ನಾಡಿನ ಪ್ರಖ್ಯಾತ ಕರ್ನಾಟಕ ಸಂಗೀತಗಾರರು ಮತ್ತು ಝೀ ಟಿವಿಯ ಸ ರಿ ಗ ಮ ಪ ಕಾರ್ಯಕ್ರಮದಲ್ಲಿ ಮಾರ್ಗದರ್ಶಿಗಳಾಗಿರುವ ಗುರು ಡಾ. ಸುಚೇತನ್ ರಂಗಸ್ವಾಮಿ ಅವರ ಶಿಷ್ಯರಾಗಿರುತ್ತಾರೆ. ಭಾರ್ಗವ್ ಅವರು ಅಪ್ರತಿಮ ಕರ್ನಾಟಕ ಸಂಗೀತಗಾರರಾದ, ಕರ್ನಾಟಕ ಕಲಾಶ್ರೀ ಪುಸ್ತಕಂ ರಾಮ ರವರ ಮಾರ್ಗದರ್ಶನವೂ ಪಡೆಯುತ್ತಿದ್ದಾರೆ. 2020ರ ಗಣರಾಜ್ಯೋತ್ಸವದ ಶಿಬಿರದಲ್ಲಿ (RDC) ಭಾಗವಹಿಸಿ, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದರು. ಭಾರ್ಗವ್ ಅವರ ಸಂಯೋಜನೆಯ ‘ನವ್ ಭಾರತ್’, RDC 2020 ರಲ್ಲಿ ‘ಅತ್ಯುತ್ತಮ ಹಾಡು’ ವಿಭಾಗದಲ್ಲಿ ಚಿನ್ನದ ಪದಕವನ್ನು ನೀಡಲಾಯಿತು. ಭಾರ್ಗವ್ ಸಂಯೋಜನೆಯನ್ನು ನಮ್ಮ ಸನ್ಮಾನ್ಯರಾದ, ರಕ್ಷಣಾ ಸಚಿವ ಶ್ರೀ. ರಾಜನಾಥ್ ಸಿಂಗ್ ಶ್ಲಾಘಿಸಿ, ಹಾಡಿನ ಉತ್ತಮ ವ್ಯವಸ್ಥೆಗಳು, ವಾದ್ಯಘೋಷ್ಟಿ ಮತ್ತು ಗಾಯನ ಸಂಯೋಜನೆಗಾಗಿ ‘ಮೋತಿ’, ಅಂದರೆ ಮುತ್ತು ಎಂದು ಹೆಸರಿಸಿದರು. ಭಾರ್ಗವ್ ನಟನೆ ಮತ್ತು ನಿರ್ದೇಶನದ ಮೂಲಕ ತಮ್ಮ ಕಲಾತ್ಮಕ ಗಡಿಗಳನ್ನು ತಳ್ಳುತ್ತಿದ್ದಾರೆ. ಅವರು ಭಾರತದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಶ್ರೀ ಟಿ ಎಸ್ ನಾಗಾಭರಣ ರವರ ನೇತೃತ್ವದ, ದೇಶದ ಅತ್ಯುತ್ತಮ ನಾಟಕ ತಂಡಗಳಲ್ಲಿ ಒಂದಾದ “ಬೆನಕ” ದಲ್ಲಿ ಭಾಗವಾಗಿದ್ದಾರೆ. ಭಾರ್ಗವ್ ಅವರು ತಮ್ಮ ಶಾಲಾ ದಿನಗಳಿಂದಲೂ ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಅವರ ‘ನಮ್ಮೂರ್ ಕುಂದಾಪ್ರ’ ಹಾಡಿನ ಸಂಯೋಜನೆ ಮತ್ತು ಗಾಯನವು ಕುಂದಾಪುರದ ಜನಸಾಮಾನ್ಯರಲ್ಲಿ ಅವರಿಗೆ ಹೆಸರನ್ನು ತಂದುಕೊಟ್ಟಿತು. ಅಲ್ಲಿ ಅವರ ಈ ಹಾಡನ್ನು 20+ ಶಾಲೆಗಳಲ್ಲಿ ‘ವಿಶ್ವ ಕುಂದಾಪ್ರ ದಿನಾಚರಣೆ’ ಆಚರಿಸಲು ಹಾಡಲಾಯಿತು. ಭಾರ್ಗವ್ ಅವರ ತಾಜಾ ಗಾಯನ ಕೌಶಲ್ಯಗಳು ಅವರನ್ನು ಜನಪ್ರಿಯ ಯುವ ಪ್ರಮುಖ ಗಾಯಕರಲ್ಲಿ ಒಬ್ಬರನ್ನಾಗಿ ಮಾಡಿದೆ. ದೇಶದ ಅದ್ಭುತ ಸಂಗೀತಗಾರ ಮತ್ತು ಜನಪ್ರಿಯ ಸಂಯೋಜಕರಾದ ಶ್ರೀ ಪ್ರವೀಣ್ ಡಿ ರಾವ್ ನೇತೃತ್ವದ ‘ಅಂತರ್ಧ್ವನಿ’ ಕಾಯರ್ನಲ್ಲಿ ಭಾರ್ಗವ್ ರವರು ಮುಖ್ಯ ಗಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ. ಶ್ರೀ ಪ್ರವೀಣ್ ಡಿ ರಾವ್ ರವರೊಂದಿಗೆ ಭಾರ್ಗವ್ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ, ಭಾರ್ಗವ್ ಹೆಚ್ ಸಿ ಅವರು, ದೇಶದಲ್ಲಿ ಬಹಳಷ್ಟು ಖ್ಯಾತಿ ಪಡೆದಿರುವಂತಹ ಗಾಯನ ಸ್ಪರ್ಧೆ, ರೇಡಿಯೋ ಸಿಟಿ ಸೂಪರ್ ಸಿಂಗರ್ ಸೀಸನ್ 15 ರ ವಿಜೇತರಾದರು ಮತ್ತು ಅವರ ಗೆಲುವಿಗಾಗಿ, ಸ್ಯಾಂಡಲ್‌ವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕರಾದ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರು ‘ಮ್ಯಾಟಿನಿ’ ಚಲನಚಿತ್ರಕ್ಕಾಗಿ ತಮ್ಮ ಮೊದಲ ಹಿನ್ನೆಲೆ ಗಾಯನದ ಅವಕಾಶವನ್ನು ನೀಡಿದರು.

ಭಾರ್ಗವ್ ಅವರು ತಮ್ಮ ಸಂಗೀತ, ನಾಟಕಗಳು ಮತ್ತು ಸಂಗೀತ ಕಚೇರಿಗಳ ಮೂಲಕ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಜನರನ್ನು ರಂಜಿಸಲು ಮುಂದುವರಿಸಿದ್ದಾರೆ.

ಅವರ ಸಾಧನೆಗಳಿಗೆ ಅಭಿನಂದನೆಗಳು!

Leave a Reply

Your email address will not be published. Required fields are marked *