ಉತ್ಪಾದಕರು ಗುಣಮಟ್ಟದ ಹಾಲಿಗೆ ಆಧ್ಯತೆ ನೀಡಿ: ರಾಮಾಂಜಿನಪ್ಪ,
ಕೋಲಾರ : ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಡೇರಿ ಹಾಗೂ ಒಕ್ಕೂಟವನ್ನು ಪ್ರಗತಿಯತ್ತ ಕೊಂಡೊಯ್ಯಲು ಮುಂದಾಗಬೇಕು ಕೋಚಿಮುಲ್ ವಿಸ್ತರಣಾಧಿಕಾರಿ ಎಸ್.ರಾಮಾಂಜಿನಪ್ಪ ತಿಳಿಸಿದರು,
ತಾಲೂಕಿನ ವಕ್ಕಲೇರಿ ಹೋಬಳಿ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು ಡೇರಿಯು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಅರ್ಥಿಕವಾಗಿ ಬಲಗೊಳ್ಳುತ್ತಾ ಇದ್ದು ಕೇವಲ ಒಂದು ವರ್ಷದೊಳಗೆ ಹೊಸ ಕಟ್ಟಡ ನಿರ್ಮಿಸಿಕೊಂಡಿದ್ದು ಇದಕ್ಕೆ ಹಾಲು ಉತ್ಪಾದಕರು ಮತ್ತು ಕಾರ್ಯಕಾರಿ ಮಂಡಳಿ ನಿರ್ದೇಶಕರ ಸಹಕಾರದ ಮನೋಭಾವ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಒಕ್ಕೂಟದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಹಾಲು ಉತ್ಪಾದಕರಿಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಅಮರೇಶ್ ಈ ಸಾಲಿನಲ್ಲಿ ಸಂಘವು ವ್ಯಾಪಾರ ಲಾಭದಲ್ಲಿ 352893 ರೂಪಾಯಿ ಗಳಿಸಿದ್ದು ನಿವ್ವಳ ಲಾಭವು 122619 ಗಳಿಸಿದ್ದು ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸಲು ಉತ್ಪಾದಕರ ಸಹಕಾರ ಮುಖ್ಯವಾಗಿದೆ ಸರಕಾರ ಹಾಲು ಉತ್ಪಾದಕರನ್ನು ಉತ್ತೇಜಿಸಲು ಪ್ರೋತ್ಸಾಹಧನ ನೀಡುತ್ತಿದೆ. ಅಲ್ಲದೆ ಒಕ್ಕೂಟದಿಂದ ಹಸಿರುಮೇವು ಬಿತ್ತನೆಬೀಜಕ್ಕೂ ಪೋತ್ಸಾಹ ನೀಡಲಾಗುತ್ತದೆ ಸದುಪಯೋಗ ಪಡಿಸಿಕೊಳ್ಳಿ ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಚಿಕ್ಕನಹಳ್ಳಿ ಡೇರಿಯ ನಿರ್ದೇಶಕರಾದ ಬಿ.ಶ್ರೀನಿವಾಸಪ್ಪ, ಸಿ.ಎಂ ರಮೇಶ್, ನಾಗರಾಜ್, ಸಿ.ಸಿ ಶ್ರೀನಿವಾಸ್, ಸಿ.ವಿ ಅಚ್ಚಪ್ಪ, ಶಾರದಾದೇವಿ, ಸೊಣ್ಣಮ್ಮ, ಭಾಗ್ಯಮ್ಮ, ವಿಮಲಮ್ಮ, ವೆಂಕಟಮ್ಮ, ಕಾರ್ಯದರ್ಶಿ ಆರ್ ಗೋಪಾಲಪ್ಪ, ಮಾಜಿ ಕಾರ್ಯದರ್ಶಿ ಸಿ.ಎಂ ಮುನಿಯಪ್ಪ, ಹಾಲು ಪರೀಕ್ಷಕ ಬೈಚೇಗೌಡ, ಸೇರಿದಂತೆ ಉತ್ಪಾದಕರು ಇದ್ದರು
ಚಿಕ್ಕನಹಳ್ಳಿ ಡೇರಿಯಲ್ಲಿ ಈ ಸಾಲಿಗೆ 352893 ರೂ ಗಳು ವ್ಯಾಪಾರ ಲಾಭ
ಉತ್ಪಾದಕರು ಗುಣಮಟ್ಟದ ಹಾಲಿಗೆ ಆಧ್ಯತೆ ನೀಡಿ: ರಾಮಾಂಜಿನಪ್ಪ,
ಕೋಲಾರ : ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಡೇರಿ ಹಾಗೂ ಒಕ್ಕೂಟವನ್ನು ಪ್ರಗತಿಯತ್ತ ಕೊಂಡೊಯ್ಯಲು ಮುಂದಾಗಬೇಕು ಕೋಚಿಮುಲ್ ವಿಸ್ತರಣಾಧಿಕಾರಿ ಎಸ್.ರಾಮಾಂಜಿನಪ್ಪ ತಿಳಿಸಿದರು,
ತಾಲೂಕಿನ ವಕ್ಕಲೇರಿ ಹೋಬಳಿ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು ಡೇರಿಯು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಅರ್ಥಿಕವಾಗಿ ಬಲಗೊಳ್ಳುತ್ತಾ ಇದ್ದು ಕೇವಲ ಒಂದು ವರ್ಷದೊಳಗೆ ಹೊಸ ಕಟ್ಟಡ ನಿರ್ಮಿಸಿಕೊಂಡಿದ್ದು ಇದಕ್ಕೆ ಹಾಲು ಉತ್ಪಾದಕರು ಮತ್ತು ಕಾರ್ಯಕಾರಿ ಮಂಡಳಿ ನಿರ್ದೇಶಕರ ಸಹಕಾರದ ಮನೋಭಾವ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಒಕ್ಕೂಟದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಹಾಲು ಉತ್ಪಾದಕರಿಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಅಮರೇಶ್ ಈ ಸಾಲಿನಲ್ಲಿ ಸಂಘವು ವ್ಯಾಪಾರ ಲಾಭದಲ್ಲಿ 352893 ರೂಪಾಯಿ ಗಳಿಸಿದ್ದು ನಿವ್ವಳ ಲಾಭವು 122619 ಗಳಿಸಿದ್ದು ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸಲು ಉತ್ಪಾದಕರ ಸಹಕಾರ ಮುಖ್ಯವಾಗಿದೆ ಸರಕಾರ ಹಾಲು ಉತ್ಪಾದಕರನ್ನು ಉತ್ತೇಜಿಸಲು ಪ್ರೋತ್ಸಾಹಧನ ನೀಡುತ್ತಿದೆ. ಅಲ್ಲದೆ ಒಕ್ಕೂಟದಿಂದ ಹಸಿರುಮೇವು ಬಿತ್ತನೆಬೀಜಕ್ಕೂ ಪೋತ್ಸಾಹ ನೀಡಲಾಗುತ್ತದೆ ಸದುಪಯೋಗ ಪಡಿಸಿಕೊಳ್ಳಿ ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಚಿಕ್ಕನಹಳ್ಳಿ ಡೇರಿಯ ನಿರ್ದೇಶಕರಾದ ಬಿ.ಶ್ರೀನಿವಾಸಪ್ಪ, ಸಿ.ಎಂ ರಮೇಶ್, ನಾಗರಾಜ್, ಸಿ.ಸಿ ಶ್ರೀನಿವಾಸ್, ಸಿ.ವಿ ಅಚ್ಚಪ್ಪ, ಶಾರದಾದೇವಿ, ಸೊಣ್ಣಮ್ಮ, ಭಾಗ್ಯಮ್ಮ, ವಿಮಲಮ್ಮ, ವೆಂಕಟಮ್ಮ, ಕಾರ್ಯದರ್ಶಿ ಆರ್ ಗೋಪಾಲಪ್ಪ, ಮಾಜಿ ಕಾರ್ಯದರ್ಶಿ ಸಿ.ಎಂ ಮುನಿಯಪ್ಪ, ಹಾಲು ಪರೀಕ್ಷಕ ಬೈಚೇಗೌಡ, ಸೇರಿದಂತೆ ಉತ್ಪಾದಕರು ಇದ್ದರು