ಅಣ್ಣೆಮ್ಮ ದೇವಿಜಾತ್ರ ಮಹೋತ್ಸವದಲ್ಲಿ ಪಾಲ್ಗೊಂಡ ರಕ್ಷಾ ರಾಮಯ್ಯ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಅನ್ನೋದು ಮುಖ್ಯ ಅಲ್ಲ ಕಾಂಗ್ರೇಸ್ ಗೆಲ್ಲಬೇಕು ಅಷ್ಟೆ
ಅಣ್ಣೆಮ್ಮ ದೇವಿಜಾತ್ರ ಮಹೋತ್ಸವದಲ್ಲಿ ಪಾಲ್ಗೊಂಡ ರಕ್ಷಾ ರಾಮಯ್ಯ
ಚಿಕ್ಕಬಳ್ಳಾಪುರ: ನಗರದಲ್ಲಿ ಆಶಾಡ ಮಾಸದ ನಗರ ದೇವತೆಗಳ ಊರ ಹಬ್ಬಕ್ಕೆ ಕಾಂಗ್ರೇಸ್ ಯುವ ಮುಖಂಡ ರಕ್ಷಾ ರಾಮಯ್ಯ ಹಾಜರಾಗಿ ಅಣ್ಣೆಮ್ಮದೇವಿ ಪೂಜೆಯಲ್ಲಿ ಪಾಲ್ಗೊಂಡು ಹಲವು ಮುಖಂಡರ ಮನೆಗೆ ಬೇಟಿಕೊಟ್ಟು ಶುಭಕೋರಿದರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್ ಮನೆಯಲ್ಲಿ ಭಾಡೂಟ ಸವಿದರು.
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೇಸ್ ನ ಇಬ್ಬರು ಮುಖಂಡರುಗಳು ಕ್ಷೇತ್ರದ ಪ್ರಯಾತನೆ ಈಗಲಿಂದಲೆ ಶುರು ವಿಟ್ಟುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಆಶಾಡ ಮಾಸದ ಜಾತ್ರಾ ಮಹೋತ್ಸವಗಳಲ್ಲಿ ಇಬ್ಬರು ಮುಖಂಡರುಗಳು ಬಾಗವಹಿಸಿ ಜನರ ವಿಶ್ಬಾಸ ಗಳಿಸುವ ಪ್ರಯತ್ನ ಮಾಡುತಿದ್ದಾರೆ. ಮಾಜಿ ಸಿಎಂ ವೀರಪ್ಪ ಮೊಯಿಲಿ ತಾಲ್ಲೂಕಿನ ಕಣಜೇನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್ ಮನೆಯಲ್ಲಿ ಆತಿಥ್ಯ ಸ್ವೀಕರಿಸದರು. ಇಂದು ರಕ್ಷಾ ರಾಮಯ್ಯ ಸಹ ಜಯರಾಮ್ ಮನೆಗೆ ಬೇಟಿ ನೀಡಿ ಜಾತ್ರಾ ಮಹೋತ್ಸವದ ಅಂಗವಗಿ ಬಾಡೂಟ ಸವಿದರು ಅದಕ್ಕೂ ಮೊದಲು ನಗರದ ಗ್ರಾಮಾಂತರ ಪೊಲಿಸ್ ಠಾಣಾ ಮುಂಬಾಗದ ಅಣ್ಣೆಮ್ಮ ದೇವಿ ವಿಷೇಶ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಿರ್ವಾದ ಪಡೆದರು ನಂತರ ಕಾಂಗ್ರೆಸ್ ಮುಖಂಡ ಮಂಜುನಾಥ್ ಮನೆಗೆ ಬೇಟಿ ನೀಡಿ ಊರಬ್ಬದ ಫಲತಾಂಬೂಲ ಸ್ವೀಕರಿಸಿದರು.
ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಡೆಪರ್ಮೇಶನ್ ಕೇಸ್ ಗಾಗಿ ಸಂಸದ ಸ್ಥಾನ ಕಳೆದುಕೊಂಡ ಏಕೈಕ ವ್ಯಕ್ತಿ ರಾಹುಲ್ ಗಾಂದಿ ಇದು ವಿಶ್ವದಲ್ಲಿಯೇ ನಡೆದ ವಿಚಿತ್ರ ಘಟನೆ, ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ಅಸಂಸದೀಯ ಪದ್ದತಿಗೆ ಇದು ಉದಾಹರಣೆ ಅವರಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಇಂದು ಪ್ರೀಡಂ ಪಾರ್ಕಲ್ಲಿ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಚಿಕ್ಕಬಳ್ಳಾಪುರ ಊರ ಹಬ್ನ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲುವಿಗೆ ಯುವಕರ ಸಂಘಟನೆ ಮಾಡಲಾಗುತ್ತಿದೆ ಕ್ಷೇತ್ರದ ಅಭ್ಯರ್ಥಿ ಯಾರು ಅನ್ನೋದಕ್ಕಿಂತ ಕಾಂಗ್ರೇಸ್ ಪಕ್ಷದ ಗೆಲುವು ಮುಖ್ಯ ಎಂದು ಯಾರ ಹೆಸರೂ ಹೇಳದೆ ಮಾಹಿತಿ ನೀಡಿದರು.ಅವರ ಜತೆಯಲ್ಲಿ ಮುಖಂಡರು ಭರಣಿವೆಂಕಟೇಶ್,
ಮೊಹನ್ ರೆಡ್ಡಿ, ರಾಜಶೇಖರ್,
ಯುವ ಮುಖಂಡ ಕುಬೇರ ಅಚ್ಚು,ಜಗದೀಶ್, ಶಂಕರ,ಶಾಹಿದ್, ಶಶಿ ಮತ್ತು ಇತರರು ಇದ್ದರು.