ಹುಬ್ಬಳ್ಳಿ:-ನಿಜವಾದ ನಿರ್ಧಾರವನ್ನು ವಿದ್ಯಾರ್ಥಿ ವಯಸ್ಸಿನಲ್ಲಿ ತೆಗೆದುಕೊಳ್ಳಬೇಕು. ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯಿಟ್ಟುಕೊಳ್ಳಬೇಕು. ಆ ಗುರಿಯೆಡೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಹೇಳಿದರು.
ಹುಬ್ಬಳ್ಳಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕನ್ನಡ ಹಬ್ಬ ನುಡಿ ಮೊಳಗಲಿ ಕನ್ನಡದ ತರಂಗ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ರಥದ ಮೆರವಣಿಗೆಗೆ ಚಾಲನೆ ನೀಡಿ ಮೆರವಣಿಗೆಯಲ್ಲಿ ಸಂಸ್ಕೃತಿಕ ಕಲಾತಂಡಗಳೊಂದಿಗೆ ಡೊಳ್ಳು ಕುಣಿತ, ಕರಡಿ ಮಜಲು, ಗೊಂಬೆ ಕುಣಿತ, ಸಮರ ಕಲೆ ಮೃದಂಗಗಳೊಂದಿಗೆ ವೇದಿಕೆಗೆ ಆಗಮಿಸಿ
ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ತಂದೆ ತಾಯಿ, ಪಾಲಕರಿಲ್ಲದ 22 ಮಕ್ಕಳಿಗೆ ಇಂದು ಶಿಕ್ಷಣ ನೀಡುತ್ತಿರುವೆ. ಹೃದಯ ಗೆಲ್ಲುವರರಿಗಿಂತ ಹೃದಯ ಕಾಪಾಡುವರರು ದೊಡ್ಡವರು. ಬಿಳಿ ಚಾಪಿಸ್ ವಿದ್ಯೆ ಕೊಟ್ಟರೆ, ಬಿಳಿ ಬಟ್ಟೆ ಆರೋಗ್ಯ ಕೊಡುತ್ತದೆ. ಬೈಯಿಸಕೊಳ್ಳೊಕೆ ರೆಡಿಯಾಗಿರಬೇಕು. ಆಗ ಜೀವನದಲ್ಲಿ ಏನಾದರೂ ಸಾಧಿಸಬಹುದು. ನಿಮ್ಮ ವಿಚಾರಗಳು ದೊಡ್ಡದಾಗಿರಲಿ. ನಿಮ್ಮನ್ನು ನೀವು ಗುರುತಿಸಿಕೊಳ್ಳಬೇಕು.ಬಡವರ ಮನಸ್ಸಿನಲ್ಲಿ ಹೆಸರು ಉಳಿಸಿಕೊಳ್ಳುವ ಕೆಲಸ ಮಾಡಿ. ನಿಮ್ಮ ಮೇಲೆ ನೀವು ನಂಬಿಕೆಯಿಡಿ. ಪರೀಕ್ಷೆಯಲ್ಲಿ ಫೇಲಾದರೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ.ತಂದೆ ತಾಯಿಯನ್ನು ಕಳೆದುಕೊಂಡು, 12 ತರಗತಿಯಲ್ಲಿ ಇರುವಾಗಲೇ ಕೋಚಿಂಗ್ ಸೆಂಟರ್ ಆರಂಭಿಸಿ ಜೀವನ ಕಂಡುಕೊಂಡೆ. 17 ಸರ್ವೇ ವರದಿ ಪ್ರಕಾರ ಚುನಾವಣೆಯಲ್ಲಿ ಸೋಲತ್ತೀನಿ ಎಂದು ಹೇಳಿದರೂ,
