.

.

ಕೋಲಾರ, ನ.18.ಪ್ರತಿಯೊಬ್ಬರ ಶಿಕ್ಷಣ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು,ಪ್ರತಿಯೊಬ್ಬರಲ್ಲೂ ಒಂದು ಕಲೆ ಇದೆ ಅದು ಬೆಳಕಿಗೆ ಬರಬೇಕು ಅದಕ್ಕೆ
ವಿಧ್ಯಾರ್ಥಿಗಳು ಶ್ರಮವಹಿಸಿ ವಿಧ್ಯಾಬ್ಯಾಸ ಮಾಡಬೇಕೆಂದು ಜಿಲ್ಲಾ ಡೆಪ್ಯುಟಿ ಡೈರೆಕ್ಟರ್ ಪಿ.ಯು ರಾಮಚಂದ್ರಪ್ಪ ನವರು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಗರದ ಅಲ್ ಅಮೀನ್ ಶಾಲೆಗಳ ಕ್ಯಾಂಪಸ್ ನಲ್ಲಿ
ಶನಿವಾರ ಅಮೀನ್ ಎಜುಕೇಷನಲ್ ಸೊಸೈಟಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಲ್ ಅಮೀನ್ ಉರ್ದು ಸಾಹಿತ್ಯ ಉತ್ಸವದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಒಂದು ಕಾಲದಲ್ಲಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣ ಪ್ರತಿಯೊಬ್ಬರಿಗೂ ಸಿಗುವಂತೆ ಆಗಿದ್ದು
ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನ ಮೂಲಕ ಎಂದರು.

ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ.ಕಲಾಂ ರವರ ಆಸೆಯಂತೆ ದೊಡ್ಡ ಕನಸು ಕಾಣುವ ಮೂಲಕ ಉನ್ನತ ಸ್ಥಾನಕ್ಕೆ ಏರುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದರು.

ವಿಧ್ಯಾರ್ಥಿ ಜೀವನ ಗೋಲ್ಡನ್ ಲೈಫ್ ಆಗಿದ್ದು ನಿಮ್ಮ ಜವಾಬ್ದಾರಿ ಅರಿತು ಸಾಧನೆ ಮಾಡಿದಾಗ ಮಾತ್ರ
ನಿಮಗೆ ಸಮಾಜದಲ್ಲಿ ಬೆಲೆ ಸಿಗುವುದಲ್ಲದೆ
ಮುಂದಿನ ಜೀವನ ಉನ್ನತವಾಗಿ ನಡೆಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದ
ಪಿ.ಬಿ.ಎಸ್.ಕಾಲೇಜಿನ ಪ್ರಾಂಶುಪಾಲರಾದ ಮಹಮ್ಮದ್ ಮನ್ಜೂರ್ ಮೋಮನ್ ರವರು ಮಾತನಾಡಿ ಉರ್ದು ಭಾಷೆ ಸುಗಂಧ ಭರಿತವಾಗಿದ್ದು,ಅಲ್ ಅಲಮೀನ್ ಸೊಸೈಟಿಯಿಂದ ಸಾವಿರಾರು ವಿಧ್ಯಾರ್ಥಿಗಳಿಗೆ ಶಿಕ್ಷಣ ದೊರೆತು ಅವರುಗಳು ವಜ್ರಗಳಾಗಿ ರೂಪಗೊಂಡಿದ್ದಾರೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಲ್ – ಅಮೀನ್ ಎಜುಕೇಷನಲ್ ಸೊಸೈಟಿಯ ಛೇರ್ಮನ್ ಉಮರ್ ಇಸ್ಮಾಯಿಲ್ ಖಾನ್ ಮಾತನಾಡಿ ಕಳೆದ 50 ವರ್ಷಗಳ ಹಿಂದೆ ಬಹಳ ಕಷ್ಟ ಕಾಲದಲ್ಲಿ ಮುಸ್ಲಿಂ ಯುವಕ ಯುವತಿಯರಿಗೆ ಶಿಕ್ಷಣ ನೀಡ ಬೇಕೆಂಬ ಉದ್ದೇಶದಿಂದ ನಮ್ಮ ಹಿರಿಯರು ಪ್ರಾರಂಭ ಮಾಡಿದ ಅಲ್ – ಅಮೀನ್ ಎಜುಕೇಷನಲ್ ಸೊಸೈಟಿ ಹಲವಾರು ಜಿಲ್ಲೆಗಳಲ್ಲಿ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸುತ್ತಿದೆಯೆಂದು ಹೇಳಿದರು.

ಉನ್ನತ ಶಿಕ್ಷಣ ಪಡೆದು ನಿಮ್ಮ ತಂದೆ ತಾಯಿಯವರಿಗೆ,ಶಿಕ್ಷಣ ಪಡೆದ ವಿದ್ಯಾಸಂಸ್ಥೆಗೆ,
ಸಮಾಜಕ್ಕೆ ಹೆಸರು ತರುವುದಲ್ಲದೆ ಉತ್ತಮ ಜೀವನ ನಡೆಸಬೇಕೆಂದರಲ್ಲದೆ,ಕೋಲಾರದ ಅಲ್ ಅಮೀನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಕಡಿಮೆ ಫೀಸ್ ನಲ್ಲಿ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಇದೇ ಸಂಧರ್ಭದಲ್ಲಿ ಕಾಲೇಜಿನಲ್ಲಿ ಉರ್ದು ಸಾಹಿತ್ಯದ ಬಗ್ಗೆ ನಡೆದ ಹಲವಾರು ಸ್ಪರ್ಧೆಗಳಲ್ಲಿ ಭಾಗಹಿಸಿದ್ದ 15 ಕಾಲೇಜಿನ 170 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಹಾಗೂ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಸೊಸೈಟಿಯ ಕಾರ್ಯದರ್ಶಿ ಜುಬೈರ್ ಅನ್ವರ್ ಸೇಟ್,ಜಂಟಿ ಕಾರ್ಯದರ್ಶಿ ಇಬ್ರಾಹಿಂ
ಅಬ್ಜಲ್, ಅಲ್ ಅಮೀನ್ ಸೊಸೈಟಿ ಸದಸ್ಯರುಗಳಾದ ಸಯದ್ ಅಹ್ಮದ್, ಮುಜಾಯಿದ್ ಪಾಷ,ಮಹಮ್ಮದ್ ನಯಾಜ್,ಸಯದ್ ಖುಸುರು,ಸೈಫುಲ್ಲಾನವೀದ್ ಅಕ್ತರ್,ಷೇಕ್ ಸೊರಾಜ್, ನಗರ ಸಭೆ ಮಾಜಿ ಸದಸ್ಯ ಸಾದೀಕ್ ಪಾಷ,ಅಲ್ ಅಮೀನ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲೆ ಶಮೀಮ್ ಸಲ್ಮಾ,ಅಲ್ ಅಮೀನ್ ಪಿ.ಯು ಕಾಲೇಜಿನ ಪ್ರಾಂಶುಪಾಲೆ ಮೊಹಸಿನಾ ಬೇಗಂ,ಪ್ರೋಫೆಸರ್ ರೊಮಾನಿ,
ಉಪನ್ಯಾಸಕರುಗಳಾದ ಖಲೀಂ ಉಲ್ ಶಾದ್,
ಮಹಮ್ಮದ್ ಯೂನಸ್, ಶಾಹವಾನ್ ಅಜುಂ,ಅಲ್ ಅಮೀನ್ ಕಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕ ಜಾಬೀರ್ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *