ಬಯಲು ಸಿಂಹ ಸುದ್ದಿ ಶಿಡ್ಲಘಟ್ಟ
ವರದಿ -ಸದಾನಂದ
ಶಿಡ್ಲಘಟ್ಟ,
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಎಲ್ಲಾ ಹಳ್ಳಿಗಳ ರೈತರಿಗೆ ಅನುಕೂಲವಾಗುವಂತೆ ಗಂಗಾಭವಾನಿ ತೋಟಗಾರಿಕೆ ಉತ್ಪಾದಕರ ಸಹಕಾರ ಸಂಘವು ಒಂದು ವರ್ಷದ ಹಿಂದೆ ಆರಂಭವಾಗಿದ್ದು, ಇದರ ವಾರ್ಷಿಕೋತ್ಸವ ಸಮಾರಂಭವನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮಕ್ಷಮದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ಈ ಸಂಸ್ಥೆ ಪ್ರಾರಂಭಿಸುವ ಮೊದಲು ಬಶೆಟ್ಟಹಳ್ಳಿ ಹೋಬಳಿಯ ನಾಲ್ಕು ಪಂಚಾಯಿತಿಯ ರೈತ ಮುಖಂಡರು ಸೇರಿ ಯಾವ ರೀತಿ ಸಂಸ್ಥೆಯನ್ನು ನಡೆಸಬೇಕೆಂಬುದಾಗಿ ಸಾಕಷ್ಟು ಸಲ ಪೂರ್ವ ಸಭೆಗಳನ್ನು ನಡೆಸಿ ಅಂತಿಮ ತೀರ್ಮಾನ ಮಾಡಿಕೊಂಡು ಆಸಕ್ತಿ ಇರುವ ರೈತರ ಹತ್ತಿರ ಷೇರು ಕಟ್ಟಿಸಿಕೊಳ್ಳುವ ಮುಖಾಂತರ ಆರಂಭ ಮಾಡಿ ಸಂಸ್ಥೆಯನ್ನು ನೋಂದಣಿ ಮಾಡಿಸಲಾಯಿತು.
ಈ ಸಂಸ್ಥೆಯಿಂದ ರೈತರಿಗೆ ಬೇಕಾಗಿರುವ ಫರ್ಟಿಲೈಜರ್, ಬಿತ್ತನೆ ಬೀಜಗಳು, ಕಾಳ ಸಂತೆಯಲ್ಲಿ ಹೆಚ್ಚುವರಿ ಲಾಭಗಳಿಗೆ ಮಾರಾಟ ಮಾಡಲಾಗುತ್ತಿದ್ದು ಇದರ ಹಾವಳಿಯನ್ನು ತಪ್ಪಿಸಲು ರೈತರಿಗೆ ಅನುಕೂಲವಾಗುವಂತೆ ನಮ್ಮ ಗಂಗಾಭವಾನಿ ತೋಟಗಾರಿಕೆ ಉತ್ಪಾದಕರ ಸಹಕಾರ ಸಂಘದಿಂದ ಖಾಸಗಿ ಕಂಪನಿಗಳಿಗಿಂತ ಕಡಿಮೆ ವೆಚ್ಚದಲ್ಲಿ ರೈತರಿಗೆ ನೀಡಲಾಗುವುದು,
ಬೆಳೆಯುವ ಬೆಳೆಗಳಿಗೆ ಬೇಕಾಗುವಂತಹ ಸಾವಯವ ರಸಗೊಬ್ಬರಗಳನ್ನು ಇಳುವರಿ ಬರಲು ಸಾಧ್ಯವಾದಷ್ಟು ಮಾಹಿತಿಯನ್ನ ರೈತರಿಗೆ ಕೊಡುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕರಾದ ಟಿ. ಕೆ. ಅರುಣ್ ಕುಮಾರ್ ರವರು ಸಣ್ಣ ಹಾಗೂ ಅತಿ ಸಣ್ಣ ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಪಡೆಯಲು ರೈತ ಉತ್ಪಾದಕ ಸಂಘಗಳು ಸಹಾಯವಾಗುತ್ತವೆ.
ತಿಮ್ಮನಾಯಕನಹಳ್ಳಿ ಹಾಗೂ ಗಂಜಿಗುಂಟೆ ಗ್ರಾಮಪಂಚಾಯಿತಿಗಳ ರೈತರಿಗೆ ಯಾವುದೇ ರೀತಿಯ ಸೌಲಭ್ಯಗಳು ದೊರೆತಿಲ್ಲ. ನಾವು ಸಂಘದಲ್ಲಿದ್ದು ಏನು ಪ್ರಯೋಜನೆ ಎಂದು ಕೆಲ ರೈತರು ಕೇಳಿರುವುದಕ್ಕೆ ನಾನು ಅವರಿಗೆ ತಿಳಿಸುವುದೇನೆಂದರೆ ಮುಂದಿನ ದಿನಗಳಲ್ಲಿ ತಿಮ್ಮನಾಯಕನಹಳ್ಳಿ ಹಾಗೂ ಗಂಜಿಗುಂಟೆ ಗ್ರಾಮಗಳ ಮಧ್ಯ ಒಂದು ರೈತ ಸಂಪರ್ಕ ಕೇಂದ್ರ ಹಾಗೂ ರೈತ ಉತ್ಪಾದಕ ಕಂಪನಿ ಘಟಕವನ್ನು ಮಾಡಲಿದ್ದೇವೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎನ್ ಮಧು ರೈತ ಉತ್ಪಾದಕ ಕಂಪನಿಯ ವಾರ್ಷಿಕ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಟಿಎಸ್ ಆಂಜನೇಯರೆಡ್ಡಿ ನಿರ್ದೇಶಕರಗಳಾದ ಆರ್. ಕೋನಪ್ಪರೆಡ್ಡಿ, ವಿ.ಸಿ ವೆಂಕಟೇಶ್, ಜಿ ಎನ್ ರವಿಕುಮಾರ್, ಮಂಜುನಾಥ್ ಬಿ.ಎನ್, ಬಿ ಎಂ ವೆಂಕಟೇಶ್, ಎನ್ ನಾರಾಯಣಸ್ವಾಮಿ, ಎಲ್.ವಿ ವೆಂಕಟರೆಡ್ಡಿ ಎಲ್.ಎನ್ ಶಿವಾರೆಡ್ಡಿ,ವೈದಿಕ ಸಂಸ್ಥೆಯ ಸುನಿತಾ,ಶಿವಕುಮಾರ್ ಬಿ, ದ್ಯಾವಪ್ಪ,ಅಂಬರೀಷ್,ರಾಮರೆಡ್ಡಿ,ಗೌಡನಹಳ್ಳಿ ವೆಂಕಟರೆಡ್ಡಿ ,ಜೀವಿಕ ಮುನಿಯಪ್ಪ, ಮತ್ತಿತರರು ಹಾಜರಿದ್ದರು.