23 ದಿನದಲ್ಲಿ ಚುನಾವಣೆಯಲ್ಲಿ ಗೆದ್ದು ಬಂದೆ ಎಂದು ತಮ್ಮ ಜೀವನಾನುಭವವನ್ನು ಹಂಚಿಕೊಂಡರು. ಜೀವನದಲ್ಲಿ ಏನು ಮಾಡಬೇಕು ಎಂದು ಮನವರಿಕೆ ಮಾಡಿಕೊಳ್ಳಿ. ಬದುಕಿನಲ್ಲಿ ಏನಾದರೂ ಒಂದು ಸಾಧನೆ ಮಾಡಲು ಅಣಿಯಾಗಬೇಕು. ಪ್ರಯತ್ನಕ್ಕೆ ಒಂದಲ್ಲ ಒಂದು ದಿನ ಫಲ ಸಿಕ್ಕೆ ಸಿಗುತ್ತದೆ. ದೊಡ್ಡದಾಗಿ ಕನಸು ಕಾಣಿ, ಅದನ್ನು ನನಸು ಮಾಡಿಕೊಳ್ಳಬೇಕು. ಜೀವನದಲ್ಲಿ ಬೆಳೆಯುತ್ತೇನೆ ಎಂದು ಕನಸು ಕಾಣಿರಿ. ಹೆಚ್ಚಿನ ವಿದ್ಯಾಭ್ಯಾಸ ಮಾಡದ ಡಿ.ವಿ.ಜಿ, ಶೇಕ್ಸ್‌ಪಿಯರ್‌ ಅವರ ಕೃತಿಗಳು ಇಂದು ಪಠ್ಯಗಳಾಗಿವೆ. ವಿಭಿನ್ನವಾದ ಯೋಚನಾ ಲಹರಿಯಿಂದ ಓದಿ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ಕಳೆಯಬೇಡಿ. ಓದಿನ ಕಡೆ ಹೆಚ್ಚಿನ ಗಮನಹರಿಸಿ. ಜೀವನದಲ್ಲಿ ಸೋಲೋಕು ರೆಡಿಯಾಗಿರಬೇಕು. ಸಕಾರಾತ್ಮಕವಾಗಿ ಚಿಂತನೆ ಮಾಡಿ. ಅಪ್ಪ ಅಮ್ಮಂದಿರ ಮರ್ಯಾದೆಯನ್ನು ಬೀದಿಗೆ ತರಬೇಡಿ. ಬಡವರಿಗೆ ಸಹಾಯ ಮಾಡಿ. ಒಳ್ಳೆಯತನ ನಿಮ್ಮನ್ನು ಗೆಲ್ಲಿಸುತ್ತದೆ ಎಂದು ಅನುಭವದ ಮಾತುಗಳನ್ನಾಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಆನಂದಪ್ಪ ಬಿ.ಎಚ್.ಜೋಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅನಿರುದ್ಧ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ಸಹ ವೈದ್ಯಕೀಯ ಅಧೀಕ್ಷಕರಾದ ಡಾ.ರಾಜಶೇಖರ ದ್ಯಾಬೇರಿ ಸ್ವಾಗತಿಸಿದರು. ದರ್ಶನ ಹಾಗೂ ವಿನುತಾ ನಿರೂಪಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಸಹನ ಕೆ.ಎಸ್ ವಂದಿಸಿದರು.
ಡಾ.ಪುನೀತ್ ರಾಜಕುಮಾರ್ ಅವರು ನಟಿಸಿದ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತಿ ಮತ್ತೆ ಹೇಳುತೈತಿ ನೀನೇ ರಾಜಕುಮಾರ ಹಾಡಿಗೆ ವಿದ್ಯಾರ್ಥಿಗಳು ದನಿಗೂಡಿಸಿದರು.
ಈ ಕಾರ್ಯಕ್ರಮದಲ್ಲಿ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನೆ,ಪ್ರಾಚಾರ್ಯ ಡಾ. ಈಶ್ವರ ಹೊಸಮನಿ,ಆರ್‌ಎಂಓ ಡಾ.ಸಿದ್ದೇಶ್ವರ ಕಡಕೋಳ, ಸಾಮಾನ್ಯ ಚಟುವಟಿಕೆಗಳ ಕಾರ್ಯದರ್ಶಿ ಡಾ.ಎಸ್ ಎಸ್ ಕಮ್ಮಾರ ,ಡಾ.ಕೆ ಎಸ್ ಕಮ್ಮಾರ್, ಕಾರ್ಯದರ್ಶಿಗಳಾದ ಸುಹನಾ ಕೆ ಎಸ್ , ಜೆ.ವಿನಾಯಕ್ ಇತರರು ಇದ್ದರು.

ನುಡಿ ಮೃದಂಗ ಮೊಳಗಲಿ ಕನ್ನಡದ ತರಂಗ ಕಾರ್ಯಕ್ರಮಕ್ಕೆ ಚಾಲನೆ:ಪ್ರದೀಪ ಈಶ್ವರ


ಹುಬ್ಬಳ್ಳಿ:-ನಿಜವಾದ ನಿರ್ಧಾರವನ್ನು ವಿದ್ಯಾರ್ಥಿ ವಯಸ್ಸಿನಲ್ಲಿ ತೆಗೆದುಕೊಳ್ಳಬೇಕು. ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯಿಟ್ಟುಕೊಳ್ಳಬೇಕು. ಆ ಗುರಿಯೆಡೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಹೇಳಿದರು.
ಹುಬ್ಬಳ್ಳಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕನ್ನಡ ಹಬ್ಬ ನುಡಿ ಮೊಳಗಲಿ ಕನ್ನಡದ ತರಂಗ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ರಥದ ಮೆರವಣಿಗೆಗೆ ಚಾಲನೆ ನೀಡಿ ಮೆರವಣಿಗೆಯಲ್ಲಿ ಸಂಸ್ಕೃತಿಕ ಕಲಾತಂಡಗಳೊಂದಿಗೆ ಡೊಳ್ಳು ಕುಣಿತ, ಕರಡಿ ಮಜಲು, ಗೊಂಬೆ ಕುಣಿತ, ಸಮರ ಕಲೆ ಮೃದಂಗಗಳೊಂದಿಗೆ ವೇದಿಕೆಗೆ ಆಗಮಿಸಿ
ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ತಂದೆ ತಾಯಿ, ಪಾಲಕರಿಲ್ಲದ 22 ಮಕ್ಕಳಿಗೆ ಇಂದು ಶಿಕ್ಷಣ ನೀಡುತ್ತಿರುವೆ. ಹೃದಯ ಗೆಲ್ಲುವರರಿಗಿಂತ ಹೃದಯ ಕಾಪಾಡುವರರು ದೊಡ್ಡವರು. ಬಿಳಿ ಚಾಪಿಸ್ ವಿದ್ಯೆ ಕೊಟ್ಟರೆ, ಬಿಳಿ ಬಟ್ಟೆ ಆರೋಗ್ಯ ಕೊಡುತ್ತದೆ. ಬೈಯಿಸಕೊಳ್ಳೊಕೆ ರೆಡಿಯಾಗಿರಬೇಕು. ಆಗ ಜೀವನದಲ್ಲಿ ಏನಾದರೂ ಸಾಧಿಸಬಹುದು. ನಿಮ್ಮ ವಿಚಾರಗಳು ದೊಡ್ಡದಾಗಿರಲಿ. ನಿಮ್ಮನ್ನು ನೀವು ಗುರುತಿಸಿಕೊಳ್ಳಬೇಕು.ಬಡವರ ಮನಸ್ಸಿನಲ್ಲಿ ಹೆಸರು ಉಳಿಸಿಕೊಳ್ಳುವ ಕೆಲಸ ಮಾಡಿ. ನಿಮ್ಮ ಮೇಲೆ ನೀವು ನಂಬಿಕೆಯಿಡಿ. ಪರೀಕ್ಷೆಯಲ್ಲಿ ಫೇಲಾದರೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ.ತಂದೆ ತಾಯಿಯನ್ನು ಕಳೆದುಕೊಂಡು, 12 ತರಗತಿಯಲ್ಲಿ ಇರುವಾಗಲೇ ಕೋಚಿಂಗ್ ಸೆಂಟರ್ ಆರಂಭಿಸಿ ಜೀವನ ಕಂಡುಕೊಂಡೆ. 17 ಸರ್ವೇ ವರದಿ ಪ್ರಕಾರ ಚುನಾವಣೆಯಲ್ಲಿ ಸೋಲತ್ತೀನಿ ಎಂದು ಹೇಳಿದರೂ,
23 ದಿನದಲ್ಲಿ ಚುನಾವಣೆಯಲ್ಲಿ ಗೆದ್ದು ಬಂದೆ ಎಂದು ತಮ್ಮ ಜೀವನಾನುಭವವನ್ನು ಹಂಚಿಕೊಂಡರು. ಜೀವನದಲ್ಲಿ ಏನು ಮಾಡಬೇಕು ಎಂದು ಮನವರಿಕೆ ಮಾಡಿಕೊಳ್ಳಿ. ಬದುಕಿನಲ್ಲಿ ಏನಾದರೂ ಒಂದು ಸಾಧನೆ ಮಾಡಲು ಅಣಿಯಾಗಬೇಕು. ಪ್ರಯತ್ನಕ್ಕೆ ಒಂದಲ್ಲ ಒಂದು ದಿನ ಫಲ ಸಿಕ್ಕೆ ಸಿಗುತ್ತದೆ. ದೊಡ್ಡದಾಗಿ ಕನಸು ಕಾಣಿ, ಅದನ್ನು ನನಸು ಮಾಡಿಕೊಳ್ಳಬೇಕು. ಜೀವನದಲ್ಲಿ ಬೆಳೆಯುತ್ತೇನೆ ಎಂದು ಕನಸು ಕಾಣಿರಿ. ಹೆಚ್ಚಿನ ವಿದ್ಯಾಭ್ಯಾಸ ಮಾಡದ ಡಿ.ವಿ.ಜಿ, ಶೇಕ್ಸ್‌ಪಿಯರ್‌ ಅವರ ಕೃತಿಗಳು ಇಂದು ಪಠ್ಯಗಳಾಗಿವೆ. ವಿಭಿನ್ನವಾದ ಯೋಚನಾ ಲಹರಿಯಿಂದ ಓದಿ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ಕಳೆಯಬೇಡಿ. ಓದಿನ ಕಡೆ ಹೆಚ್ಚಿನ ಗಮನಹರಿಸಿ. ಜೀವನದಲ್ಲಿ ಸೋಲೋಕು ರೆಡಿಯಾಗಿರಬೇಕು. ಸಕಾರಾತ್ಮಕವಾಗಿ ಚಿಂತನೆ ಮಾಡಿ. ಅಪ್ಪ ಅಮ್ಮಂದಿರ ಮರ್ಯಾದೆಯನ್ನು ಬೀದಿಗೆ ತರಬೇಡಿ. ಬಡವರಿಗೆ ಸಹಾಯ ಮಾಡಿ. ಒಳ್ಳೆಯತನ ನಿಮ್ಮನ್ನು ಗೆಲ್ಲಿಸುತ್ತದೆ ಎಂದು ಅನುಭವದ ಮಾತುಗಳನ್ನಾಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಆನಂದಪ್ಪ ಬಿ.ಎಚ್.ಜೋಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅನಿರುದ್ಧ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ಸಹ ವೈದ್ಯಕೀಯ ಅಧೀಕ್ಷಕರಾದ ಡಾ.ರಾಜಶೇಖರ ದ್ಯಾಬೇರಿ ಸ್ವಾಗತಿಸಿದರು. ದರ್ಶನ ಹಾಗೂ ವಿನುತಾ ನಿರೂಪಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಸಹನ ಕೆ.ಎಸ್ ವಂದಿಸಿದರು.
ಡಾ.ಪುನೀತ್ ರಾಜಕುಮಾರ್ ಅವರು ನಟಿಸಿದ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತಿ ಮತ್ತೆ ಹೇಳುತೈತಿ ನೀನೇ ರಾಜಕುಮಾರ ಹಾಡಿಗೆ ವಿದ್ಯಾರ್ಥಿಗಳು ದನಿಗೂಡಿಸಿದರು.
ಈ ಕಾರ್ಯಕ್ರಮದಲ್ಲಿ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನೆ,ಪ್ರಾಚಾರ್ಯ ಡಾ. ಈಶ್ವರ ಹೊಸಮನಿ,ಆರ್‌ಎಂಓ ಡಾ.ಸಿದ್ದೇಶ್ವರ ಕಡಕೋಳ, ಸಾಮಾನ್ಯ ಚಟುವಟಿಕೆಗಳ ಕಾರ್ಯದರ್ಶಿ ಡಾ.ಎಸ್ ಎಸ್ ಕಮ್ಮಾರ ,ಡಾ.ಕೆ ಎಸ್ ಕಮ್ಮಾರ್, ಕಾರ್ಯದರ್ಶಿಗಳಾದ ಸುಹನಾ ಕೆ ಎಸ್ , ಜೆ.ವಿನಾಯಕ್ ಇತರರು ಇದ್ದರು.

Leave a Reply

Your email address will not be published. Required fields are marked *