ಕೋಲಾರ :- ಯಾರು ಸಹ ವಿದ್ಯುತ್ತನ್ನು ಕಳ್ಳತನ ಮಾಡಬೇಡಿ ಮಾಡಿದರೆ ನಿಮ್ಮ ಜೇಬಿಗೆ ಕುತ್ತು ಜೀವಕ್ಕೆ ಆಪತ್ತು ಎಂದು ಕೋಲಾರ ಬೆಸ್ಕಾಂ ಜಾಗೃತ ದಳದ ಇನ್ಸ್ಪೆಕ್ಟರ್ ಸದಾನಂದ ತಿಳಿಸಿದರು.

ತಾಲೂಕಿನ ನರಸಾಪುರ ಗ್ರಾಮದಲ್ಲಿ ಬೆಸ್ಕಾಂ ಜಾಗೃತದಳದ ಇಲಾಖೆ ಬೆಸ್ಕಾಂ ಗ್ರಾಹಕರೊಂದಿಗೆ ವಿದ್ಯುತ್ ಕಳುವು ಬಗ್ಗೆ ಏರ್ಪಡಿಸಿದ್ದ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯುತ್ ಸೋರಿಕೆ ಆಗುವುದು ಹೆಚ್ಚಾದರೆ ಹಿರಿಯ ಅಧಿಕಾರಿಗಳು ಸೋರಿಕೆಯನ್ನು ತಡೆಗಟ್ಟಿ ಇಂದು ನಮ್ಮ ಮೇಲೆ ಒತ್ತಡ ಹಾಕುತ್ತಾರೆ, ಆ ನಿಟ್ಟಿನಲ್ಲಿ ಕಾರ್ಯಚರಣೆಗೆ ಬಂದಾಗ ಕೆಲವರು ಮೀಟರ್ ಗಳು ಇಲ್ಲದೆ ತಂತಿಯನ್ನು ಹಾಕಿ ವಿದ್ಯುತ್ ಉಪಯೋಗಿಸುತ್ತಿರುತ್ತಾರೆ ಅಂತಹ ಕೆಲಸಗಳನ್ನು ಯಾರು ಸಹ ಮಾಡಬಾರದು, ಕಡಿಮೆ ಹಣವನ್ನು ಉಳಿಸಲು ಹೋಗಿ ಹೆಚ್ಚಿನ ಮೊತ್ತದ ದಂಡದ ಹಣವನ್ನು ಕಟ್ಟಬೇಕಾಗುತ್ತದೆ.

ಕಳ್ಳತನ ಮಾಡಲು ಹೋದ ಸಂದರ್ಭದಲ್ಲಿ ಹೆಚ್ಚಿನ ಅಪಘಾತಗಳು ಆಗುವ ಸಂಭವ ಹೆಚ್ಚಾಗಿರುತ್ತದೆ, ತಂತಿಗೆ ಕೊಕ್ಕೆ ಹಾಕಲು ಹೋದ ಸಂದರ್ಭದಲ್ಲಿ ಎಲ್ ಟಿ ಮತ್ತು ಹೆಚ್ ಟಿ ಲೈನ್ ಎಂಬುದು ತಿಳಿದಿರುವುದಿಲ್ಲ, ಆಗ ಅಪಾಯವೂ ಸಹ ಆಗಬಹುದು ಈಗ ಸರ್ಕಾರ ಗೃಹಜೋತಿ ಯೋಜನೆ ಮೂಲಕ 200 ಯೂನಿಟ್ ಉಚಿತ ವಿದ್ಯುತ್ತನ್ನು ನೀಡುತ್ತಿದೆ. ಹೀಗಿರುವಾಗ ಕಳ್ಳತನವನ್ನು ಮಾಡಲು ಹೋಗಬಾರದು ಎಂದು ಎಚ್ಚರಿಸಿದರು.

ಸರ್ಕಾರದಿಂದ ನೀಡಿರುವಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಹಾಗೂ ಕೃಷಿ ಪಂಪು ಸೆಟ್ಟುಗಳಿಗೆ ನಿರಂತರ ಜ್ಯೋತಿಯಲ್ಲಿ ಉಪಯೋಗಿಸುತ್ತಿರುವುದು ಈ ಭಾಗದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ, ನಿರಂತರ ಜ್ಯೋತಿಯನ್ನು ಮನೆಗಳಿಗೆ ಮತ್ತು ವಾಣಿಜ್ಯ ಚಟುವಟಿಕೆಗಳಿಗಾಗಿ ಮಾತ್ರ ಉಪಯೋಗಿಸಬೇಕು ಎಂದರು

ಈ ಸಂದರ್ಭದಲ್ಲಿ ನರಸಾಪುರ ಬೆಸ್ಕಾಂ ವಿಭಾಗದ ಜೂನಿಯರ್ ಇಂಜಿನಿಯರ್ ಆಲಿ ಬಾಷಾ, ನರಸಾಪುರ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು, ಗ್ರಾಪಂ ಸದಸ್ಯರುಗಳಾದ ಕೆಇಬಿ ಚಂದ್ರು, ಗೋಪಿನಾಥ್, ಮುನಿರಾಜು ಕುಮಾರ್, ಎನ್ ಲೋಕೇಶ್, ಮುಖಂಡ ಹರೀಶ್ ಜಾಗ್ರತ ದಳದ ಸಿಬ್ಬಂದಿಗಳಾದ ಮಹೇಶ್, ಸೋಮಶೇಖರ್ ಮತ್ತು ಗೃಹರಕ್ಷಕ ಸುಧಾಕರ್ ಹಾಜರಿದ್ದರು,

ವಿದ್ಯುತ್ತನ್ನು ಕಳ್ಳತನ ಮಾಡಬೇಡಿ ಮಾಡಿದರೆ ನಿಮ್ಮ ಜೇಬಿಗೆ ಕುತ್ತು ಜೀವಕ್ಕೆ ಆಪತ್ತು

ಕೋಲಾರ :- ಯಾರು ಸಹ ವಿದ್ಯುತ್ತನ್ನು ಕಳ್ಳತನ ಮಾಡಬೇಡಿ ಮಾಡಿದರೆ ನಿಮ್ಮ ಜೇಬಿಗೆ ಕುತ್ತು ಜೀವಕ್ಕೆ ಆಪತ್ತು ಎಂದು ಕೋಲಾರ ಬೆಸ್ಕಾಂ ಜಾಗೃತ ದಳದ ಇನ್ಸ್ಪೆಕ್ಟರ್ ಸದಾನಂದ ತಿಳಿಸಿದರು.

ತಾಲೂಕಿನ ನರಸಾಪುರ ಗ್ರಾಮದಲ್ಲಿ ಬೆಸ್ಕಾಂ ಜಾಗೃತದಳದ ಇಲಾಖೆ ಬೆಸ್ಕಾಂ ಗ್ರಾಹಕರೊಂದಿಗೆ ವಿದ್ಯುತ್ ಕಳುವು ಬಗ್ಗೆ ಏರ್ಪಡಿಸಿದ್ದ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯುತ್ ಸೋರಿಕೆ ಆಗುವುದು ಹೆಚ್ಚಾದರೆ ಹಿರಿಯ ಅಧಿಕಾರಿಗಳು ಸೋರಿಕೆಯನ್ನು ತಡೆಗಟ್ಟಿ ಇಂದು ನಮ್ಮ ಮೇಲೆ ಒತ್ತಡ ಹಾಕುತ್ತಾರೆ, ಆ ನಿಟ್ಟಿನಲ್ಲಿ ಕಾರ್ಯಚರಣೆಗೆ ಬಂದಾಗ ಕೆಲವರು ಮೀಟರ್ ಗಳು ಇಲ್ಲದೆ ತಂತಿಯನ್ನು ಹಾಕಿ ವಿದ್ಯುತ್ ಉಪಯೋಗಿಸುತ್ತಿರುತ್ತಾರೆ ಅಂತಹ ಕೆಲಸಗಳನ್ನು ಯಾರು ಸಹ ಮಾಡಬಾರದು, ಕಡಿಮೆ ಹಣವನ್ನು ಉಳಿಸಲು ಹೋಗಿ ಹೆಚ್ಚಿನ ಮೊತ್ತದ ದಂಡದ ಹಣವನ್ನು ಕಟ್ಟಬೇಕಾಗುತ್ತದೆ.

