ಪಬ್ಲಿಕ್ ಪವರ್ ಪತ್ರಿಕೆ ವತಿಯಿಂದ ನನ್ನ ಮಣ್ಣು- ನನ್ನ ದೇಶ ರಾಷ್ಟ್ರೀಯ ಏಕತಾ ದಿವಸದ ಐಕ್ಯತಾ ಸಂಕಲ್ಪ ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ NSS ಘಟಕ
ದಿನಾಂಕ 27-10-2023ರ ಶುಕ್ರವಾರ 3,30 ಗಂಟೆಗೆ NSS ಘಟಕವು ಸರ್ದಾರ ವಲ್ಲಬಾಯ ಪಟೇತರ ನೆನಪಿನಾರ್ಥ ರಾಷ್ಟ್ರೀಯ ಏಕತಾ ದಿವಸ್ ದಿನಾಚರಣೆಯನ್ನು ನನ್ನ ಮಣ್ಣು ನನ್ನ ದೇಶ ಚಟುವಟಿಕೆಯನ್ನು ಹಮ್ಮಿಕೊಳ್ಳುವುದರ ಮೂಲಕ ದೇಶವನ್ನು ಕಟ್ಟುವ ಕಾಯಕ ನಮ್ಮ ನೆಲಮೂಲ ಸಂಸ್ಕೃತಿ ಮಣ್ಣಿನಿಂದ ಲೇ ಸಾಧ್ಯವೆಂಬ ತತ್ವದೊಂದಿಗೆ ಆಚರಿಸಲಾಯ್ತು. ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠ ಅವರು ಸ್ವಯಂ ಸೇವಕರನ್ನು ಉದ್ದೇಶಿಸಿ ರಾಷ್ಟ್ರದ ಐಕ್ಯತೆ ಇರುವುದು ನಮ್ಮ ಒಗ್ಗಟ್ಟಿನಲ್ಲಿ – ಒಗಟ್ಟು ರಾಷ್ರೀಯ ಏಕತಾ ದಿವಸದ ಮೂಲ ಸಿದ್ಧಾಂತ ಎ೦ದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾ, ಸೇ ಯೋಜನೆಯ ಅಧಿಕಾರಿಯಾದ ಶ್ರೀಗಿರೀಶ ವೈ ಅವರು ಸರ್ದಾರ ವಲ್ಲ ಬಾಯ ಪಟೇಲ್ ರ ನೆನಪು ಏಕೆ ಮುಖ್ಯ ಎ೦ದು ತಿಳಿಸಿದರು ಚಟುವಟಿಕೆಯ ಈ ಕಾರ್ಯಕ್ರಮದಲ್ಲಿ ಪ್ರೊ ವಿಜಯಕುಮಾರ ಪಾಟೀಲ್ ಪ್ರೊರೂಪಶ್ರೀ ಪ್ರೊ ಜಯಶ್ರೀ ಕೋರಿ ಶ್ರೀಗಿರೀಶ ಪಿ.ಎಚ್. ವಿದ್ಯಾರ್ಥಿ ಸಂಯೋಜಕರಾದ ಕುಮಾರ ಗಗನ್ ಹಾಗೂ ಕುಮಾರಿ ಅಪರ್ಣಾ ಮತ್ತು ಕುಶೃುತಿ ಉಪಸ್ಥಿತರಿದ್ದರು. ಸ್ವಯಂ ಸೇವಕರಿಗೆ ಏಕತೆಯಲ್ಲಿ ದೊರಕಬಹುದಾದ ಪ್ರಯೋಜನಗಳ ಫಲಿತ ಈ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಿಂದ ದೊರಕಿತು

Oct 29, 2023

Leave a Reply

Your email address will not be published. Required fields are marked *