ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿ ದ್ವಾರಗಾನಹಳ್ಳಿ ಮತ್ತು ಕೋಡಿಗಾನಹಳ್ಳಿ ಗ್ರಾಮದಲ್ಲಿ ಡಾ. ಹೆಚ್ ನರಸಿಂಹಯ್ಯ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಣ್ಯರಿಂದ ದ್ವೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಪ್ರೊ.ಎಸ್ ಕೃಷ್ಣಪ್ಪ ಅಧ್ಯಕ್ಷರು ಡಾ. ಎಚ್ ನರಸಿಂಹಯ್ಯ ಚಾರಿಟಬಲ್ ಟ್ರಸ್ಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಲಕ್ಷ್ಮಿಪತಿ ಆರ್ ಎನ್ ಯೋಜನಾಧಿಕಾರಿಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರು ಇಂದಿನ ವಿದ್ಯಾರ್ಥಿಗಳು ಮೂಢನಂಬಿಕೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬಾರದು. ಡಾ. ಎಚ್ ನರಸಿಂಹಯ್ಯನವರು ಪುಟ್ಟಪರ್ತಿ ಸಾಯಿಬಾಬಾರವರನ್ನು ಕುಂಬಳಕಾಯಿ ಕೇಳಿದ ಪ್ರಸಂಗವನ್ನು ವ್ಯಕ್ತಪಡಿಸಿದ್ದರು. ಟ್ರಸ್ಟ್ ಪದಾಧಿಕಾರಿಗಳು ಇಂದು ದ್ವಾರಗಾನಹಳ್ಳಿ ಗ್ರಾಮದಲ್ಲಿ ಮಾಡುತ್ತಿರುವ ಈ ಸೇವೆ ಅತ್ಯದ್ಭುತವಾದಂತಹ ಸೇವೆ ಇಡೀ ಜೀವನ ಪೂರ್ತಿ ಶಿಕ್ಷಣ ಶಿಕ್ಷಣ ಎಂದು ಶಿಕ್ಷಣಕ್ಕೆ ಒತ್ತು ಕೊಟ್ಟಂತಹ ಮಹಾನ್ ಚೇತನ ಅಂತಹವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿಕೊಂಡು ಸರ್ಕಾರಿ ಶಾಲೆಗೆ ಬೋಧನಾಪಕರಣಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಗು ನೋಟ್ ಪುಸ್ತಕ ಬೋರ್ಡ್ ಗಳು ಇತ್ಯಾದಿಗಳು ನೀಡುತ್ತಿರುವುದು ಹಾಗೂ ವಿಶೇಷವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳು ಪಡೆದ ವಿದ್ಯಾರ್ಥಿಗಳಿಗೆ ನಗುದು ಬಹುಮಾನ ಜೊತೆಗೆ ಒಂದು ಬ್ಯಾಗ್ ನೀಡುವ ಮುಖಾಂತರ ವಿದ್ಯಾರ್ಥಿಗಳಲ್ಲಿ ಮುಂದಿನ ಉತ್ತಮ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಟ್ರಸ್ಟ್ ಅತ್ಯಮೂಲ್ಯವಾದ ಕಾರ್ಯವಾಗಿದೆ ಎಂದು ತಿಳಿಸಿದರು. ನಂತರ ನ್ಯಾಷನಲ್ ಸ್ಕೂಲ್ಸ್ ಎಜುಕೇಶನಲ್ ಸೊಸೆಟಿಯಾ ನಿರ್ದೇಶಕರಾದ ಎಚ್ ವಿ ವೆಂಕಟೇಶ್ ಮಾತನಾಡುತ ಎಚ್ ನರಸಿಂಹಯ್ಯನವರು ಇಂದು ನಮ್ಮೊಂದಿಗೆ ಇಲ್ಲ ಆದರೆ ಅವರ ಸಿದ್ಧಾಂತಗಳು ಅವರ ವಿಚಾರಧಾರೆಗಳು ನಮ್ಮೆಲ್ಲರಲ್ಲೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಹೇರಿದರೂ ಸಹ ಅವರ ಬದುಕಿನ ಇಡೀ ಜೀವನವನ್ನು ನ್ಯಾಷನಲ್ ಕಾಲೇಜ್ ವಿದ್ಯಾರ್ಥಿ ನಿಲಯದಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಜೀವನ ಸಾಗಿಸಿದಂತಹ ಮಹಾನ್ ಮಾನವತ ವಾದಿ ಡಾ. ಎಚ್ ನರಸಿಂಹಯ್ಯ ಎಂದು ತಿಳಿಸಿದರು ಎಚ್ ನರಸಿಂಹಯ್ಯ ಚಾರಿಟೇಬಲ್ ಟ್ರಸ್ಟ್ ನ ಆಶಯ ನುಡಿಗಳನ್ನು ನೋಡಿದ ಎಂ ಸತೀಶ್ ಕುಮಾರ್ ಎಚ್ ನರಸಿಂಹಯ್ಯ ಚಾರಿಟಬಲ್ ಟ್ರಸ್ಟ್ ಕಟ್ಟಿಕೊಟ್ಟಿರುವಂತಹ ಉದ್ದೇಶ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪ್ರೋತ್ಸಾಹಕ್ಕೆ ಬೋಧನಾ ಸಾಮಗ್ರಿಗಳನ್ನು ಕೊಡುವುದು. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವುದು. ಹಾಗೂ ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಲ್ಲಿ ಅಡಗಿರುವ ಮೂಢನಂಬಿಕೆಗಳನ್ನು ತೊಲಗಿಸಿ ನರಸಿಂಹಯ್ಯನವರ ಆದರ್ಶ ದಂತೆ ಬದುಕುವಂತೆ ಮಾಡುವುದು ಇತ್ಯಾದಿಗಳ ಉದ್ದೇಶದಿಂದ ಈ ಟ್ರಸ್ಟ್ ಕಟ್ಟಿಕೊಂಡಿರುವ ಬಗ್ಗೆ ತಿಳಿಸಿದರು. ನಂತರ ಮಂಚೇನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಟಿ ಮೂರ್ತಿ ರವರು ನಾನು ಮೊಟ್ಟಮೊದಲ ಬಾರಿಗೆ ಈ ದೇಶದ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದೆ ನಂತರ ಈಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಹೆಮ್ಮೆ ಹೇನಿಸುತ್ತಿದೆ. ಎಲ್ಲ ವಿದ್ಯಾರ್ಥಿಗಳೇ ನೀವು ಚೆನ್ನಾಗಿ ಓದಿ ಮುಂದಿನ ದಿನಗಳಲ್ಲಿ ಉತ್ತಮವಾದ ಪ್ರಜೆಗಳಾಗಬೇಕು ಎಂದು ತಿಳಿಸಿದರು. ಮೀನಾಕ್ಷಿ ಕೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪುರ ಗ್ರಾಮ ಪಂಚಾಯತಿ ಕಾರ್ಯಾಲಯ ಇವರು ಮಾತನಾಡುತ್ತಾ ವಿದ್ಯಾರ್ಥಿಗಳೇ ಇವತ್ತು ಈ ಸಮಾಜದಲ್ಲಿ ಸಮಾಜಕ್ಕಾಗಿ ಹಗಲಿರುಳು ಸೇವೆಯನ್ನ ಮಾಡಿದ್ದಾರೆ ಅಂತಹ ವ್ಯಕ್ತಿಗಳನ್ನ ಸ್ಮರಿಸುವುದೇ ನಮ್ಮ ಭಾಗ್ಯ ಶಿಕ್ಷಣ ಕ್ಷೇತ್ರಕ್ಕಾಗಿ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯಗಳನ್ನು ಶಾಲೆಗಳನ್ನು ನಿರ್ಮಾಣ ಮಾಡಿ ಇವತ್ತು ನಾವೆಲ್ಲರೂ ಶಿಕ್ಷಣ ಪಡೆದುಕೊಳ್ಳುವಂತೆ ಮಾಡಿರುವ ನರಸಿಂಹಯ್ಯ ಅವರನ್ನ ಸ್ಮರಿಸುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದರು ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಟ್ರಸ್ಟ್ ಕಟ್ಟಿಕೊಂಡು ಸೇವೆ ಮಾಡಲು ಮುಂದಾಗಿರುವ ಟ್ರಸ್ಟ್ ಪದಾಧಿಕಾರಿಗಳ ಉತ್ತಮವಾದ ಕೆಲಸ ಮೆಚ್ಚುವಂತಹದ್ದು. ಪ್ರೀತಿಯ ವಿದ್ಯಾರ್ಥಿಗಳೇ ನೀವು ಕೂಡ ಚೆನ್ನಾಗಿ ಓದಿ ಉತ್ತಮ ವ್ಯಕ್ತಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು. ಎಂ ಶ್ರೀನಿವಾಸ್ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಅಲಿಪುರ ಇವರ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಅತ್ಯಂತ ಪ್ರತಿಭಾವಂತರು ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಎಂದು ತಿಳಿಸಿದರು. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಇವತ್ತು ಉನ್ನತ ಮಟ್ಟಕ್ಕೆ ಹೋಗಿರುವ ಅನೇಕರನ್ನ ನಾವು ಸ್ಮರಿಸುವಂತಹದ್ದು. ವಿದ್ಯಾರ್ಥಿಗಳಲ್ಲಿ ಓದುವ ಛಲ ಇರಬೇಕು ಎಂದು ತಿಳಿಸಿದರು. ನರಸಿಂಹಮೂರ್ತಿ ಶಿಕ್ಷಕರು ದ್ವಾರಗಾನಹಳ್ಳಿ ಇವರ ಮಾತನಾಡುತ್ತಾ ಯಾವುದೇ ಒಂದು ಟ್ರಸ್ಟ್ ನಿರ್ಮಾಣವಾಗಬೇಕಾದರೆ ಅದರ ಹಿಂದಿರುವ ಕಷ್ಟ ಅಪಾರವಾದದ್ದು ಎಂದು ತಿಳಿಸಿದರು. ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡಿಕೊಂಡಿದ್ದ ನಮ್ಮೂರಿನ ಯುವಕರು ಟ್ರಸ್ಟ್ ಮುಖಾಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ನಮಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯೋಗೇಶ್ ಎಚ್‌.ವಿ ಸಮಾಜ ಸೇವಕರು ಹೊಸೂರ, ಕೆ ಆರ್ ಮಧುಸೂದನ್ ರೆಡ್ಡಿ ಕೊಂಡೆನಹಳ್ಳಿ ಕಾಂಗ್ರೆಸ್ ಮುಖಂಡರು, ಸುಬ್ರಹ್ಮಣ್ಯ ನಾಗೇನಹಳ್ಳಿ ತಾಲೂಕು ಪಂಚಾಯಿತಿ ಸದಸ್ಯರು, ಡಾ.ಗಿರೀಶ್ ಬಾಬು ಸಿ ಎನ್, ಬಿ ಎಂ ಎಸ್ ಐ ಟಿ ಕಾಲೇಜು ಬೆಂಗಳೂರು, ಎನ್ ನಾಗರತ್ನಮ್ಮ ಅಧ್ಯಕ್ಷರು ಪುರ ಗ್ರಾಮ ಪಂಚಾಯಿತಿ, ಗಂಗರತ್ನಮ್ಮ ಕೋಡಿಗಾನಹಳ್ಳಿ ಮಾಜಿ ಉಪಾಧ್ಯಕ್ಷರು ಪುರ ಗ್ರಾಮ ಪಂಚಾಯಿತಿ, ನರಸಿಂಹಮೂರ್ತಿ ಎಸ್‌ಡಿಎಂಸಿ ಅಧ್ಯಕ್ಷರು, ಅಕ್ಕಯಮ್ಮ ಮುಖ್ಯೋಪಾಧ್ಯಾಯರು. ದ್ವಾರಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟ್ರಸ್ಟ್ ಪದಾಧಿಕಾರಿಗಳಾದ ತಿಪ್ಪಯ್ಯ ಪ್ರಧಾನ ಕಾರ್ಯದರ್ಶಿಗಳು, ನರಸಿಂಹಮೂರ್ತಿ ( ಟೈಗರ್ ಪ್ರಭಾಕರ್ ) ಸಂಘಟನಾ ಕಾರ್ಯದರ್ಶಿಗಳು, ಪ್ರೊ. ಗೋವಿಂದರಾಜು ಖಜಾಂಚಿ , ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ದ್ವಾರಗಾನಹಳ್ಳಿ ಮತ್ತು ಕೋಡಿಗಾನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *