ಶಿಡ್ಲಘಟ್ಟ : ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದಲ್ಲಿ ಬಂದೋಬಸ್ತ್ ಗೆ ತೆರಳಿದ್ದ ಪೊಲೀಸ್ ಡಿಎಆರ್ ವಾಹನ ಸಂಖ್ಯೆ : ಕೆ.ಎ 40, ಜಿ.274 ಇಂದು ಬೆಳಂ ಬೆಳಗ್ಗೆ ಬೈರಗಾನಹಳ್ಳಿಯಿಂದ ವಾಪಸ್ ಬರುವ ವೇಳೆ ದ್ಯಾವಪ್ಪನ ಗುಡಿ ಸಮೀಪ ಮಾರ್ಗ ಮದ್ಯ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ನಡೆದಿದೆ.
ಬೈರಗಾನಹಳ್ಳಿ ಗ್ರಾಮದಲ್ಲಿ ದಲಿತ ಮುಖಂಡ ನಾರಾಯಣಸ್ವಾಮಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಕಾನೂನು ಸುವ್ಯವಸ್ಥೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಕಲ್ಪಿಸಿದೆ. ಡಿ.ಎ.ಆರ್ ವಾಹನದಲ್ಲಿ ಪೊಲೀಸ್ ಅಧಿಕಾರಿ ಐವರು ಸಿಬ್ಬಂದಿ ಬಂದೋಬಸ್ತ್ ಮುಗಿಸಿಕೊಂಡು ಬರಬೇಕಿತ್ತು. ಆದರೆ ಸಿಬ್ಬಂದಿ
ದ್ವಿಚಕ್ರವಾಹನಗಳಲ್ಲಿ ಹೊರಟಿದ್ದಾರೆ. ಚಾಲಕ ವಾಹನವನ್ನು ಚಾಲನೆ ಮಾಡಿಕೊಂಡು ಬರುವಾಗ ಮಾರ್ಗ ಮದ್ಯ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಹಳ್ಳದ ಜಮೀನಿನಲ್ಲಿ ಪಲ್ಟಿಯಾಗಿದೆ.
ವಾಹನದಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದೇ ಇದ್ದರಿಂದ ಅದೃಷ್ಟಾವಶ ಯಾವುದೇ ಪ್ರಾಣ ಹಾನಿಯಾಗಿಲ್ಲ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಜೆಸಿಬಿ ಯಂತ್ರದಿಂದ ಪೊಲೀಸ್ ವಾಹನ ತೆರವು ಕಾರ್ಯ ನಡೆಯಿತು.
ಬಂದೋಬಸ್ತ್ ಗೆ ತೆರಳಿದ್ದ ಪೊಲೀಸ್ ಡಿ.ಎ.ಆರ್ ವಾಹನ ಪಲ್ಟಿ ಚಾಲಕ ಪಾರು.
ಶಿಡ್ಲಘಟ್ಟ : ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದಲ್ಲಿ ಬಂದೋಬಸ್ತ್ ಗೆ ತೆರಳಿದ್ದ ಪೊಲೀಸ್ ಡಿಎಆರ್ ವಾಹನ ಸಂಖ್ಯೆ : ಕೆ.ಎ 40, ಜಿ.274 ಇಂದು ಬೆಳಂ ಬೆಳಗ್ಗೆ ಬೈರಗಾನಹಳ್ಳಿಯಿಂದ ವಾಪಸ್ ಬರುವ ವೇಳೆ ದ್ಯಾವಪ್ಪನ ಗುಡಿ ಸಮೀಪ ಮಾರ್ಗ ಮದ್ಯ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ನಡೆದಿದೆ.
ಬೈರಗಾನಹಳ್ಳಿ ಗ್ರಾಮದಲ್ಲಿ ದಲಿತ ಮುಖಂಡ ನಾರಾಯಣಸ್ವಾಮಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಕಾನೂನು ಸುವ್ಯವಸ್ಥೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಕಲ್ಪಿಸಿದೆ. ಡಿ.ಎ.ಆರ್ ವಾಹನದಲ್ಲಿ ಪೊಲೀಸ್ ಅಧಿಕಾರಿ ಐವರು ಸಿಬ್ಬಂದಿ ಬಂದೋಬಸ್ತ್ ಮುಗಿಸಿಕೊಂಡು ಬರಬೇಕಿತ್ತು. ಆದರೆ ಸಿಬ್ಬಂದಿ
ದ್ವಿಚಕ್ರವಾಹನಗಳಲ್ಲಿ ಹೊರಟಿದ್ದಾರೆ. ಚಾಲಕ ವಾಹನವನ್ನು ಚಾಲನೆ ಮಾಡಿಕೊಂಡು ಬರುವಾಗ ಮಾರ್ಗ ಮದ್ಯ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಹಳ್ಳದ ಜಮೀನಿನಲ್ಲಿ ಪಲ್ಟಿಯಾಗಿದೆ.
ವಾಹನದಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದೇ ಇದ್ದರಿಂದ ಅದೃಷ್ಟಾವಶ ಯಾವುದೇ ಪ್ರಾಣ ಹಾನಿಯಾಗಿಲ್ಲ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಜೆಸಿಬಿ ಯಂತ್ರದಿಂದ ಪೊಲೀಸ್ ವಾಹನ ತೆರವು ಕಾರ್ಯ ನಡೆಯಿತು.