ಚೇರು, ಬೀರುಗಳು, ಹುಲ್ಲು ಕತ್ತರಿಸುವ ಯಂತ್ರಗಳು, ಚೆಕ್ ವಿತರಿಸಿದ ಹುಲ್ಲೂರು ಸಿ.ಮಂಜುನಾಥ ಹೊಸಕೋಟೆ : ತಾಲ್ಲೂಕಿನ ಹೊಸಕೋಟೆ ಶಿಬಿರ ಕಚೇರಿಯಲ್ಲಿ ಶನಿವಾರ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ 2022- 23ನೇ ಸಾಲಿನ ಹುಲ್ಲೂರು ಸಿ. ಮಂಜುನಾಥ್ ರವರ ಅನುದಾನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಚೇರು ಮತ್ತು ಬೀರುಗಳು, ವೈದ್ಯಕೀಯ ವೆಚ್ಚಗಳ ಚೆಕ್ ವಿತರಣೆ, ವಿದ್ಯುತ್ ಚಾಲಿತ ಹುಲ್ಲು ಕತ್ತರಿಸುವ ಯಂತ್ರಗಳನ್ನು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಹುಲ್ಲೂರು ಸಿ. ಮಂಜುನಾಥ್ ರವರು ವಿತರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟ ವ್ಯವಸ್ಥಾಪಕರಾದ ಡಾ. ಶಿವಶಂಕರ್, ಡಾ ಶಿವರಾಂ, ಉಪ ವ್ಯವಸ್ಥಾಪಕರು ಹೊಸಕೋಟೆ ಶಿಬಿರ ಬೆಂಗಳೂರು ಹಾಲು ಒಕ್ಕೂಟ ಡಾ. ಸಂತೋಷ್, ಶಿಬಿರ ಸಹಾಯಕ ವ್ಯವಸ್ಥಾಪಕರು ಮತ್ತು ವಿಸ್ತರಣಾಧಿಕಾರಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಜರಿದ್ದರು.
