ಚಿಕ್ಕಬಳ್ಳಾಪುರ: ನಗರದ ಕಂದವಾರ ಕಾಳಿಕಾಂಬ ಕಮಟೇಶ್ವರ ದೇವಾಲಯ ದಿಂದ ವಿಶ್ವಕರ್ಮ ಜಯಂತಿಯನ್ನು ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮುುಖಾಂತರ ವಿಶ್ವಕರ್ಮ 8 ನೇ ವಾರ್ಷಿಕೋತ್ಸವದ ಮುಕ್ತಾಯ ಸಮಾರಂಭವನ್ನ ಅದ್ದೂರಿಯಾಗಿ ಆಚರಿಸಿಕೊಂಡರು.17 ರಂದು ಪಾಪಾಗ್ನಿ ಮಠದಲ್ಲಿ ಜಿಲ್ಲಾಡಳಿತವೇ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯನ್ನು ಪ್ರಾರಂಬವಾದ ಜಯಂತೋತ್ಸವವನ್ನ ಇಂದು ಅದ್ದೂರಿ ಮೆರವಣಿಗೆ ಮೂಲಕ ಮುಕ್ತಾಯಗೊಳಿಸಲಾಯಿತು ಕಂದವಾರದಲ್ಲಿರುವ ಕಾಳಿಕಾಂಬ ಕಮ್ಮಟೇಶ್ವರ ದಿಂದ ಪ್ರಾರಂಬಗೊಂಡ ಅದ್ದೂರಿ ಮೆರವಣಿಗೆಯಲ್ಲಿ ಜನಪದ ಕಲಾತಂಡಗಳು,ವೀರಗಾಸೆ ಕುಣಿತ ಡೊಳ್ಳು ಕುಣಿತ ತಮಟೆ ಸದ್ದಿಗೆ ಜನಂಗಾದ ಮಹಿಳೆಯರು ಸ್ಟೆಪ್ ಹಾಕಿ ಖುಷಿಪಟ್ಟರು.

ಇಂದು ನಡೆದ ಅದ್ದೂರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಎಲ್ಲರಿಗೂ ಶುಭಾಷಯಗಳನ್ನ ತಿಳಿಸುತ್ತೇನೆ ಎಂದು ಮಾಜಿ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.ವಿಶ್ವ ಕರ್ಮ ಜನಾಂಗದ ಅಭಿವೃದ್ದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಜನಾಂಗದ ಆರ್ಥಿಕ ಸದೃಢತೆಗೆ ವಿವಿಧ ಯೋಜನೆಗಳನ್ನು ರೂಪಿಸಿ13000 ಕೋಟಿ ರೂಪಾಯಿಗಳನ್ನು ಮೊಟ್ಟ ಮೊದಲ ಬಾರಿಗೆ ಸೆಪ್ಟಂಬರ್ 18 ರಂದು ಜನಾಂಗದಕ್ಕೆ ಕೊಟ್ಟಿದ್ದಾರೆ ಹಾಗಾಗಿ ಈವತ್ತು ನಮ್ಮ ಸರ್ಕಾರ ಈ ಜನಾಂಗದ ಬಗ್ಗೆ ವಿಶೇಷ ಕಾಳಜಿಯನ್ನು ಇಟ್ಟುಕೊಂಡಿದೆ ಎಂದ ಅವರು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಈ ಜನಾಂಗವನ್ನು ಮುಖ್ಯ ವಾಹನಿಗೆ ತರಲಿಕ್ಕೆ ಪ್ರಯತ್ನ ಮಾಡಬೇಕಿದೆ ಎಂದರು. 

ಈ ವೇಳೆ ಮಾತನಾಡಿದ ವಿಶ್ವಕರ್ಮ ಅಭಿವೃದ್ದಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಈ ವಿಶ್ವಕರ್ಮ ಉತ್ಸವ ಕಳೆದ ಎಂಟು ವರ್ಷಗಳಿಂದ ಸತತವಾಗಿ ವಿಜೃಂಭಣೆಯಿಂದ ಮಾಡಿಕೊಂಡು ಬರುತ್ತಿದೆ ಈ ಬಾರಿ ವಿಶೇಷ ಏನೆಂದರೆ ಉತ್ಸವ ನಾವೇ ಮಾಡಿಸಿದ ಉತ್ಸವ ಈ ಮೂರ್ತಿ 420 ಕೆಜಿ ಕಂಚಿನಿಂದ ಮಾಡಿಸಲಾಗಿದೆ ಪಂಚಲೋಹದ ಈ ವಿಗ್ರಹವನ್ನು ಒಂದು ವರ್ಷದಿಂದ ರೆಡಿ ಮಾಡಿಸಿದ್ದು ಪಾಪಗ್ನಿ ಮಠದಲ್ಲಿ ಪ್ರಾಣ ಪ್ರತಿಷ್ಠಾಪನೆ ಮತ್ತು ದೃಷ್ಟಿ ಪೂಜೆ 9ದಿನಗಳ ಕಾಲ ಅಖಂಡ ಪೂಜೆಯನ್ನು ಮಾಡಿ ಇಂದು ನಗರದಲ್ಲಿ ಮೂರ್ತಿಯನ್ನು ಪೂಜಿಸಿ ನಗರದಲ್ಲಿ ಮೆರವಣಿಗೆ ಮಾಡಿಸಿದ್ದೇವೆ ಎಂದರು.ಇನ್ನು ಇಂದಿನ ಅದ್ದೂರಿ ಮೆರವಣಿಗೆಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಆನಂದಬಾಬುರೆಡ್ಡಿ ,ನಗರಸಭಾ ಸದಸ್ಯರು ಯತೀಶ್, ಸುಬ್ರಮಣ್ಯಾಚಾರಿ,ಮಂಜುನಾಥಚಾರಿ, ಸಮಾಜದ ಪ್ರಮುಖ ಹಿರಿಯ ಮುಖಂಡರು ಮಹಿಳೆಯರು ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *