ಹುಬ್ಬಳ್ಳಿ :- ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂದೇ ಕರೆಯಲ್ಪಟ್ಟ ಹಿರಿಯ ವಿಜ್ಞಾನಿ
ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಅಗಲಿಕೆ ಅತ್ಯಂತ ನೋವಿನ ಸಂಗತಿ ಎಂದು ಶಾಸಕ ಅರವಿಂದ ಬೆಲ್ಲದ ಸಂತಾಪ ಸೂಚಿಸಿದರು.
ಹುಬ್ಬಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಅಹಾರದ ಅಭಾವ ಸಮಸ್ಯೆ ತಲೆದೋರಿತ್ತು. 60-70ರ ದಶಕದ ಅವಧಿಯಲ್ಲಿ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸಲು ಕಾರಣೀಕರ್ತರು ಡಾ.ಸ್ವಾಮಿನಾಥನ್.
ಅವರ ನೇತೃತ್ವದಲ್ಲಿ ರೂಪಿತವಾದ “ಹಸಿರು ಕ್ರಾಂತಿ ಯೋಜನೆ” ದೇಶದ ಜನರ ಹಸಿವು ನೀಗಿಸುವಲ್ಲಿ ಯಶ ಕಂಡಿತು.
ಕೃಷಿಯ ಬಗ್ಗೆ ಸದಾ ಅಧ್ಯಯನ ಶೀಲರಾಗಿ ಅಪಾರ ಜ್ಞಾನ ಮತ್ತು ಅನುಭವ ಹೊಂದಿದ್ದರು.
ದೇಶದ ಮೂಲ ಕಸುಬಾದ ಕೃಷಿ ವಲಯದ ಪರಿವರ್ತನೆ ಸಾಧಿಸುವಲ್ಲಿ ಅವರ ಕೊಡುಗೆ ಸ್ಮರಣೀಯ. ಕೃಷಿ ಕ್ಷೇತ್ರದಲ್ಲಿನ ಇಂದಿನ ಸಾಧನೆಗಳಿಗೆ ಡಾ.ಸ್ವಾಮಿನಾಥನ್ ಅವರ ತಳಹದಿ ಹಾಗೂ ಪ್ರೇರಣೆ ಆಗಿವೆ.
ಡಾ.ಸ್ವಾಮಿನಾಥನ್ ಅವರ ನಿರ್ಗಮನದಿಂದ ಕೃಷಿ ವಲಯ ಅದರಲ್ಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ಬೃಹತ್ ದೇಶಕ್ಕೆ ಭರಿಸಲಾರದ ನಷ್ಟವಾದಂತಾಗಿದೆ. ನಮ್ಮನ್ನಗಲಿದ ಮಹಾನ್ ವಿಜ್ಞಾನಿ, ದೇಶದ ಹಿತಚಿಂತಕರಾದ ಡಾ.ಸ್ವಾಮಿನಾಥನ್ ಅವರ ಸೇವೆಯನ್ನು ನೆನೆಯುತ್ತ, ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆದರು.
