ಬೆಂಗಳೂರು ನಗರದಲ್ಲಿ ದೇವನಹಳ್ಳಿ ಉಪನಗರದಂತೆ ಕಾಣಲು ಸಹಕರಿಸಿ : ಸಚಿವ ಕೆ.ಎಚ್.ಮುನಿಯಪ್ಪ

ದೇವನಹಳ್ಳಿ: ಶಾಶ್ವತವಾದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ,ಸುಸಜ್ಜಿತ ರಸ್ತೆಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಗುರಿ ಯಾಗಿದೆ,ನಿರ್ಮಾಣವಾದಂತಹ ಕಾಮಗಾರಿಗಳ ನಿರ್ವಹಣೆ ಬಹುಮುಖ್ಯ ಆದ್ದರಿಂದ ಮುಂಬರುವ ದಿನಗಳಲ್ಲಿ ಪಟ್ಟಣದ ಪ್ರತಿವಾಡ್೯ಗೂ ವೀಕ್ಷಣೆ ಮಾಡಿ ಒತ್ತುವರಿಗಳನ್ನು ತೆರುವು ಗೊಳಿಸಲಾಗುವುದು ಎಂದು ಆಹಾರ‌ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು ಕೆ.ಎಚ್.ಮುನಿಯಪ್ಪ ಹೇಳಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ದೇವನಹಳ್ಳಿ ಪುರಸಭೆ ವ್ಯಾಪ್ತಿಯ ಪ್ರತಿ ವಾರ್ಡ್ ಗಳಲ್ಲಿ ನಡೆಯಬೇಕಿರುವ ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಕುಂದುಕೊರತೆ ನಡೆಸಿ ಮಾತನಾಡಿ, ಕಾಂಗ್ರೇಸ್ ಪಕ್ಷದ ಆಡಳಿತ ಪಕ್ಷಾತೀತ ವಾದುದು ಅದ್ದರಿಂದಲೇ ಸಮಾಜದ ಪ್ರತಿಯೊಂದು ವರ್ಗಕ್ಕೊ ತಲುಪುವಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ ಹಾಗೂ ದೇವನಹಳ್ಳಿಯ ಅಭಿವೃದ್ಧಿ ಬೆಂಗಳೂರು ಉಪನಗರವೆಂಬಂತೆ ಎಲ್ಲಾ ಪುರಸಭಾ ಸದಸ್ಯರು ಮತ್ತು ಅಧಿಕಾರಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು, ರಾಷ್ಟ್ರೀಯ ಹೆದ್ದಾರಿಯಂತೆ ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಪಕ್ಷಾತೀತ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ ಮಾತನಾಡಿ ಜನಸಂದಣಿ ಹೊಂದಿರುವ ಪಟ್ಟಣದ ನಾಗರಿಕರ ಅಗತ್ಯ ಸೌಕರ್ಯಗಳನ್ನು ಪೊರೈಸಬೇಕು,ಸ್ವಚ್ಛತೆಗೆ ಸಂಬಂಧಿಸಿದಂತೆ ವಾಡ್೯ ಕಸ ವಿಲೇವಾರಿಯ ಪ್ರಕ್ರಿಯೆ ಯನ್ನು ಖುದ್ದಾಗಿ ನಾನೇ ಭೇಟಿ ನೀಡಿ ಪ್ರತಿದಿನ ಬೆಳ್ಳಿಗ್ಗೆ ವೀಕ್ಷಣೆ ಮಾಡುತ್ತೇನೆ ಎಂದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಧ, ಯೋಜನಾ ನಿರ್ದೇಶಕರು ಆರ್.ಶಾಲಿನಿ,ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲ್ಲಯ್ಯ ಸೇರಿದಂತೆ ಪುರಸಭಾ ಸದಸ್ಯರು ಇಲಾಖಾಧಿಕಾರಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *