ದಿನಾಂಕ 30 – 9 – 2023ರ ಶನಿವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯು ಗಾಂಧಿ ಜಯಂತಿಯ ಪ್ರಯುಕ್ತ 3 ದಿವಸಗಳ ಸ್ವಚ್ಛತಾ ಕಾರ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರ ಚಟುವಟಿಕೆಯನ್ನು ಹಮ್ಮಿಕೊಂಡಿದ್ದು ಮುಖ್ತ ಅತಿಥಿಗಳಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಎಸ್ ದೊಡ್ಡಣ್ಣನವರ ಅವರು ಆಗಮಿಸಿ NSS ಸ್ವಯಂ ಸೇವಕರಿಗೆ ಸ್ವಚ್ಚತಾ ಪ್ರತಿಜ್ಞಾ ವಿಧಿ ಬೋಧಿಸಿದರು ನಿರ್ದೇಶಕರಾದ ಶ್ರೀಬಸವರಾಜ ಬಿರಾದಾರ ಅವರು ಕಾಲೇಜಿನ ಪರಿಸರದ ಸ್ವಚ್ಚತೆಯ ಮಹತ್ವ ತಿಳಿಸಿಕೊಟ್ಟರು ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರವರು ಕಾಲೇಜಿನ ಸ್ವಚ್ಚತೆಯ ಚಟುವಟಿಕೆಗೆ ತಾವೇ ಕಸವನ್ನು ಸಂಗ್ರಹಿಸುವುದರ ಮೂಲಕ ಸ್ವಯಂ ಸೇವಕರಿಗೆ ಚಾಲನೆ ನೀಡಿದರು. NSS ಸಂಯೋಜನಾಧಿಕಾರಿಗಳು ಹಾಗು ಸದಸ್ಯರು ಚಟುವಟಿಕೆಯಲ್ಲಿ ಭಾಗಿಯಾದರು. ಪದವಿ ಪೂರ್ವ ಕಾಲೇಜಿನ ಪ್ರಾಂಶಪಾಲರು – ಕ್ರೀಡಾ ಅಧ್ಯಾಪಕರು ಇತರರು ಸ್ವಚ್ಛತಾ ಅಭಿಯಾನದ ಮೊದಲ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



