರವರಿಗೆ ಸನ್ಮಾನ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಸಚಿನ್ ರವರಿಗೆ ಪ್ರತಿಭಾ ಪುರಸ್ಕಾರ, ಪತ್ರಿಕೆ ಸರಬರಾಜು ಮಾಡುವ ವಾಹನ ಚಾಲಕರಿಗೆ ಸನ್ಮಾನ, ಸಾಂಸ್ಕೃತಿಕ  ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯಲಹಂಕ ಕ್ಷೇತ್ರ ಘಟಕದ ಅಧ್ಯಕ್ಷರಾದ ಹೇಮಲತಾ ಚಿದಾನಂದ್ ರವರು ಪತ್ರಿಕೆ ವಿತರಕ ಹುಡುಗರಿಗೆ 10 ಸಾವಿರ ರು.ಗಳ ಚೆಕ್ ನೀಡಿ ಅಭಿನಂದಿಸಿದರು,ಯಲಹಂಕ ವಿತರಕರ ಸಂಘದ ಅಧ್ಯಕ್ಷರಾದ ಎಂ ಸತೀಶ್ ಪತ್ರಿಕೆ ವಿತರಕರು ಚಳಿ, ಗಾಳಿ, ಮಳೆ ಎನ್ನದೆ ಕೆಲಸ ಮಾಡುವ ಮೂಲಕ ಬದುಕಿನಲ್ಲಿ  ಯಶಸ್ಸು ಗಳಿಸಬೇಕೆಂದು ಶುಭ ಹಾರೈಸಿದರು, 

ಕಾರ್ಯಕ್ರಮ ದಲ್ಲಿ ಸಂಘದ ಪದಾಧಿಕಾರಿಗಳಾದ ಶಂಕರ್, ವೀರಭದ್ರ ವೈ ಸಿ, ಪ್ರದೀಪ್, ವೆಂಕಟೇಶ್ ಮೂರ್ತಿ, ವೀರೇಶ್, ಸೋನು,ಸಂತೋಷ್, ಆರಾದ್ಯ, ಶಶಿ, ರವಿ, ನಾಗರ್ಜುನ, ಕುಮಾರ್, ಮುತ್ತುರಾಜ್, ನವೀನ್, ಆನಂದ, ಮಧು, ಬಾಲಾಜಿ, ಮುನಿ, ಮಂಜುನಾಥ್ ಸೇರಿದಂತೆ ವಿತರಕರ ಕುಟುಂಬಗಳ ಸದಸ್ಯರು, ಪತ್ರಿಕೆ ಹಂಚುವ ಹುಡುಗರು ಭಾಗವಹಿಸಿದ್ದರು.

ಯಲಹಂಕ ದಿನ ಪತ್ರಿಕೆ ವಿತರಕರ ಸಂಘದಿಂದ 

ಪತ್ರಿಕಾ ವಿತರಕರ ದಿನಾಚರಣೆ :

ಯಲಹಂಕ : ಯಲಹಂಕ  ದಿನಪತ್ರಿಕೆ ವಿತರಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯವನ್ನು ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ‘ಪತ್ರಿಕೆಗಳ ಪ್ರಸರಣದಲ್ಲಿ ವಿತರಕರ ಪಾತ್ರ ಮಹತ್ವಪೂರ್ಣವಾದುದು. ಸೂರ್ಯೋದಯಕ್ಕೆ ಮುನ್ನವೇ ಎದ್ದು, ತಮ್ಮ ಕಾಯಕದಲ್ಲಿ ತೊಡಗಿಕೊಳ್ಳುವ ವಿತರಕರ ಶಿಸ್ತು, ಕಾರ್ಯಮಗ್ನತೆ ನಿಜಕ್ಕೂ ಪ್ರಶಂಸನೀಯ. ಚಳಿ, ಮಳೆ ಲೆಕ್ಕಿಸದೆ ಕಾರ್ಯನಿರ್ವಹಿಸುವ ಅವರ ಶಿಸ್ತು ಅನುಕಣೀಯವಾದುದು ಎಂದರು.

ಕಾರ್ಯಕ್ರಮದ ಪ್ರಯುಕ್ತ ಯಲಹಂಕದ ಹಿರಿಯ ವಿತರಕರಾದ ಬಾಲಾಜಿ, ಉಮೇಶ್, ಮಂಜು, (ಏರ್ ಫೋರ್ಸ್ ), ಹಿರಿಯ ಪತ್ರಿಕೆ ಹುಡುಗ ಮಂಜು, ಶಿಕ್ಷಕಿಯರಾದ ಯಶೋದಾ ರವರಿಗೆ ಸನ್ಮಾನ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಸಚಿನ್ ರವರಿಗೆ ಪ್ರತಿಭಾ ಪುರಸ್ಕಾರ, ಪತ್ರಿಕೆ ಸರಬರಾಜು ಮಾಡುವ ವಾಹನ ಚಾಲಕರಿಗೆ ಸನ್ಮಾನ, ಸಾಂಸ್ಕೃತಿಕ  ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯಲಹಂಕ ಕ್ಷೇತ್ರ ಘಟಕದ ಅಧ್ಯಕ್ಷರಾದ ಹೇಮಲತಾ ಚಿದಾನಂದ್ ರವರು ಪತ್ರಿಕೆ ವಿತರಕ ಹುಡುಗರಿಗೆ 10 ಸಾವಿರ ರು.ಗಳ ಚೆಕ್ ನೀಡಿ ಅಭಿನಂದಿಸಿದರು,ಯಲಹಂಕ ವಿತರಕರ ಸಂಘದ ಅಧ್ಯಕ್ಷರಾದ ಎಂ ಸತೀಶ್ ಪತ್ರಿಕೆ ವಿತರಕರು ಚಳಿ, ಗಾಳಿ, ಮಳೆ ಎನ್ನದೆ ಕೆಲಸ ಮಾಡುವ ಮೂಲಕ ಬದುಕಿನಲ್ಲಿ  ಯಶಸ್ಸು ಗಳಿಸಬೇಕೆಂದು ಶುಭ ಹಾರೈಸಿದರು, 

ಕಾರ್ಯಕ್ರಮ ದಲ್ಲಿ ಸಂಘದ ಪದಾಧಿಕಾರಿಗಳಾದ ಶಂಕರ್, ವೀರಭದ್ರ ವೈ ಸಿ, ಪ್ರದೀಪ್, ವೆಂಕಟೇಶ್ ಮೂರ್ತಿ, ವೀರೇಶ್, ಸೋನು,ಸಂತೋಷ್, ಆರಾದ್ಯ, ಶಶಿ, ರವಿ, ನಾಗರ್ಜುನ, ಕುಮಾರ್, ಮುತ್ತುರಾಜ್, ನವೀನ್, ಆನಂದ, ಮಧು, ಬಾಲಾಜಿ, ಮುನಿ, ಮಂಜುನಾಥ್ ಸೇರಿದಂತೆ ವಿತರಕರ ಕುಟುಂಬಗಳ ಸದಸ್ಯರು, ಪತ್ರಿಕೆ ಹಂಚುವ ಹುಡುಗರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *