ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಇಂದು ನಗರದ ಹೊರವಲಯದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ ನಿ ಸಹಕಾರ ಭವನದಲ್ಲಿ” ಹಮ್ಮಿಕೊಳ್ಳಲಾಗಿತ್ತು.ಒಕ್ಕೂಟದ ಅಧ್ಯಕ್ಷರಾದ ಹೆಚ್.ವಿ.ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಯೂನಿಯನ್‌ನಲ್ಲಿ ಸದಸ್ಯತ್ವ ಪಡೆದಿರುವ ಸದಸ್ಯ ಸಹಕಾರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಹೆಚ್.ವಿ. ನಾಗರಾಜ್ 36ಲಕ್ಷ ದೇಣಿಗೆ ಮುಖಾಂತರ ಕೊಟ್ಟಿರುವ ಯಲ್ಲರಿಗೂ ಕೃತಜ್ಞತೆ ಕೋರುತೇನೆ.
ಮಾನ್ಯ ಸಹಕಾರ ಸಚಿವರು ಇನ್ನೂ ಬೇರೆ ಬೇರೆ ಅನುದಾನ ಕೊಡಿಸಿ ನಮ್ಮ ಚಿಕ್ಕಬಳ್ಳಾಪುರ ಸಹಕಾರ ಭವನ ಸಂಘ ಅಭಿವೃದ್ಧಿ ಮಾಡಿಕೊಡುತ್ತೇನೆ ಎಂದು ಸಹಕಾರ ಮಂತ್ರಿ ಗಳಾದ ರಾಜಣ್ಣ ಅವರು ಅಶ್ವಾಸನೆ ಕೊಟ್ಟಿದ್ದಾರೆ ಮತ್ತು ಈ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು ಯಲ್ಲಾ ಶಾಸಕರು ಎಲ್ಲಾ ಅಧಿಕಾರಿಗಳು ಸಹಕಾರ ಕೊಟ್ಟಿದಾರೆ ಇವತ್ತು ವಾರ್ಷಿಕ ಮಹಾ ಸಭೆ ಉತ್ತಮವಾಗಿ ನಡೆದಿದೆ ಸದಸ್ಯರು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ ಇನ್ನು ಮುಂದೆ ಚನ್ನಾಗಿ ತರಬೇತಿ ಮಾಡಿಕೊಂಡು ಹೋಗುತ್ತಿವೆ ಇನ್ನು ನೋತನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದವರಿಗೆ ಕೃತಜ್ಞತೆ
ಸಲ್ಲಿಸಲಾಯಿತು ಎಂದರು.
ಈ ಸಭೆಯಲ್ಲಿ 2022-23ನೇ ಸಾಲಿನ ಆಡಳಿತ ಮಂಡಳಿ ವಾರ್ಷಿಕ ವರದಿಯನ್ನು ಪರಿಶೀಲಿಸಿ ಅಂಗೀಕರಿಸುವುದು.2022-23ನೇ ಸಾಲಿನ ಆಡಿಟ್ ಆದ ಲೆಕ್ಕಪರಿಶೋಧನಾ ವರದಿಯನ್ನು ಪರಿಶೀಲಿಸಿ ಅನುಮೋದನೆ ನೀಡುವುದು ಹಾಗೂ
ಲೆಕ್ಕಪರಿಶೋಧಕರ ಆಕ್ಷೇಪಗಳಿಗೆ ಸಮಜಾಯಿಷಿಗಳನ್ನು ಪರಿಶೀಲಿಸುವುದು ಮತ್ತು ಅಂಗೀಕರಿಸುವುದು.2023-24ನೇ ಸಾಲಿನಲ್ಲಿ ಒಕ್ಕೂಟದಿಂದ ನಡೆಸಬಹುದಾದ ತರಬೇತಿ ಕಾರ್ಯಕ್ರಮಗಳ ಕುರಿತು ಹಾಗೂ 2023-24ನೇ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿಯನ್ನು ಅನುಮೋದಿಸುವ ಕುರಿತು ಚರ್ಚೆ 2022-23ನೇ ಸಾಲಿಗೆ ಒಕ್ಕೂಟದಲ್ಲಿ ಅಜೀವ ಸದಸ್ಯತ್ವ ಪಡೆದಿರುವ ಸಹಕಾರ ಸಂಘಗಳ ಪಟ್ಟಿಯನ್ನು ಪರಿಶೀಲಿಸುವುದು ಹಾಗೂ ಇನ್ನು ಇತರೆ ವಿಷಯಗಳ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಎನ್.ಕೆ.ಲಕ್ಷ್ಮೀಪತಿ, ನಿರ್ದೇಶಕರುಗಳಾದ ರವಿಚಂದ್ರ ರೆಡ್ಡಿ,ಉತ್ತಿ ರೆಡ್ಡಿ, ಭೀಮೇಶ್,
ರವಣಮ್ಮ,ಕೆಂಪಣ್ಣ,ನರಸಿಂಹಮೂರ್ತಿ,ವೆಂಕಟ್ ಸ್ವಾಮಿ ಗೌಡ,ಎಂ ವಿ ಶಿವಣ್ಣ ಸಿಬ್ಬಂದಿ ವರ್ಗದವರಾದ ನಾಗಭೂಷಣ್,ಪ್ರದೀಪ್,ನಾಗೇಶ್, ನಾಗರಾಜ್ ಇನ್ನು ಹಲವಾರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *