
ದಿನಾಂಕ 19-11, 2023ರ ಭಾನುವಾರದಂದು ಮಕ್ಕಳ ಕೂಟ ಮೈದಾನದ ಸಭಾಂಗಣದಲ್ಲಿ ಬೆಂಗಳೂರು
ನಗೆಕೂಟದ ಸಂಘವು ಕನ್ನಡ. ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತಾಡಿದ ಡಾ. ಶೀಲಾ ದೇವಿ ಎಸ್ ಮಳೀಮಠ ಪ್ರಾಂಶುಪಾಲರು ಬಸವೇಶ್ವರ ವಾಣಿಜ್ಯ ಕೂವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರಿನ ನಗೆಕೂಟದ ಸದಸ್ಯರು ನಗೆಯ ಮೂಲಕ ಜೀವನವನ್ನು ಆರೋಗ್ಯಯುಕ್ತವಾಗಿ ಉತ್ಸಾಹದಿಂದ ಕಳೆಯುತ್ತಿರುವುದು ಗಮನಾರ್ಹಇಂತಹ ಕೂಟಗಳಿಂದಲೇ ಬದುಕು ಶ್ರೀಮಂತವಾಗಲು ಸಾಧ್ಯ ಎಂದು ಶ್ಲಾಘನೆ ಮಾಡಿದರು. ಕನ್ನಡ ಕವಿಗಳಾದ ಬೇಂದ್ರೆ ಕುವೆಂಪು ಜಿಎಸ್ಎಸ್ ಕವಿತೆಗಳ ಜೀವನ ಪ್ರೀತಿಯ ಕವಿತೆಳಿಂದ ಹಿರಿಯ ನಾಗರಿಕರನ್ನು ಉತ್ತೇಜಿಸಿದರು. ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಪ್ರೊಸದಾಶಿವಯ್ಯ ನಿವೃತ್ತ ಪೋಲೀಸ್ ಅಧಿಕಾರಿ ಸ್ವಾಮಿ ಗೌಡ ಸಂಘಟಕರು ಶ್ರೀಮತಿ ನೇತ್ರ – ಜ್ಯೂನಿಯರ ರೂಪದ ಆನಂದ ಆರ್ಯನ ಅಪ್ಪು ಇತರರು ಉಪಸ್ಥಿತರಿದ್ದರು. ಗಣ್ಯರ ಸಮ್ಮಖದಲ್ಲಿ ಮಳಿಮಠರನ್ನು ಸನ್ಮಾನಿಸಲಾಯ್ತು