ಕಳ್ಳತನ ಮಾಡಲು ಹೋದ ಸಂದರ್ಭದಲ್ಲಿ ಹೆಚ್ಚಿನ ಅಪಘಾತಗಳು ಆಗುವ ಸಂಭವ ಹೆಚ್ಚಾಗಿರುತ್ತದೆ, ತಂತಿಗೆ ಕೊಕ್ಕೆ ಹಾಕಲು ಹೋದ ಸಂದರ್ಭದಲ್ಲಿ ಎಲ್ ಟಿ ಮತ್ತು ಹೆಚ್ ಟಿ ಲೈನ್ ಎಂಬುದು ತಿಳಿದಿರುವುದಿಲ್ಲ, ಆಗ ಅಪಾಯವೂ ಸಹ ಆಗಬಹುದು ಈಗ ಸರ್ಕಾರ ಗೃಹಜೋತಿ ಯೋಜನೆ ಮೂಲಕ 200 ಯೂನಿಟ್ ಉಚಿತ ವಿದ್ಯುತ್ತನ್ನು ನೀಡುತ್ತಿದೆ. ಹೀಗಿರುವಾಗ ಕಳ್ಳತನವನ್ನು ಮಾಡಲು ಹೋಗಬಾರದು ಎಂದು ಎಚ್ಚರಿಸಿದರು.

ಸರ್ಕಾರದಿಂದ ನೀಡಿರುವಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಹಾಗೂ ಕೃಷಿ ಪಂಪು ಸೆಟ್ಟುಗಳಿಗೆ ನಿರಂತರ ಜ್ಯೋತಿಯಲ್ಲಿ ಉಪಯೋಗಿಸುತ್ತಿರುವುದು ಈ ಭಾಗದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ, ನಿರಂತರ ಜ್ಯೋತಿಯನ್ನು ಮನೆಗಳಿಗೆ ಮತ್ತು ವಾಣಿಜ್ಯ ಚಟುವಟಿಕೆಗಳಿಗಾಗಿ ಮಾತ್ರ ಉಪಯೋಗಿಸಬೇಕು ಎಂದರು

ಈ ಸಂದರ್ಭದಲ್ಲಿ ನರಸಾಪುರ ಬೆಸ್ಕಾಂ ವಿಭಾಗದ ಜೂನಿಯರ್ ಇಂಜಿನಿಯರ್ ಆಲಿ ಬಾಷಾ, ನರಸಾಪುರ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು, ಗ್ರಾಪಂ ಸದಸ್ಯರುಗಳಾದ ಕೆಇಬಿ ಚಂದ್ರು, ಗೋಪಿನಾಥ್, ಮುನಿರಾಜು ಕುಮಾರ್, ಎನ್ ಲೋಕೇಶ್, ಮುಖಂಡ ಹರೀಶ್ ಜಾಗ್ರತ ದಳದ ಸಿಬ್ಬಂದಿಗಳಾದ ಮಹೇಶ್, ಸೋಮಶೇಖರ್ ಮತ್ತು ಗೃಹರಕ್ಷಕ ಸುಧಾಕರ್ ಹಾಜರಿದ್ದರು,

Leave a Reply

Your email address will not be published. Required fields are marked *