


ಯಲಹಂಕ : ಯಲಹಂಕ ಭಾಗದ ಪತ್ರಿಕಾ ವಿತರಕರಿಗಾಗಿ ನಿರ್ಮಿಸಲು ಯೋಜಿಸಿರುವ ನೂತನ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಶುಕ್ರವಾರ. ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು ‘ಯಲಹಂಕ ಭಾಗದ ಪತ್ರಿಕಾ ವಿತರಕರು ಕಳೆದ ಹಲವು ವರ್ಷಗಳಿಂದ ಸುಸಂಘಟಿತರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿತರಕರು ತಮ್ನ ಕುಂದುಕೊರತೆಗಳು ಅಥವಾ ವಿತರಕರಿಗೆ ಸಂಬಂಧಿಸಿದ ಇನ್ನಿತರ ವಿಚಾರಗಳ ಕುರಿತು ಚರ್ಚಿಸಲು ಒಂದು ಭವನದ ಅಗತ್ಯತೆ ಕುರಿತು ಮನವಿ ಮಾಡಿಕೊಂಡಿದ್ದರು, ವಿತರಕರ ಮನವಿಗೆ ಓಗೊಟ್ಟು, ಅಗತ್ಯ ಅನುದಾನ ನೀಡಿ, ಯಲಹಂಕ ಮಿನಿ ವಿಧಾನಸೌಧದ ಆವರಣದಲ್ಲಿ ಇಂದು ವಿತರಕರ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷರು, ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಅಧ್ಯಕ್ಷರಾದ ಎಂ.ಸತೀಶ್ ಮಾತನಾಡಿ ‘ಯಲಹಂಕ ಪತ್ರಿಕಾ ವಿತರಕರ ಪಾಲಿಗೆ ಶಾಸಕ ಎಸ್ ಆರ್ ವಿಶ್ವನಾಥ್ ರವರು ಆರಾಧ್ಯ ದೈವ ಎಂದೇ ಭಾವಿಸಬಹುದು. ವಿತರಕರಿಗೆ ಯಲಹಂಕ ಕ್ಷೇತ್ರದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ, ಸರ್ಕಾರದಿಂದ ವಿತರಕರಿಗೆ ಸಿಗುವ ಯಾವುದೇ ಸೌಲಭ್ಯಗಳನ್ನು ಅವರಿಗೆ ತಲುಪಿಸುವಲ್ಲಿ ಮಂಚೂಣಿಯಲ್ಲಿ ನಿಂತು ಸಹಕರಿಸಿದ್ದಾರೆ, ಕೋವಿಡ್ ವೇಳೆಯಲ್ಲಿ ವಿತರಕರಿಗೆ ಸಾಕಷ್ಟು ನೆರವು ನೀಡುವ ಮೂಲಕ ಸ್ಪಂದಿಸಿದ್ದಾರೆ ಇಂತಹ ಶಾಸಕರನ್ನು ಪಡೆದಿರುವ ನಾವೇ ಧನ್ಯರು ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ನಗರ ಸಭಾ ಅಧ್ಯಕ್ಷರು, ಬಿಬಿಎಂಪಿ ಸದಸ್ಯರಾದ ಕೆಂಪೇಗೌಡ, ಕರ್ನಾಟಕ ರಾಜ್ಯ ತಿಗಳರ ಸಂಘದ ಅಧ್ಯಕ್ಷ ಮು. ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ವೈ ಜಿ ಮೂರ್ತಿ ರವರು, ಮುರಳಿ, ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಪದಾಧಿಕಾರಿಗಳಾದ, ಶಂಕರ್, ಮಂಜುನಾಥ್, ವೀರಭದ್ರ ವೈ.ಸಿ., ಸುರೇಶ್, ರವಿ, ಸುರೇಶ್, ಮುದ್ದುಕುಮಾರ್, ಮಂಜುನಾಥ್ (ಏರ್ ಫೋರ್ಸ್), ವೆಂಕಟೇಶ್ ಮೂರ್ತಿ, ರಾಜಶೇಖರ್, ಕುಮಾರ್, ರಮೇಶ್, ವೀರೇಶ್, ಶಶಿ, ನಾಗರ್ಜುನ ಸೇರಿದಂತೆ ಹೆಚ್ಚಿನ ವಿತರಕರು, ಮುಖಂಡರಿದ್ದರು.