ದೇವನಹಳ್ಳಿ : ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಹಿಂದುಳಿದ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯನೀರು, ಪಂಚಾಯಿತಿಗೆ ಆದಾಯದ ಮೂಲಗಳಿಗೆ ಹೆಚ್ಚಿನ ಕಾಳಜಿ ವಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ಗ್ರಾಮ ಪಂಚಾ ಯಿತಿಯನ್ನು ಮಾದರಿ ಪಂಚಾಯತಿಯನ್ನಾಗಿ ಮಾಡುವುದರ ಜೊತೆಗೆ ಸರ್ವಾಂಗಿನ ಅಭಿವೃದ್ಧಿಗೆ ಶ್ರಮಿಸುದಾಗಿ ಚನ್ನರಾಯ ಪಟ್ಟಣ ಗ್ರಾ.ಪಂ. ಉಪಾದ್ಯಕ್ಷರಾಗಿ ರತ್ನಮ್ಮ ವೆಂಕಟೇಶಪ್ಪ ಅಭಿಪ್ರಾಯಸಿದರು.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾಮ ಪಂಚಾ ಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಬಳಿಕ ಅದಿಕಾರ ಸ್ವೀಕರಿಸಿ ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ ಆದಾಯದ ಮೂಲಗಳಿಲ್ಲ ಇಲ್ಲದಿದ್ದರು ಬರುವ ಮೂಲಗಳಲ್ಲೇ ಅಗತ್ಯ ಮೂಲಭೂತ ಸೌಕರ್ಯ ಗಳನ್ನು ಒದಗಿಸಲು ಒದಗಿಸಲಾಗುತಗತಿದೆ, ಸರ್ಕಾರದ ಅನುದಾನವನ್ನೇ ನಂಬಿಕೊಂಡು ಆಡಳಿತ ನಡೆಸುತ್ತಿದ್ದೇವೆ, ಹಿಂದುಳಿದ ಪಂಚಾಯಿತಿಗಳನ್ನು ಗುರ್ತಿಸಿ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಮತ್ತಷ್ಟು ಅನುಕೂಲವಾಗಲಿದೆ. ನಮ್ಮ ಮೇಲೆ ನಂಬಿಯನ್ನಿಟ್ಟು ಅದಿಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಗ್ರಾಮ ಪಂಚಾಯಿತಿ ಒಟ್ಟು15 ಸದಸ್ಯರ ಸಂಖ್ಯಾ ಬಲವಿದ್ದು ಜೆಡಿಎಸ್ ೧೨ ಮತ್ತು ಕಾಂಗ್ರೆಸ್ ೩ ಸದಸ್ಯರಿದ್ದು, ಪಕ್ಷತೀತವಾಗಿ ಅಭಿವೃದ್ಧಿಗೆ ಒತ್ತು ನೀಡುತಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಉತ್ತೇಜನ ನೀಡಲಾಗಿದೆ, ಆದಾಯದ ಮೂಲಗಳಿಗಾಗಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ರೂಪದಲ್ಲಿ ಪಂಚಾಯಿತಿಗೆ ಆದಾಯ ಸಂದಾಯ ವಾಗುತ್ತಿದೆ. ಮಾಸಿಕ ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿನ ಕುಂದು ಕೊರತೆಗಳ ಮಾಹಿತಿಯನ್ನು ಸರ್ವ ಸದಸ್ಯರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಗ್ರಾಮಸ್ಥರಿಗೆ ಅಗತ್ಯ ಸೇವೆ ಒದಗಿಸುತ್ತ ಬಂದಿದ್ದೇಬವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ ಅಡಿ ಪ್ರತಿ ಮನೆ, ಮನೆಗೆ ನಳ ಹಾಕು ವ ಮೂಲಕ ಯಶಸ್ವಿ ಅನುಷ್ಠಾನಕ್ಕೆ ಸರ್ವ ಸದಸ್ಯರು ಸ್ಪಂದಿಸುತಿದ್ದಾರೆಂದರು.
ಈ ಸಂದರ್ಭದಲ್ಲಿ ಚುನಾವಣಾದಿಕಾರಿ ಸುಮ,
ಚನ್ನರಾಯಪಟ್ಟಣ ಪಂಚಾಯಿತಿ ಸದಸ್ಯ ಮಾರೇಗೌಡ, ರಾಜಾನಂದ್ ಗೌಡ, ಮಂಜುನಾಥ್, ಮುಖಂಡ ರಾದ ಗಿರೀಶ್, ಸನಂತ್ ಗೌಡ, ಕೇಶವ, ಮೋಹನ್, ಸಚಿನ, ವೆಂಕಟೇಗೌಡ, ಪಿಡಿಒ ಮುನಿರಾಜು ಹಾಜರಿದ್ದರು.