ಆಯುಷ್ಮಾನ ಭವ ಆರೋಗ್ಯ ಮೇಳದ ಲಾಭ ಪಡೆದ 11237 ರೋಗಿಗಳು

ಬೀದರ. ಜಿಲ್ಲೆಯಲ್ಲಿ ಆಯುಷ್ಮಾನ್ ಭವ: ಆರೋಗ್ಯ ಕಾರ್ಯಕ್ರಮವನ್ನು 17 ಸೆಪ್ಟೆಂಬರ್ 2023 ರಿಂದ 02 ಅಕ್ಟೋಬರ್ 2023 ರವರೆಗೆ ಆಯೋಜಿಸಲಾಗಿದೆ. ಆಯುಷ್ಮಾನ್ ಭವ: ಆರೋಗ್ಯ ಕಾರ್ಯಕ್ರಮವು 3 ಹಂತದಲ್ಲಿ ಆಯೋಜಿಸಲಾಗಿದ್ದು. ಮೊದಲನೆ ಹಂತದಲ್ಲಿ ಆಯುಷ್ಮಾನ್ ಆಪ್ ಕೇ ದ್ವಾರ್: ಇದರಲ್ಲಿ ಆರೋಗ್ಯ ಸಿಬ್ಬಂದಿಗಳು ಮನೆ ಮೆನಗೆ ತೆರಳಿ ಆಭಾ ಕಾರ್ಡನ್ನು, ಆಯುಷ್ಮಾನ್ ಕಾರ್ಡ, ಎಬಿ,ಪಿಎಮ್‌ಜೆಎವೈ,ಆರ್‌ಕೆ ಕಾರ್ಡ ಮೂಲಕ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5ಲಕ್ಷದ ವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5ಲಕ್ಷದ ವರೆಗ ಉಚಿತ ಚಿಕಿತ್ಸಾ ವೆಚ್ಚವನ್ನು ಸುಸಿಜ್ಜಿತ ಸರಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ. ಪ್ರಸುತ್ತ ಅಭಿಯಾನದಲ್ಲಿ ಕಾರ್ಡ ರಚಿಸಲು ಒತ್ತು ನೀಡಲಾಗುವುದು ಇದರ ಲಾಭವನ್ನು ಫಲಾನುಭವಿಗಳು ಪಡೆದುಕೊಳ್ಳಬಹುದು. ಎರಡನೆ ಹಂತದಲ್ಲಿ ಆಯುಷ್ಮಾನ್ ಮೇಳ: ಜಿಲ್ಲೆಯಲ್ಲಿ ಉಪಕೇಂದ್ರ,ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮೂಲಕ ನಿರ್ಧಿಷ್ಠ ಕಾಯಿಲೆಗಳನ್ನು ಗುರುತಿಸಿ ಸೇವೆ ಕೊಡುವ ವ್ಯವಸ್ಥೆ ಹಾಗೂ ಅಗತ್ಯ ಇರುವ ವರೆಗೆ ಟೆಲಿಕನ್ಸಲ್ಟೇಷನ್ ಮೂಲಕ ತಜ್ಞರಿಂದ ಸೇವೆ ಮತ್ತು ನಿಗಧಿ ಪಡಿಸಿದ ನಮೂನೆಯಲ್ಲಿ ರೆಫರಲ್ ಸೇವೆಯನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ವಿಶೇಷವಾಗಿ ಮೊದಲನೇ ವಾರ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಹಾಗೂ ಬಾಯಿ, ಸ್ಥನ, ಗರ್ಭಕೋಶದಲ್ಲಿ ಕ್ಯಾನ್ಸರ್‌ಗಳ ತಪಾಸಣೆ ರೋಗಿ ಸುರಕ್ಷಾ ದಿವಸ್ ಆಚರಣೆ ಮಾಡಲಾಗುವುದು, ಎರಡನೇ ವಾರ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ಕುಷ್ಠರೋಗ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ತಪಾಸಣೆ ಮಾಡಲಾಗುವುದು, ಮೂರನೇ ವಾರ ತಾಯಿ ಮಗುವಿನ ಅರೈಕೆ, ಪೌಷ್ಠಿಕ ಆಹಾರ, ರೋಗಿ ಸುರಕ್ಷಾ ದಿವಸ್ ಆಚರಣೆ ಮಾಡಲಾಗುವುದು, ನಾಲ್ಕನೇ ವಾರ ರಕ್ತಹೀನತೆ (ಅನಿಮೀಯ) ಹಾಗೂ ಕಣ್ಣಿನ ಸುರಕ್ಷತೆಗೆ ಸಂಬAಧಿಸಿದ ಸೇವೆಗಳನ್ನು ನೀಡಲಾಗುವುದು. ಮೂರನೆ ಹಂತದಲ್ಲಿ ಆಯುಷ್ಮಾನ್ ಸಭಾ: ಗ್ರಾಮ ಮತ್ತು ವಾರ್ಡ ಮಟ್ಟದಲ್ಲಿ ವಿವಿಧ ಆರೋಗ್ಯ ಸೇವೆಗಳ ಕುರಿತು ಜಾಗೃತಿಯೊಂದಿಗೆ ಸ್ಥಳೀಯವ ಆರೋಗ್ಯ ಸಮಸ್ಯಗಳನ್ನು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್, ಗ್ರಾಮ್ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ, ಮಹಿಳಾ ಆರೋಗ್ಯ ಸಮಿತಿ ಜನ ಆರೋಗ್ಯ ಸಮಿತಿ ಮೂಲಕ ಚರ್ಚಿಸಿ ಸ್ಥಳದಲ್ಲಿಯೇ ಪರಿಹರಿಸಲು ಕ್ರಮವಹಿಸಲಾಗುವುದು.
ಸಪ್ಟೆಂಬರ್ 17ರಿಂದ ಅಕೋಟ್ಬರ್ 02ರ ವರೆಗೆ ಆಯುಷ್ಮಾನ್ ಭವ ಅಭಿಯಾನದ ಅಡಿಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಜಾಗೃತಿ ನೀಡಲಾಗುವುದು. ಅಂಗಾoಗ ದಾನ ಬಹಳಷ್ಟು ಜನತೆಗೆ ಅಂಗಾoಗಗಳ ಅವಶ್ಯಕತೆ ಇರುವ ಹಿನ್ನಲೆಯಲ್ಲಿ ನಿರ್ದಿಷ್ಟ ಮಾನದಂಡಗಳ ಆಧಾರವಾಗಿಟ್ಟುಕೊಂಡು ಅಂಗಾAಗ ದಾನಕ್ಕೆ ಜೀವ ಸಾರ್ಥಕತೆ ಪೋರ್ಟಲ್‌ನಲ್ಲಿ ಹೆಸರು ನೋಂದಾವಣೆ ಮಾಡಲಾಗುವುದು. ಪ್ರತಿಯೋಬ್ಬರಲ್ಲೂ ರಕ್ತದಾನದ ಅವಶ್ಯಕತೆಯ ಮಹತ್ವ ಸಾರಲೂ ಗ್ರಾಮ ಪಂಚಾಯತಿಗಳ ಸಹಕಾರದೊಂದಿಗೆ ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಲಾಗುವುದು.
ಸೆ.26 ರಂದು ಎರಡನೇ ವಾರದ ಆರೋಗ್ಯ ಮೇಳವನ್ನು ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಂಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಫಲಾನುಭವಿಗಳು ಈ ಮೇಲಿನ ಎಲ್ಲಾ ಆರೋಗ್ಯ ಸೇವೆಗಳ ಸದುಪಯೋಗವನ್ನು ಪಡೆಯಬೇಕು.
ಸೆ.19 ರಂದು ಜಿಲ್ಲೆಯಾದ್ಯಂತ ನಡೆದ ಆಯುಷ್ಮಾನ ಭವ ಆರೋಗ್ಯ ಮೇಳದಲ್ಲಿ 11237 ರೋಗಿಗಳು ನೋಂದಣಿಯಾಗಿದ್ದು. ಇವರಲ್ಲಿ ಉಚಿತ ಪ್ರಯೋಗಶಾಲೆಯ ಸೇವೆಯನ್ನು 2185 ರೋಗಿಗಳು ಪಡೆದಿದ್ದು. ಉಚಿತ ಔಷಧಿಗಳನ್ನು 2799 ರೋಗಿಗಳು ಪಡೆದಿದ್ದಾರೆ. 4109 ರೋಗಿಗಳು ಉಚಿತ ಆರೋಗ್ಯ ಬಗ್ಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *